ಹಂಸಭಾವಿ: ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಸುತ್ತಕೋಟಿ ಗ್ರಾಮದ ಹೊರವಲಯದ ಚಿಕ್ಕಬೂದಿಹಾಳ ಕ್ರಾಸ್ ಬಳಿ ಬುಧವಾರ ನಡೆದಿದೆ.
ಕಾರ್ತಿಕ ಈಳಿಗೇರ(21), ಪವನ ಭೋಗಾವಿ (23) ಮೃತಪಟ್ಟಿದ್ದು, ಸಂತೋಷ ರಾಗಿಕೊಪ್ಪ ಎಂಬುವನ ಕೈಗಳು ಮುರಿದು ಚಿಂತಾಜನಕ ಸ್ಥಿತಿಯಲ್ಲಿದ್ದು ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಯುವಕರು ರಾಣೆಬೆನ್ನೂರಿಂದ ಹಂಸಭಾವಿಗೆ ಬರುತ್ತಿರುವಾಗ ಕಾರನ್ನು ಅತೀ ವೇಗವಾಗಿ ಚಲಿಸಿದ್ದರ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಾಲುವೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂತ್ವನ: ಅಪಘಾತವಾದ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ಸೊರಬ ತಾಲೂಕಿನ ಶಾಸಕ ಕುಮಾರ ಬಂಗಾರಪ್ಪ ಘಟನೆ ಬಗ್ಗೆ ವಿಚಾರಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.