<p><strong>ರಾಣೆಬೆನ್ನೂರು:</strong> ಮೆಣಸಿನಕಾಯಿ ಬೆಳೆಯಲ್ಲಿ ಮುಟುರು ರೋಗ, ಕಾಯಿಕೊರೆಯುವ ಕೀಟ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮುಟುರು ರೋಗಕ್ಕೆ ಕಾರಣವಾದ ರಸ ಹೀರುವ ಕೀಟಗಳು, ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಎಲೆಗಳು ಅಂಚಿನಿಂದ ಮುದುರಿಕೊಂಡು ಸಸ್ಯದ ಬೆಳವಣಿಗೆ ಕುಂಠಿತಗೊಳ್ಳಲಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಇದರ ನಿರ್ವಹಣೆಗಾಗಿ ಹೊಲದ ಸುತ್ತಲೂ ತಡೆ ಬೆಳೆಯಾಗಿ 2 ರಿಂದ 3 ಸಾಲು ಎತ್ತರಕ್ಕೆ ಬೆಳೆಯಬಲ್ಲ ಜೋಳ ಅಥವಾ ಮೆಕ್ಕೆಜೋಳ ಬಿತ್ತಬೇಕು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ ಜಿ.ಎಸ್ ಸಲಹೆ ನೀಡಿದರು.</p>.<p>ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ, ಐ.ಸಿ.ಎ.ಆರ್ -ಕೃಷಿ ವಿಜ್ಞಾನ ಕೇಂದ್ರ ತಂಡದ ವಿಜ್ಞಾನಿಗಳ ತಂಡ ರಟ್ಟೀಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಲಿಂಗದೇವರಕೊಪ್ಪ ಗ್ರಾಮದ ರೈತ ಉಮೇಶ ಕದರಮಂಡಲಗಿ ಇವರ ಹಸಿ ಮೆಣಸಿನಕಾಯಿ ಬೆಳೆ ಪ್ರದೇಶಕ್ಕೆ ಈಚೆಗೆ ಭೇಟಿ ನೀಡಿ ವಿಜ್ಞಾನಿಗಳ ತಂಡ ತಾಂತ್ರಿಕ ಸಲಹೆ ನೀಡಿದರು.</p>.<p>ತಡೆಬೆಳೆಯು ಎತ್ತರವಾಗಿ ಬೆಳೆಯುವುದರಿಂದ ಕೀಟಗಳು(ನುಸಿ) ಸುಲಭವಾಗಿ ಹೊಲದಲ್ಲಿ ನುಸುಳುವುದನ್ನು ತಡೆಗಟ್ಟುತ್ತದೆ. ಪ್ರಾರಂಭಿಕ ಹಂತದಲ್ಲಿರುವ ಕೀಟ ಬಾಧಿತ ಗಿಡಗಳನ್ನು ಕಿತ್ತು ನಾಶ ಪಡಿಸಬೇಕು. ಪ್ರತಿ ಎಕರೆಗೆ 10 ರಿಂದ 12 ಅಂಟು ಬಲೆಗಳನ್ನು ನೇತುಹಾಕಬೇಕು ಎಂದರು.</p>.<p>ತೋಟಗಾರಿಕೆ ವಿಜ್ಞಾನಿ ಡಾ.ಸಂತೋಷ್ ಎಚ್.ಎಂ., ಮಣ್ಣು ವಿಷಯ ತಜ್ಞ ಡಾ. ರಶ್ಮಿ ಸಿ.ಎಂ ಮಾತನಾಡಿದರು.</p>.<p>ನೀರು ನಿಂತಿರುವ ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ತೇವಾಂಶವನ್ನು ಹೊರಹಾಕಲು ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸಬೇಕು.</p>.