ಸೋಮವಾರ, 1 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಅತಿಯಾದ ಮಳೆ | ಕೊಳೆತ ಬೆಳೆ: ಹಾವೇರಿ ಜಿಲ್ಲೆಯಾದ್ಯಂತ ಬಹುಪಾಲು ರೈತರ ಕಣ್ಣೀರು

Published : 1 ಸೆಪ್ಟೆಂಬರ್ 2025, 3:47 IST
Last Updated : 1 ಸೆಪ್ಟೆಂಬರ್ 2025, 3:47 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಜಮೀನಿನಲ್ಲಿರುವ ಮೆಕ್ಕೆಜೋಳದ ಪರಿಸ್ಥಿತಿ
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಜಮೀನಿನಲ್ಲಿರುವ ಮೆಕ್ಕೆಜೋಳದ ಪರಿಸ್ಥಿತಿ
ಬ್ಯಾಡಗಿ ತಾಲ್ಲೂಕಿನ ಜಮೀನಿನಲ್ಲಿ ಹಾಳಾಗಿರುವ ಮೆಕ್ಕೆಜೋಳ ಬೆಳೆ
ಬ್ಯಾಡಗಿ ತಾಲ್ಲೂಕಿನ ಜಮೀನಿನಲ್ಲಿ ಹಾಳಾಗಿರುವ ಮೆಕ್ಕೆಜೋಳ ಬೆಳೆ
ಜಿಲ್ಲೆಯಲ್ಲಿ ಬಹುತೇಕ ಬೆಳೆ ಹಾನಿಯಾಗಿದ್ದು ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರದಿಂದ ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ ಕೊಡಿಸಬೇಕು
ಮಲ್ಲಿಕಾರ್ಜುನ ಬಳ್ಳಾರಿ ರೈತಪರ ಹೋರಾಟಗಾರ
ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಪರವಿರುವುದಾಗಿ ಹೇಳುವ ಸರ್ಕಾರ ಕೂಡಲೇ ಬೆಳೆ ಪರಿಹಾರ ಘೋಷಣೆ ಮಾಡಬೇಕು. ಇಲ್ಲದಿದ್ದರಿಂದ ಹೋರಾಟ ನಿಶ್ಚಿತ
ರವೀಂದ್ರಗೌಡ ಪಾಟೀಲ ರೈತಪರ ಹೋರಾಟಗಾರ
ಸಾಲಗಾರರ ಕಾಟ
ಸರ್ಕಾರದಿಂದ ಎಷ್ಟೇ ಯೋಜನೆಗಳು ಜಾರಿಯಲ್ಲಿದ್ದರೂ ಬಹುತೇಕ ರೈತರು ಸಾಲ ಮಾಡಿಯೇ ಕೃಷಿ ಮಾಡುತ್ತಿದ್ದಾರೆ. ಬಿತ್ತನೆ ಬೀಜ ಗೊಬ್ಬರ ಖರೀದಿಯಿಂದ ಹಿಡಿದು ಪ್ರತಿಯೊಂದಕ್ಕೆ ಮತ್ತೊಬ್ಬರ ಬಳಿ ಸಾಲ ತರುತ್ತಿದ್ದಾರೆ. ಈಗ ಬೆಳೆ ಹಾನಿ ಸಂಭವಿಸಿದ್ದರಿಂದ ರೈತರಿಗೆ ಸಾಲಗಾರರ ಕಾಟವೂ ಶುರುವಾಗಿದೆ. ಜಿಲ್ಲೆಯಾದ್ಯಂತ 1ರಿಂದ 3 ಎಕರೆ ಜಮೀನು ಹೊಂದಿರುವ ರೈತರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಕೃಷಿಗಾಗಿ ಪರಿಚಯಸ್ಥ ವ್ಯಾಪಾರಿಗಳು ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ಬೆಳೆಯ ಫಸಲು ಕೈಸೇರಿದ ಬಳಿಕ ಸಾಲ ಮರು ಪಾವತಿ ಮಾಡುವ ಭರವಸೆ ಸಹ ನೀಡಿದ್ದಾರೆ. ಈಗ ಬೆಳೆ ಸಂಪೂರ್ಣ ನಾಶವಾದರೆ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ‘₹ 30 ಸಾವಿರ ಕೈ ಸಾಲ ಮಾಡಿ 2 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನೆ. ಬೆಳೆಯ ಬೆಳವಣಿಗೆ ಕುಂಠಿತವಾಗಿದ್ದು ತೆನೆ ಸಹ ಕಟ್ಟಿಲ್ಲ. ಕಟಾವು ಸಂದರ್ಭದಲ್ಲಿ ಕಡಿಮೆ ಇಳುವರಿ ಬರುವ ಲಕ್ಷಣಗಳು ಗೋಚರಿಸುತ್ತಿವೆ. ನಿಗದಿಗಿಂತ ಕಡಿಮೆ ಫಸಲು ಬಂದರೆ ಸಾಲ ತೀರಿಸುವುದು ಹೇಗೆ ? ನನ್ನ ಕುಟುಂಬ ನಡೆಸುವುದು ಹೇಗೆ’ ಎಂದು ಶಿಗ್ಗಾವಿ ರೈತ ಸೋಮಪ್ಪ ಕರ್ಕಿಹಳ್ಳಿ ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT