ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರುದ್ರಪ್ಪ ಲಮಾಣಿ ಅವರನ್ನು ಓಲೇಕಾರ್ ಅವರು ರಾಜಕೀಯವಾಗಿ ಎದುರಿಸಲಾಗದೆ, ವ್ಯಕ್ತಿಗತವಾಗಿ ಅಪಮಾನ ಹೊರಟಿರುವುದು ಸರಿಯಲ್ಲ. ಬಿಜೆಪಿ ಹೈಕಮಾಂಡ್ ಕೂಡಲೇ ಕ್ರಮ ಕೈಗೊಳ್ಳಬೇಕು. ಓಲೇಕಾರ್ ಅವರು ನಮ್ಮ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.