<p>ಉಮೇಶ ಕದರಮಂಡಲಗಿ, ಸಂತೋಷ, ಶಂಕರಗೌಡ, ಹನುಮಂತಪ್ಪ ಕಾಡಪ್ಪನವರ ಸೇರಿದಂತೆ 30 ಕ್ಕೂ ಹೆಚ್ಚು ಮೆಣಸಿನಕಾಯಿ ಬೆಳೆಗಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು:</strong> ಮೆಣಸಿನಕಾಯಿ ಬೆಳೆಯಲ್ಲಿ ಮುಟುರು ರೋಗ, ಕಾಯಿಕೊರೆಯುವ ಕೀಟ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮುಟುರು ರೋಗಕ್ಕೆ ಕಾರಣವಾದ ರಸ ಹೀರುವ ಕೀಟಗಳು, ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಎಲೆಗಳು ಅಂಚಿನಿಂದ ಮುದುರಿಕೊಂಡು ಸಸ್ಯದ ಬೆಳವಣಿಗೆ ಕುಂಠಿತಗೊಳ್ಳಲಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಇದರ ನಿರ್ವಹಣೆಗಾಗಿ ಹೊಲದ ಸುತ್ತಲೂ ತಡೆ ಬೆಳೆಯಾಗಿ 2 ರಿಂದ 3 ಸಾಲು ಎತ್ತರಕ್ಕೆ ಬೆಳೆಯಬಲ್ಲ ಜೋಳ ಅಥವಾ ಮೆಕ್ಕೆಜೋಳ ಬಿತ್ತಬೇಕು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ ಜಿ.ಎಸ್ ಸಲಹೆ ನೀಡಿದರು.</p>.<p>ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ, ಐ.ಸಿ.ಎ.ಆರ್ -ಕೃಷಿ ವಿಜ್ಞಾನ ಕೇಂದ್ರ ತಂಡದ ವಿಜ್ಞಾನಿಗಳ ತಂಡ ರಟ್ಟೀಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಲಿಂಗದೇವರಕೊಪ್ಪ ಗ್ರಾಮದ ರೈತ ಉಮೇಶ ಕದರಮಂಡಲಗಿ ಇವರ ಹಸಿ ಮೆಣಸಿನಕಾಯಿ ಬೆಳೆ ಪ್ರದೇಶಕ್ಕೆ ಈಚೆಗೆ ಭೇಟಿ ನೀಡಿ ವಿಜ್ಞಾನಿಗಳ ತಂಡ ತಾಂತ್ರಿಕ ಸಲಹೆ ನೀಡಿದರು.</p>.<p>ತಡೆಬೆಳೆಯು ಎತ್ತರವಾಗಿ ಬೆಳೆಯುವುದರಿಂದ ಕೀಟಗಳು(ನುಸಿ) ಸುಲಭವಾಗಿ ಹೊಲದಲ್ಲಿ ನುಸುಳುವುದನ್ನು ತಡೆಗಟ್ಟುತ್ತದೆ. ಪ್ರಾರಂಭಿಕ ಹಂತದಲ್ಲಿರುವ ಕೀಟ ಬಾಧಿತ ಗಿಡಗಳನ್ನು ಕಿತ್ತು ನಾಶ ಪಡಿಸಬೇಕು. ಪ್ರತಿ ಎಕರೆಗೆ 10 ರಿಂದ 12 ಅಂಟು ಬಲೆಗಳನ್ನು ನೇತುಹಾಕಬೇಕು ಎಂದರು.</p>.<p>ತೋಟಗಾರಿಕೆ ವಿಜ್ಞಾನಿ ಡಾ.ಸಂತೋಷ್ ಎಚ್.ಎಂ., ಮಣ್ಣು ವಿಷಯ ತಜ್ಞ ಡಾ. ರಶ್ಮಿ ಸಿ.ಎಂ ಮಾತನಾಡಿದರು.</p>.<p>ನೀರು ನಿಂತಿರುವ ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ತೇವಾಂಶವನ್ನು ಹೊರಹಾಕಲು ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸಬೇಕು.</p>.<p>ಉಮೇಶ ಕದರಮಂಡಲಗಿ, ಸಂತೋಷ, ಶಂಕರಗೌಡ, ಹನುಮಂತಪ್ಪ ಕಾಡಪ್ಪನವರ ಸೇರಿದಂತೆ 30 ಕ್ಕೂ ಹೆಚ್ಚು ಮೆಣಸಿನಕಾಯಿ ಬೆಳೆಗಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>