ಪೊಲೀಸರ ವಿರುದ್ಧ ಬೇಸರ: ಕಳಪೆಬಿತ್ತನೆ ಬೀಜ ತಯಾರಾಗುವ ಆಂಧ್ರಪ್ರದೇಶ, ಹೈದರಾಬಾದ್, ವಿಜಯವಾಡ, ಗೋದಾವರಿಯಲ್ಲಿನ ಆರೋಪಿಗಳನ್ನು ಪೊಲೀಸರು ಬಂಧಿಸದೇ ಇರುವುದು ವಿಷಾದನೀಯ. ಡಿಜಿಪಿ, ಗೃಹಮಂತ್ರಿ ಅವರಿಗೆ ಪತ್ರ ಬರೆದಿದ್ದರೂ, ಸರಿಯಾದ ಕ್ರಮ ಕೈಗೊಂಡಿಲ್ಲ. ರೈತರನ್ನು ಜೀವಂತವಾಗಿ ಸಮಾಧಿ ಮಾಡುವ ಕೆಲಸ ಇದು. ಆರೋಪಿಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ಕೂಡಲೇ ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದರು.