<p><strong>ಹೊಳೆನರಸೀಪುರ</strong>: ಇಲ್ಲಿನ ನ್ಯಾಯಾಲಯದ ಹೊರ ಆವರಣದಲ್ಲಿರುವ ಶೌಚಾಲಯದಲ್ಲಿ ಗಂಡನೇ ತನ್ನಹೆಂಡತಿಯ ಕತ್ತನ್ನು ಕೊಯ್ದಿದ್ದು, ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಸಂತ್ರಸ್ತೆಮೃತಪಟ್ಟಿದ್ದಾರೆ.</p>.<p>ಶನಿವಾರ ಮಧ್ಯಾಹ್ನ 12.30 ಕ್ಕೆ ಈ ಘಟನೆ ನಡೆದಿದೆ. ಇಲ್ಲಿನ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಹಾಕಿಕೊಂಡಿದ್ದ ಗಂಡ– ಹೆಂಡತಿಗೆ ಮುಂದಿನ ದಿನಾಂಕ ನೀಡಿ ಕಳುಹಿಸಲಾಗಿತ್ತು. ಹೆಂಡತಿ ತನ್ನ 2 ವರ್ಷದ ಪುತ್ರಿಯೊಂದಿಗೆ ಶೌಚಾಲಯಕ್ಕೆ ತೆರಳಿದಾಗ, ಹಿಂದಿನಿಂದ ಹೋದ ಗಂಡ, ಹೆಂಡತಿಯ ಕತ್ತು ಕೊಯ್ದಿದ್ದಾನೆ.</p>.<p>ತಾಲ್ಲೂಕಿನ ತಟ್ಟೇಕೆರೆ ಗ್ರಾಮದ ಶಿವಕುಮಾರ ಎಂಬಾತ ಚನ್ನಾರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಸಮೀಪದ ಚೈತ್ರಾ ಎಂಬ ಯುವತಿಯನ್ನು 6 ವರ್ಷಗಳ ಹಿಂದೆ ಮದುವೆ ಆಗಿದ್ದು, ಇವರಿಗೆ 2 ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 3 ವರ್ಷಗಳಿಂದ ಗಂಡ– ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು.</p>.<p>ಗಂಡ ಶಿವಕುಮಾರ ಹೆಂಡತಿಗೆ ವರದಕ್ಷಿಣೆ ಕಿರುಕುಳು ನೀಡುತ್ತಿದ್ದ ಕಾರಣ ಚೈತ್ರಾ ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಬೆಂಗಳೂರಿನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ವಿಚ್ಚೇದನಕ್ಕೆ ಅರ್ಜಿ ಹಾಕಿಕೊಂಡಿದ್ದರು ಎಂದು ಚೈತ್ರಾ ಅವರ ಚಿಕ್ಕಪ್ಪ ಜವರೇಗೌಡ ತಿಳಿಸಿದ್ದಾರೆ.</p>.<p>ಇವರ ಅರ್ಜಿ ವಿಚಾರಣೆ ಶನಿವಾರದ ಲೋಕ್ ಅದಾಲತ್ನಲ್ಲಿ ರಾಜಿ ಸಂಧಾನಕ್ಕೆ ತೆಗೆದುಕೊಳ್ಳಲಾಗಿತ್ತು. ನ್ಯಾಯಾಲಯ ಇವರ ವಿಚಾರಣೆ ನಡೆಸಿ, ಮುಂದಿನ ದಿನಾಂಕ ನೀಡಿ ಕಳುಹಿಸಿತ್ತು. ನ್ಯಾಯಾಲಯದಿಂದ ಹೊರಬಂದು ಚೈತ್ರಾ ಶೌಚಾಲಯಕ್ಕೆ ಹೋದಾಗ ಗಂಡ ಶಿವಕುಮಾರ್ ಈ ಕೃತ್ಯ ಎಸಗಿದ್ದಾನೆ. ಓಡಿಹೋಗುತ್ತಿದ್ದ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು ಬಂಧಿಸಿದ್ದಾರೆ.</p>.<p><a href="https://www.prajavani.net/entertainment/other-entertainment/coffee-nadu-chandu-should-go-to-bigg-boss-house-campaign-launched-962847.html" itemprop="url">ಕಾಫಿ ನಾಡು ಚಂದು ‘ಬಿಗ್ಬಾಸ್‘ ಮನೆಗೆ ಹೋಗಬೇಕು: ಅಭಿಯಾನ ಶುರು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ</strong>: ಇಲ್ಲಿನ ನ್ಯಾಯಾಲಯದ ಹೊರ ಆವರಣದಲ್ಲಿರುವ ಶೌಚಾಲಯದಲ್ಲಿ ಗಂಡನೇ ತನ್ನಹೆಂಡತಿಯ ಕತ್ತನ್ನು ಕೊಯ್ದಿದ್ದು, ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಸಂತ್ರಸ್ತೆಮೃತಪಟ್ಟಿದ್ದಾರೆ.