ದೀಪಾವಳಿಗೆ ಬಂದಿರುವರನ್ನು ಬಡಿಗೆಯಿಂದ (ಮೆಲ್ಲಗೆ) ಹೊಡೆಯುತ್ತಾರೆ. ಬಡಿಗೆ ಏಟು ತಿಂದವರಿಗೆ ರೋಗರುಜಿನ ಹೋಗುತ್ತದೆ, ವಯಸ್ಕರಿಗೆ ವಿವಾಹ, ಕಂಕಣಬಲ ಕೂಡಿಬರಲಿದೆ, ಉದ್ಯೋಗ ಸೇರಿದಂತೆ ಶುಭ ಕಾರ್ಯಗಳು ನಡೆಯುತ್ತವೆ ಎಂಬ ನಂಬಿಕೆ ಇಂದಿಗೂ ಇದೆ. ಹೀಗಾಗಿ ಕೆಲವು ಯುವಕರು ಗ್ರಾಮಕ್ಕೆ ಬಂದಿರುವ ಹೊಸಬರು, ಅಳಿಯಂದಿರು, ಮಾವಂದಿರರನ್ನು ಗುರುತಿಸಿ ಬಡಿಗೆಯಿಂದ ಹೊಡೆಯಲು ತವಕದಲ್ಲಿ ಇರುತ್ತಾರೆ. ಸುತ್ತಲಿನ ಗ್ರಾಮಸ್ಥರು ಕೂಡ ಬಂದು ಈ ಆಚರಣೆಯಲ್ಲಿ ಪಾಲ್ಗೊಂಡು ಬಡಿಗೆಯಿಂದ ಬಡಿಸಿಕೊಂಡು ಹೋಗುತ್ತಾರೆ ಎಂದು ಶಿವನಗೌಡ್ರ ಪಾಟೀಲ, ರುದ್ರಗೌಡ್ರ ಪಾಟೀಲ, ಬಸನಗೌಡ್ರ ಪಾಟೀಲರ ಕುಟುಂಬಸ್ಥರು ಹೇಳುತ್ತಾರೆ.