<p><strong>ಹಾನಗಲ್:</strong> ತಾಲ್ಲೂಕಿನಲ್ಲಿ ಅಡಿಕೆ ತೋಟಗಳಿಗೆ ಕೆಂಪು ನುಸಿ ಮತ್ತು ಹಳದಿ ನುಸಿ ರೋಗ ಬಾಧೆ ಉಲ್ಬಣಸಿದ್ದು, ಹತೋಟಿಗೆ ತೋಟಗಾರಿಕೆ ಇಲಾಖೆ ಕ್ರಮಗಳನ್ನು ತಿಳಿಸಿದೆ.</p>.<p>‘ಬೇಸಿಗೆಯಲ್ಲಿ ಸಾಮಾನ್ಯವಾಗಿ ಅಡಿಕೆ ಗಿಡಕ್ಕೆ ಬಾಧಿಸುವ ಕೀಟಗಳು ಈ ವರ್ಷದ ಅತಿಯಾದ ತಾಪಮಾನ ಮತ್ತು ಕಡಿಮೆ ಆರ್ದ್ರತೆಯಿಂದ ತೋಟಗಳಿಗೆ ಮಾರಕವಾಗಿ ವ್ಯಾಪಿಸುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದ್ದಾರೆ.</p>.<p>ಲಕ್ಷಣಗಳು: ಹುಳುಗಳು ಎಲೆಯ ಹಿಂಭಾಗದಿಂದ ರಸ ಹೀರುವುದರಿಂದ ಮೊದಲಿಗೆ ಎಲೆಗಳು ಹಳದಿಯಾಗಿ ಕಾಣಿಸುತ್ತವೆ. ನಂತರ ಸಂಪೂರ್ಣವಾಗಿ ಒಣಗಿ ಹೋಗುತ್ತವೆ. ಕೆಳಗಿನ ಎಲೆಗಳಲ್ಲಿ ಕಾಣುವ ಕೀಟಗಳು ಕ್ರಮೇಣ ಹೊಸ ಎಲೆಗಳು ಮತ್ತು ಸುಳಿಗೂ ಬಾಧಿಸುತ್ತವೆ. ಬಳಿಕ ಗಿಡವು ಒಣಗಿ ಸತ್ತು ಹೋಗುತ್ತದೆ.</p>.<p>‘ಮುಂಜಾಗ್ರತಾ ಕ್ರಮವಾಗಿ ತೋಟದಲ್ಲಿ ತೇವಾಂಶ ವಾತಾವರಣ ಸೃಷ್ಟಿಸಲು ತುಂತುರು ಅಥವಾ ಹನಿ ನೀರಾವರಿ ವ್ಯವಸ್ಥೆ ಹೆಚ್ಚಿಸಬೇಕು. ತೋಟದಲ್ಲಿ ಸರಿಯಾಗಿ ಬಸಿಗಾಲುವೆ ನಿರ್ಮಾಣ, ಈಗಾಗಲೇ ಕೀಟ ಬಾಧೆಗೆ ಒಳಪಟ್ಟ ಗಿಡಗಳಿಗೆ ರಾಸಾಯನಿಕ ಸಿಂಪಡಣೆಯಿಂದ ಹತೋಟಿಗೆ ತರಬಹುದು’ ಎಂದು ಬಣಕಾರ ತಿಳಿಸಿದ್ದಾರೆ.</p>.<p><strong>ಹತೋಟಿ ಕ್ರಮಗಳು:</strong> 1 ಲೀಟರ್ ನೀರಿಗೆ 1.5 ಮಿ.ಲೀ. ಪ್ರೊಪಾಗೈಂಟ್ ಬೆರೆಸಿ ಸಿಂಪಡಣೆ ಮಾಡಬೇಕು ಅಥವಾ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಸ್ಪೈರಾಮೆಸಿಪಿಯನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಒಂದು ಲೀಟರ್ ನೀರಿಗೆ 1.2 ಮಿ.ಲೀ. ಹೆಗ್ಸಿಜೆಯಾಟಾಕ್ಸ್ ಬೆರೆಸಿ ಸಿಂಪಡಣೆ ಮಾಡಲೂಬಹುದು.</p>.<p>‘ಮೇಲಿನ ರಾಸಾಯನಿಕಗಳನ್ನು ಸೂಕ್ಷ್ಮ ಪೋಷಕಾಂಶದ (ಪ್ರತಿ ಕ್ಯಾನ್ಗೆ 25–50 ಗ್ರಾಂ) ಜೊತೆಗೆ ಬೆರೆಸಿ ಒಂದು ಎಕರೆಗೆ 10–15 ಕ್ಯಾನ್ಗಳನ್ನು ಎಲೆಯ ಹಿಂಬದಿಗೆ ಸಿಂಪಡಿಸುವುದರಿಂದ ನುಸಿ ಬಾಧೆಯನ್ನು ಹತೋಟಿಗೆ ತರಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆ ಕಚೇರಿ ಸಂಪರ್ಕಿಸಬಹುದು’ ಎಂದು ಬಣಕಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ತಾಲ್ಲೂಕಿನಲ್ಲಿ ಅಡಿಕೆ ತೋಟಗಳಿಗೆ ಕೆಂಪು ನುಸಿ ಮತ್ತು ಹಳದಿ ನುಸಿ ರೋಗ ಬಾಧೆ ಉಲ್ಬಣಸಿದ್ದು, ಹತೋಟಿಗೆ ತೋಟಗಾರಿಕೆ ಇಲಾಖೆ ಕ್ರಮಗಳನ್ನು ತಿಳಿಸಿದೆ.