</p>.<p>ಶನಿವಾರ ಮಧ್ಯಾಹ್ನ 12.30 ಕ್ಕೆ ಈ ಘಟನೆ ನಡೆದಿದೆ. ಇಲ್ಲಿನ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಹಾಕಿಕೊಂಡಿದ್ದ ಗಂಡ– ಹೆಂಡತಿಗೆ ಮುಂದಿನ ದಿನಾಂಕ ನೀಡಿ ಕಳುಹಿಸಲಾಗಿತ್ತು. ಹೆಂಡತಿ ತನ್ನ 2 ವರ್ಷದ ಪುತ್ರಿಯೊಂದಿಗೆ ಶೌಚಾಲಯಕ್ಕೆ ತೆರಳಿದಾಗ, ಹಿಂದಿನಿಂದ ಹೋದ ಗಂಡ, ಹೆಂಡತಿಯ ಕತ್ತು ಕೊಯ್ದಿದ್ದಾನೆ.</p>.<p>ತಾಲ್ಲೂಕಿನ ತಟ್ಟೇಕೆರೆ ಗ್ರಾಮದ ಶಿವಕುಮಾರ ಎಂಬಾತ ಚನ್ನಾರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಸಮೀಪದ ಚೈತ್ರಾ ಎಂಬ ಯುವತಿಯನ್ನು 6 ವರ್ಷಗಳ ಹಿಂದೆ ಮದುವೆ ಆಗಿದ್ದು, ಇವರಿಗೆ 2 ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 3 ವರ್ಷಗಳಿಂದ ಗಂಡ– ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು.</p>.<p>ಗಂಡ ಶಿವಕುಮಾರ ಹೆಂಡತಿಗೆ ವರದಕ್ಷಿಣೆ ಕಿರುಕುಳು ನೀಡುತ್ತಿದ್ದ ಕಾರಣ ಚೈತ್ರಾ ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಬೆಂಗಳೂರಿನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ವಿಚ್ಚೇದನಕ್ಕೆ ಅರ್ಜಿ ಹಾಕಿಕೊಂಡಿದ್ದರು ಎಂದು ಚೈತ್ರಾ ಅವರ ಚಿಕ್ಕಪ್ಪ ಜವರೇಗೌಡ ತಿಳಿಸಿದ್ದಾರೆ.</p>.<p>ಇವರ ಅರ್ಜಿ ವಿಚಾರಣೆ ಶನಿವಾರದ ಲೋಕ್ ಅದಾಲತ್ನಲ್ಲಿ ರಾಜಿ ಸಂಧಾನಕ್ಕೆ ತೆಗೆದುಕೊಳ್ಳಲಾಗಿತ್ತು. ನ್ಯಾಯಾಲಯ ಇವರ ವಿಚಾರಣೆ ನಡೆಸಿ, ಮುಂದಿನ ದಿನಾಂಕ ನೀಡಿ ಕಳುಹಿಸಿತ್ತು. ನ್ಯಾಯಾಲಯದಿಂದ ಹೊರಬಂದು ಚೈತ್ರಾ ಶೌಚಾಲಯಕ್ಕೆ ಹೋದಾಗ ಗಂಡ ಶಿವಕುಮಾರ್ ಈ ಕೃತ್ಯ ಎಸಗಿದ್ದಾನೆ. ಓಡಿಹೋಗುತ್ತಿದ್ದ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು ಬಂಧಿಸಿದ್ದಾರೆ.</p>.<p><a href="https://www.prajavani.net/entertainment/other-entertainment/coffee-nadu-chandu-should-go-to-bigg-boss-house-campaign-launched-962847.html" itemprop="url">ಕಾಫಿ ನಾಡು ಚಂದು ‘ಬಿಗ್ಬಾಸ್‘ ಮನೆಗೆ ಹೋಗಬೇಕು: ಅಭಿಯಾನ ಶುರು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>