<p><strong>ಹಂಸಭಾವಿ:</strong> ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಸುತ್ತಕೋಟಿ ಗ್ರಾಮದ ಹೊರವಲಯದ ಚಿಕ್ಕಬೂದಿಹಾಳ ಕ್ರಾಸ್ ಬಳಿ ಬುಧವಾರ ನಡೆದಿದೆ.</p>.<p>ಕಾರ್ತಿಕ ಈಳಿಗೇರ(21), ಪವನ ಭೋಗಾವಿ (23) ಮೃತಪಟ್ಟಿದ್ದು, ಸಂತೋಷ ರಾಗಿಕೊಪ್ಪ ಎಂಬುವನ ಕೈಗಳು ಮುರಿದು ಚಿಂತಾಜನಕ ಸ್ಥಿತಿಯಲ್ಲಿದ್ದು ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದೆ.</p>.<p>ಈ ಯುವಕರು ರಾಣೆಬೆನ್ನೂರಿಂದ ಹಂಸಭಾವಿಗೆ ಬರುತ್ತಿರುವಾಗ ಕಾರನ್ನು ಅತೀ ವೇಗವಾಗಿ ಚಲಿಸಿದ್ದರ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಾಲುವೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಸಾಂತ್ವನ: ಅ</strong>ಪಘಾತವಾದ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ಸೊರಬ ತಾಲೂಕಿನ ಶಾಸಕ ಕುಮಾರ ಬಂಗಾರಪ್ಪ ಘಟನೆ ಬಗ್ಗೆ ವಿಚಾರಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಸಭಾವಿ:</strong> ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಸುತ್ತಕೋಟಿ ಗ್ರಾಮದ ಹೊರವಲಯದ ಚಿಕ್ಕಬೂದಿಹಾಳ ಕ್ರಾಸ್ ಬಳಿ ಬುಧವಾರ ನಡೆದಿದೆ.</p>.<p>ಕಾರ್ತಿಕ ಈಳಿಗೇರ(21), ಪವನ ಭೋಗಾವಿ (23) ಮೃತಪಟ್ಟಿದ್ದು, ಸಂತೋಷ ರಾಗಿಕೊಪ್ಪ ಎಂಬುವನ ಕೈಗಳು ಮುರಿದು ಚಿಂತಾಜನಕ ಸ್ಥಿತಿಯಲ್ಲಿದ್ದು ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದೆ.</p>.<p>ಈ ಯುವಕರು ರಾಣೆಬೆನ್ನೂರಿಂದ ಹಂಸಭಾವಿಗೆ ಬರುತ್ತಿರುವಾಗ ಕಾರನ್ನು ಅತೀ ವೇಗವಾಗಿ ಚಲಿಸಿದ್ದರ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಾಲುವೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಸಾಂತ್ವನ: ಅ</strong>ಪಘಾತವಾದ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ಸೊರಬ ತಾಲೂಕಿನ ಶಾಸಕ ಕುಮಾರ ಬಂಗಾರಪ್ಪ ಘಟನೆ ಬಗ್ಗೆ ವಿಚಾರಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>