</p>.<p>‘ಬೇಸಿಗೆಯಲ್ಲಿ ಸಾಮಾನ್ಯವಾಗಿ ಅಡಿಕೆ ಗಿಡಕ್ಕೆ ಬಾಧಿಸುವ ಕೀಟಗಳು ಈ ವರ್ಷದ ಅತಿಯಾದ ತಾಪಮಾನ ಮತ್ತು ಕಡಿಮೆ ಆರ್ದ್ರತೆಯಿಂದ ತೋಟಗಳಿಗೆ ಮಾರಕವಾಗಿ ವ್ಯಾಪಿಸುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದ್ದಾರೆ.</p>.<p>ಲಕ್ಷಣಗಳು: ಹುಳುಗಳು ಎಲೆಯ ಹಿಂಭಾಗದಿಂದ ರಸ ಹೀರುವುದರಿಂದ ಮೊದಲಿಗೆ ಎಲೆಗಳು ಹಳದಿಯಾಗಿ ಕಾಣಿಸುತ್ತವೆ. ನಂತರ ಸಂಪೂರ್ಣವಾಗಿ ಒಣಗಿ ಹೋಗುತ್ತವೆ. ಕೆಳಗಿನ ಎಲೆಗಳಲ್ಲಿ ಕಾಣುವ ಕೀಟಗಳು ಕ್ರಮೇಣ ಹೊಸ ಎಲೆಗಳು ಮತ್ತು ಸುಳಿಗೂ ಬಾಧಿಸುತ್ತವೆ. ಬಳಿಕ ಗಿಡವು ಒಣಗಿ ಸತ್ತು ಹೋಗುತ್ತದೆ.</p>.<p>‘ಮುಂಜಾಗ್ರತಾ ಕ್ರಮವಾಗಿ ತೋಟದಲ್ಲಿ ತೇವಾಂಶ ವಾತಾವರಣ ಸೃಷ್ಟಿಸಲು ತುಂತುರು ಅಥವಾ ಹನಿ ನೀರಾವರಿ ವ್ಯವಸ್ಥೆ ಹೆಚ್ಚಿಸಬೇಕು. ತೋಟದಲ್ಲಿ ಸರಿಯಾಗಿ ಬಸಿಗಾಲುವೆ ನಿರ್ಮಾಣ, ಈಗಾಗಲೇ ಕೀಟ ಬಾಧೆಗೆ ಒಳಪಟ್ಟ ಗಿಡಗಳಿಗೆ ರಾಸಾಯನಿಕ ಸಿಂಪಡಣೆಯಿಂದ ಹತೋಟಿಗೆ ತರಬಹುದು’ ಎಂದು ಬಣಕಾರ ತಿಳಿಸಿದ್ದಾರೆ.</p>.<p><strong>ಹತೋಟಿ ಕ್ರಮಗಳು:</strong> 1 ಲೀಟರ್ ನೀರಿಗೆ 1.5 ಮಿ.ಲೀ. ಪ್ರೊಪಾಗೈಂಟ್ ಬೆರೆಸಿ ಸಿಂಪಡಣೆ ಮಾಡಬೇಕು ಅಥವಾ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಸ್ಪೈರಾಮೆಸಿಪಿಯನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಒಂದು ಲೀಟರ್ ನೀರಿಗೆ 1.2 ಮಿ.ಲೀ. ಹೆಗ್ಸಿಜೆಯಾಟಾಕ್ಸ್ ಬೆರೆಸಿ ಸಿಂಪಡಣೆ ಮಾಡಲೂಬಹುದು.</p>.<p>‘ಮೇಲಿನ ರಾಸಾಯನಿಕಗಳನ್ನು ಸೂಕ್ಷ್ಮ ಪೋಷಕಾಂಶದ (ಪ್ರತಿ ಕ್ಯಾನ್ಗೆ 25–50 ಗ್ರಾಂ) ಜೊತೆಗೆ ಬೆರೆಸಿ ಒಂದು ಎಕರೆಗೆ 10–15 ಕ್ಯಾನ್ಗಳನ್ನು ಎಲೆಯ ಹಿಂಬದಿಗೆ ಸಿಂಪಡಿಸುವುದರಿಂದ ನುಸಿ ಬಾಧೆಯನ್ನು ಹತೋಟಿಗೆ ತರಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆ ಕಚೇರಿ ಸಂಪರ್ಕಿಸಬಹುದು’ ಎಂದು ಬಣಕಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>