ಹಿರೇಕೆರೂರು ತಾಲ್ಲೂಕಿನ ನೀಡನೇಗಿಲು ಗ್ರಾಮದಲ್ಲಿ ಸ್ಮಾರ್ಟ್ ಕೃಷಿಯ ಮೂಲಕ ಹನುಮಂತಪ್ಪ ದೊಡ್ಡೇರಿ ಸೇವಂತಿಗೆ ಬೆಳೆದಿದ್ದಾರೆ
140 ಬಲ್ಬ್ಗಳನ್ನು ಹಾಕಿ ಕೃತಕ ಹಗಲು ಸೃಷ್ಟಿ ಸ್ಮಾರ್ಟ್ ಪುಷ್ಪಕೃಷಿಯತ್ತ ವಾಲಿರುವ ರೈತ ಪ್ರತಿದಿನ ₹ 15 ಸಾವಿರ ಆದಾಯ
6 ತಿಂಗಳಲ್ಲಿ ₹ 5 ಲಕ್ಷ ಆದಾಯ
‘ಹಾವೇರಿ ಜಿಲ್ಲೆಯಲ್ಲಿ ಸೇವಂತಿಗೆಯನ್ನು ಲೈಟ್ ಹಾಕಿ ಬೆಳೆದ ಪ್ರಥಮ ರೈತ ನಾನೇ. ಈ ಲೈಟ್ ಕೃಷಿ ಸ್ಥಳೀಯ ರೈತರಿಗೆ ಆಶ್ಚರ್ಯ ತಂದಿದೆ. ರೈತರು ಸಂಪ್ರದಾಯಿಕ ಬೆಳೆಗಳಿಂದ ಹೊರಬರಬೇಕು. ಬೇರೆ ಬೇರೆ ರೀತಿಯ ಕೃಷಿ ಮಾಡಬೇಕು. ಈ ಕೃಷಿ ಆರು ತಿಂಗಳ ಕಾಲಾವಧಿ ಹೊಂದಿದೆ. 30 ಗುಂಟೆ ಜಮೀನಿನಲ್ಲಿ ಆರು ತಿಂಗಳಲ್ಲಿ ₹ 5 ಲಕ್ಷ ಆದಾಯ ಗಳಿಸಿದ್ದೇನೆ’ ಎಂದು ಯುವ ರೈತ ಹನುಮಂತಪ್ಪ ದೊಡ್ಡೇರಿ ‘ಪ್ರಜಾವಾಣಿ’ಗೆ ತಿಳಿಸಿದರು