ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಣ್ಮರೆಯಾದ ‘ಸಗಣಿ ಕಣ’: ನನಸಾಗದ ‘ಕಾಂಕ್ರಿಟ್ ಕಣ’

* ಬೀದಿಯಲ್ಲಿ ರೈತರ ಕೃಷಿ ಉತ್ಪನ್ನ ಒಕ್ಕಲು * ರಾಷ್ಟ್ರೀಯ– ರಾಜ್ಯ ಹೆದ್ದಾರಿಯಲ್ಲಿ ಬೆಳೆ ರಾಶಿ * ಗ್ರಾಮಕ್ಕೊಂದು ಕಣ ನಿರ್ಮಾಣಕ್ಕೆ ಒತ್ತಾಯ
Published : 7 ಏಪ್ರಿಲ್ 2025, 6:33 IST
Last Updated : 7 ಏಪ್ರಿಲ್ 2025, 6:33 IST
ಫಾಲೋ ಮಾಡಿ
Comments
ಹಾವೇರಿಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ರಾಷ್ಟ್ರೀಯ– ರಾಜ್ಯ ಹೆದ್ದಾರಿಗಳಲ್ಲಿ ಒಕ್ಕಲು ಮಾಡಲು ಹಾಕಿರುವುದು
ಹಾವೇರಿಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ರಾಷ್ಟ್ರೀಯ– ರಾಜ್ಯ ಹೆದ್ದಾರಿಗಳಲ್ಲಿ ಒಕ್ಕಲು ಮಾಡಲು ಹಾಕಿರುವುದು
ಪ್ರತಿಯೊಂದು ಗ್ರಾಮದಲ್ಲೂ ಕಾಂಕ್ರಿಟ್ ಕಣ ನಿರ್ಮಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು ಇದುವರೆಗೂ ಬೇಡಿಕೆ ಈಡೇರಿಲ್ಲ
ಭುವನೇಶ್ವರ ಶಿಡ್ಲಾಪೂರ ರೈತ ಮುಖಂಡ
‘ಕಣ ನಿರ್ಮಾಣಕ್ಕೆ ನರೇಗಾ ಬಳಸಿ’
‘ಗ್ರಾಮೀಣ ಮಟ್ಟದಲ್ಲಿ ಜನರು ಅಭಿವೃದ್ಧಿಯಾಗಬೇಕಾದರೆ ಅವರು ಬೆಳೆದಿರುವ ಬೆಳೆಯನ್ನು ಸಂಸ್ಕರಣೆ ಮಾಡಲು ಸೂಕ್ತ ಜಾಗದ ವ್ಯವಸ್ಥೆಯಾಗಬೇಕು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ (ನರೇಗಾ) ಬಳಸಿಕೊಂಡು ಕಾಂಕ್ರಿಟ್ ಕಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ರೈತರು ಆಗ್ರಹಿಸಿದರು. ‘ನರೇಗಾ ಯೋಜನೆಯಡಿ ಈಗಾಗಲೇ ಹಲವು ಕೆಲಸಗಳನ್ನು ಮಾಡಲಾಗುತ್ತಿದೆ. ಕಣ ನಿರ್ಮಾಣದ ಕೆಲಸವನ್ನೂ ನರೇಗಾ ಪಟ್ಟಿಯಲ್ಲಿ ಸೇರಿಸಬೇಕು. ಸರ್ಕಾರ ಅಥವಾ ಖಾಸಗಿ ಜಾಗಗಳನ್ನು ಗುರುತಿಸಿ ಅಲ್ಲಿಯೇ ಕಾಂಕ್ರಿಟ್ ಕಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಕಾಂಕ್ರಿಟ್ ಕಣ ನಿರ್ಮಾಣವಾದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT