<p><strong>ಬ್ಯಾಡಗಿ</strong>: ತಾಲ್ಲೂಕಿನ ಶಿಡೇನೂರ, ಮತ್ತೂರು, ದೂಳಿಕೊಪ್ಪ, ಹಿರೇಹಳ್ಳಿ, ಗ್ರಾಮಸ್ಥರಲ್ಲಿ ನಾಲ್ಕು ತಿಂಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಸೋಮವಾರ ಬೆಳಿಗ್ಗೆ ಚಿನ್ನಿಕಟ್ಟಿ ಗ್ರಾಮದ ಬಳಿ ಇಡಲಾಗಿದ್ದ ಬೋನಿನಲ್ಲಿ ಸೆರೆಯಾಗಿದೆ.</p>.<p>ಈ ಹಿಂದೆ ಚಿನ್ನಿಕಟ್ಟಿ ಬಳಿ ಚಿರತೆಯ ಹೆಜ್ಜೆ ಗುರುತು ಪತ್ತೆ ಮಾಡಲಾಗಿತ್ತು. ಬಳಿಕ ಹಿರೇಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದರಿಂದ ಅಲ್ಲಿಗೆ ಬೋನು ಸ್ಥಳಾಂತರಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅದರ ಚಲನವಲನದ ಮೇಲೆ ನಿಗಾ ಇಡಲಾಗಿತ್ತು.</p>.<p>ಬಳಿಕ ಒಂದೆರಡು ದಿನದಲ್ಲಿ ನೆಲ್ಲಿಕೊಪ್ಪ ಗ್ರಾಮದ ಬಳಿ ಜಿಂಕೆಯನ್ನು ಬೇಟೆಯಾಡಿರುವುದು ಪತ್ತೆಯಾಗಿತ್ತು. ತದನಂತರ ಮತ್ತೂರು ಕಡೆ ಕಾಣಿಸಿಕೊಂಡಿತ್ತು. 15 ದಿನಗಳ ಹಿಂದೆ ಚಿನ್ನಿಕಟ್ಟಿ ಬಳಿ ಮೇಕೆಯನ್ನು ಬೇಟೆಯಾಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಅಲ್ಲಿರುವುದು ಖಚಿತವಾಗಿತ್ತು. ಅದನ್ನು ಜೀವಂತ ಸೆರೆಹಿಡಿಯಲು ಮತ್ತೆ ಬೋನನ್ನು ಚಿನ್ನಿಕಟ್ಟಿ ಗ್ರಾಮದ ಬಳಿ ಸ್ಥಳಾಂತರಿಸಲಾಗಿತ್ತು.</p>.<p>ಸೋಮವಾರ ಬೆಳಿಗ್ಗೆ ಬೋನು ಮುಚ್ಚಿರುವುದನ್ನು ಗಮನಿಸಿದ ರೈತರು ಚಿರತೆ ಸೆರೆಯಾಗಿರುವುದನ್ನು ಖಚಿತಪಡಿಸಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.</p>.<p>ಕೂಡಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಚಿರತೆಯನ್ನು ದಾಂಡೇಲಿಯ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಮಾಹಿತಿ ನೀಡಿದರು.</p>.<p>ಚಿರತೆ ಬೋನಿನಲ್ಲಿ ಸೆರೆಯಾಗಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜನರು ಸಮೀಪದಲ್ಲಿಯೇ ಚಿರತೆಯನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಡಗಿ</strong>: ತಾಲ್ಲೂಕಿನ ಶಿಡೇನೂರ, ಮತ್ತೂರು, ದೂಳಿಕೊಪ್ಪ, ಹಿರೇಹಳ್ಳಿ, ಗ್ರಾಮಸ್ಥರಲ್ಲಿ ನಾಲ್ಕು ತಿಂಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಸೋಮವಾರ ಬೆಳಿಗ್ಗೆ ಚಿನ್ನಿಕಟ್ಟಿ ಗ್ರಾಮದ ಬಳಿ ಇಡಲಾಗಿದ್ದ ಬೋನಿನಲ್ಲಿ ಸೆರೆಯಾಗಿದೆ.</p>.<p>ಈ ಹಿಂದೆ ಚಿನ್ನಿಕಟ್ಟಿ ಬಳಿ ಚಿರತೆಯ ಹೆಜ್ಜೆ ಗುರುತು ಪತ್ತೆ ಮಾಡಲಾಗಿತ್ತು. ಬಳಿಕ ಹಿರೇಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದರಿಂದ ಅಲ್ಲಿಗೆ ಬೋನು ಸ್ಥಳಾಂತರಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅದರ ಚಲನವಲನದ ಮೇಲೆ ನಿಗಾ ಇಡಲಾಗಿತ್ತು.</p>.<p>ಬಳಿಕ ಒಂದೆರಡು ದಿನದಲ್ಲಿ ನೆಲ್ಲಿಕೊಪ್ಪ ಗ್ರಾಮದ ಬಳಿ ಜಿಂಕೆಯನ್ನು ಬೇಟೆಯಾಡಿರುವುದು ಪತ್ತೆಯಾಗಿತ್ತು. ತದನಂತರ ಮತ್ತೂರು ಕಡೆ ಕಾಣಿಸಿಕೊಂಡಿತ್ತು. 15 ದಿನಗಳ ಹಿಂದೆ ಚಿನ್ನಿಕಟ್ಟಿ ಬಳಿ ಮೇಕೆಯನ್ನು ಬೇಟೆಯಾಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಅಲ್ಲಿರುವುದು ಖಚಿತವಾಗಿತ್ತು. ಅದನ್ನು ಜೀವಂತ ಸೆರೆಹಿಡಿಯಲು ಮತ್ತೆ ಬೋನನ್ನು ಚಿನ್ನಿಕಟ್ಟಿ ಗ್ರಾಮದ ಬಳಿ ಸ್ಥಳಾಂತರಿಸಲಾಗಿತ್ತು.</p>.<p>ಸೋಮವಾರ ಬೆಳಿಗ್ಗೆ ಬೋನು ಮುಚ್ಚಿರುವುದನ್ನು ಗಮನಿಸಿದ ರೈತರು ಚಿರತೆ ಸೆರೆಯಾಗಿರುವುದನ್ನು ಖಚಿತಪಡಿಸಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.</p>.<p>ಕೂಡಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಚಿರತೆಯನ್ನು ದಾಂಡೇಲಿಯ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಮಾಹಿತಿ ನೀಡಿದರು.</p>.<p>ಚಿರತೆ ಬೋನಿನಲ್ಲಿ ಸೆರೆಯಾಗಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜನರು ಸಮೀಪದಲ್ಲಿಯೇ ಚಿರತೆಯನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>