<p><strong>ಬ್ಯಾಡಗಿ</strong>: ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದು, ಆತನ ಶವ ಸೋಮವಾರವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರ ತಂಡ ವಾಪಸ್ಸಾಗಿದೆ.</p>.<p>ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಓದಲು ಕಳಿಸಿದ ಮಗ ಶವವಾದನಲ್ಲ ಎಂದು ಪಾಲಕರು ರೋಧಿಸುತ್ತಿರುವ ದೃಶ್ಯಗಳು ಹೃದಯವನ್ನು ಕಲಕುವಂತಿದ್ದವು. ಮೃತ ರಾಹುಲ್ ಶೆಟ್ಟೆಣ್ಣನವರ (17) ಡಾ.ಬಿ.ಆರ್.ಅಂಬೇಡ್ಕರ್ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ. ಭಾನುವಾರ ಐದು ಮಂದಿ ಸೇರಿ ಈಜಲು ತೆರಳಿದಾಗ ಈ ಅವಘಡ ಸಂಭವಿಸಿದೆ.</p>.<p>ಆದರೆ ಭದ್ರತಾ ಸಿಬ್ಬಂದಿ, ಮೇಲ್ವಿಚಾರಕ, ಅಡುಗೆಯರು ಇದ್ದರೂ ವಸತಿ ನಿಲಯದ ಐದು ವಿದ್ಯಾರ್ಥಿಗಳು ಯಾರಿಗೂ ಹೇಳದೆ ಹೊರಗೆ ಹೇಗೆ ತೆರಳಿದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನು ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದಾರೆ.</p>.<p>ಸಿಬ್ಬಂದಿ ನಿರ್ಲಕ್ಷ್ಯ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು 15 ದಿನ ರಜೆಯ ಮೇಲಿದ್ದು, ಹಾವೇರಿ ಜಿಲ್ಲಾ ಕಚೇರಿಯ ಗ್ರೇಡ್–2 ಅಧಿಕಾರಿಗೆ ಪ್ರಭಾರವನ್ನು ವಹಿಸಲಾಗಿದೆ. ಎರಡು ನಿಲಯದ ಜವಾಬ್ದಾರಿಯನ್ನು ಒಬ್ಬ ವಾರ್ಡ್ನ್ಗೆ ವಹಿಸಲಾಗಿದೆ.</p>.<p>ಸಿಬ್ಬಂದಿಯ ಕೊರತೆಯಿಂದ ಇಂತಹ ಅವಘಡಗಳು ಸಂಭವಿಸಲು ಕಾರಣವಾಗಿದ್ದು, ಮೇಲಾಧಿಕಾರಿಯಿಂದ ತನಿಖೆ ಕೈಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<p>ಮಂಗಳೂರಿಗೆ ದುಡಿಯಲು ತೆರಳಿದ್ದ ಮೃತ ಬಾಲಕನ ಪಾಲಕರು ಮಗನ ಸಾವಿನ ಸುದ್ದಿ ಕೇಳಿ ಪಟ್ಟಣಕ್ಕೆ ಧಾವಿಸಿದ್ದಾರೆ. ಯಾರ ತಪ್ಪಿಗಾಗಿ ದೇವರು ಇಂತಹ ಶಿಕ್ಷೆ ಕೊಟ್ಟಿದ್ದಾನೆ ಎಂದು ರೋದಿಸುತ್ತಿರುವುದು ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಡಗಿ</strong>: ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದು, ಆತನ ಶವ ಸೋಮವಾರವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರ ತಂಡ ವಾಪಸ್ಸಾಗಿದೆ.</p>.<p>ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಓದಲು ಕಳಿಸಿದ ಮಗ ಶವವಾದನಲ್ಲ ಎಂದು ಪಾಲಕರು ರೋಧಿಸುತ್ತಿರುವ ದೃಶ್ಯಗಳು ಹೃದಯವನ್ನು ಕಲಕುವಂತಿದ್ದವು. ಮೃತ ರಾಹುಲ್ ಶೆಟ್ಟೆಣ್ಣನವರ (17) ಡಾ.ಬಿ.ಆರ್.ಅಂಬೇಡ್ಕರ್ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ. ಭಾನುವಾರ ಐದು ಮಂದಿ ಸೇರಿ ಈಜಲು ತೆರಳಿದಾಗ ಈ ಅವಘಡ ಸಂಭವಿಸಿದೆ.</p>.<p>ಆದರೆ ಭದ್ರತಾ ಸಿಬ್ಬಂದಿ, ಮೇಲ್ವಿಚಾರಕ, ಅಡುಗೆಯರು ಇದ್ದರೂ ವಸತಿ ನಿಲಯದ ಐದು ವಿದ್ಯಾರ್ಥಿಗಳು ಯಾರಿಗೂ ಹೇಳದೆ ಹೊರಗೆ ಹೇಗೆ ತೆರಳಿದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನು ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದಾರೆ.</p>.<p>ಸಿಬ್ಬಂದಿ ನಿರ್ಲಕ್ಷ್ಯ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು 15 ದಿನ ರಜೆಯ ಮೇಲಿದ್ದು, ಹಾವೇರಿ ಜಿಲ್ಲಾ ಕಚೇರಿಯ ಗ್ರೇಡ್–2 ಅಧಿಕಾರಿಗೆ ಪ್ರಭಾರವನ್ನು ವಹಿಸಲಾಗಿದೆ. ಎರಡು ನಿಲಯದ ಜವಾಬ್ದಾರಿಯನ್ನು ಒಬ್ಬ ವಾರ್ಡ್ನ್ಗೆ ವಹಿಸಲಾಗಿದೆ.</p>.<p>ಸಿಬ್ಬಂದಿಯ ಕೊರತೆಯಿಂದ ಇಂತಹ ಅವಘಡಗಳು ಸಂಭವಿಸಲು ಕಾರಣವಾಗಿದ್ದು, ಮೇಲಾಧಿಕಾರಿಯಿಂದ ತನಿಖೆ ಕೈಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<p>ಮಂಗಳೂರಿಗೆ ದುಡಿಯಲು ತೆರಳಿದ್ದ ಮೃತ ಬಾಲಕನ ಪಾಲಕರು ಮಗನ ಸಾವಿನ ಸುದ್ದಿ ಕೇಳಿ ಪಟ್ಟಣಕ್ಕೆ ಧಾವಿಸಿದ್ದಾರೆ. ಯಾರ ತಪ್ಪಿಗಾಗಿ ದೇವರು ಇಂತಹ ಶಿಕ್ಷೆ ಕೊಟ್ಟಿದ್ದಾನೆ ಎಂದು ರೋದಿಸುತ್ತಿರುವುದು ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>