<p><strong>ಹಾವೇರಿ</strong>: ಜಿಲ್ಲೆಯಾದ್ಯಂತ ಗೌರಿ ಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬಾಲಕಿಯರಿಗೆ ಸಕ್ಕರೆ ಗೊಂಬೆಗಳ ಆರತಿ ಮಾಡಿ ಸಂಪ್ರದಾಯದ ಆಚರಣೆ ಮಾಡಲಾಯಿತು.<br>ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಹಬ್ಬದ ಆಚರಣೆಯ ಸಡಗರ ಮನೆ ಮಾಡಿತ್ತು.</p>.<p>ಬಾಲಕಿಯರಿಗೆ ಹೂವಿನ ದಂಡೆ ಮಾಡಿ ಸಕ್ಕರೆ ಗೊಂಬೆ ನೀಡಿ ಆರತಿ ಮಾಡುವ ಸಂಪ್ರದಾಯ ನೆರವೇರಿಸಲಾಯಿತು. ಮೊಮ್ಮಕ್ಕಳಿಗೆ, ಅಜ್ಜ–ಅಜ್ಜಿಯಂದಿರು ಸಕ್ಕರೆ ಗೊಂಬೆ ಹಾಗೂ ಕೋಲಾಟದ ಕೋಲುಗಳನ್ನು ನೀಡಿ ಖುಷಿ ಹಂಚಿಕೊಂಡರು. ಗೌರಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಯಿತು.</p>.<p>ಹುಣ್ಣಿಮೆ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಹಾವೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಕ್ತರು, ದೀವಟಿಗೆ ಹಿಡಿದು ದೀಪ ಬೆಳಗಿದರು.</p>.<p>ದೇವಸ್ಥಾನದ ಆವರಣದಿಂದ ಸಂಜೆ ರಥೋತ್ಸವ ಆರಂಭವಾಯಿತು. ಪ್ರಮುಖ ರಸ್ತೆಯಲ್ಲಿ ಸಾಗಿದ ರಥೋತ್ಸವ, ಶಿಬಾರದವರೆಗೆ ಸಾಗಿತು. ನಂತರ, ವಾಪಸು ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.</p>.<p>ರಥೋತ್ಸವದ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ‘ಏಳು ಕೋಟಿ ಏಳು ಕೋಟಿ ಏಳು ಕೋಟಿಗೂ ಚಾಂಗಮಲೋ...’ ಎಂದು ಕೂಗುತ್ತ ಭಕ್ತರು ದೇವರ ಸ್ಮರಣೆ ಮಾಡಿದರು. ರಥದಲ್ಲಿರುವ ದೇವರಿಗೆ ನಮಸ್ಕರಿಸಿದ ಭಕ್ತರು, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.</p>.<p><strong>ರಥೋತ್ಸವ:</strong> ಹಾವೇರಿಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ರಥೋತ್ಸವ ವಿಜೃಂಭಣೆ ಹಾಗೂ ಸಂಭ್ರಮದಿಂದ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಜಿಲ್ಲೆಯಾದ್ಯಂತ ಗೌರಿ ಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬಾಲಕಿಯರಿಗೆ ಸಕ್ಕರೆ ಗೊಂಬೆಗಳ ಆರತಿ ಮಾಡಿ ಸಂಪ್ರದಾಯದ ಆಚರಣೆ ಮಾಡಲಾಯಿತು.<br>ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಹಬ್ಬದ ಆಚರಣೆಯ ಸಡಗರ ಮನೆ ಮಾಡಿತ್ತು.</p>.<p>ಬಾಲಕಿಯರಿಗೆ ಹೂವಿನ ದಂಡೆ ಮಾಡಿ ಸಕ್ಕರೆ ಗೊಂಬೆ ನೀಡಿ ಆರತಿ ಮಾಡುವ ಸಂಪ್ರದಾಯ ನೆರವೇರಿಸಲಾಯಿತು. ಮೊಮ್ಮಕ್ಕಳಿಗೆ, ಅಜ್ಜ–ಅಜ್ಜಿಯಂದಿರು ಸಕ್ಕರೆ ಗೊಂಬೆ ಹಾಗೂ ಕೋಲಾಟದ ಕೋಲುಗಳನ್ನು ನೀಡಿ ಖುಷಿ ಹಂಚಿಕೊಂಡರು. ಗೌರಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಯಿತು.</p>.<p>ಹುಣ್ಣಿಮೆ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಹಾವೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಕ್ತರು, ದೀವಟಿಗೆ ಹಿಡಿದು ದೀಪ ಬೆಳಗಿದರು.</p>.<p>ದೇವಸ್ಥಾನದ ಆವರಣದಿಂದ ಸಂಜೆ ರಥೋತ್ಸವ ಆರಂಭವಾಯಿತು. ಪ್ರಮುಖ ರಸ್ತೆಯಲ್ಲಿ ಸಾಗಿದ ರಥೋತ್ಸವ, ಶಿಬಾರದವರೆಗೆ ಸಾಗಿತು. ನಂತರ, ವಾಪಸು ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.</p>.<p>ರಥೋತ್ಸವದ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ‘ಏಳು ಕೋಟಿ ಏಳು ಕೋಟಿ ಏಳು ಕೋಟಿಗೂ ಚಾಂಗಮಲೋ...’ ಎಂದು ಕೂಗುತ್ತ ಭಕ್ತರು ದೇವರ ಸ್ಮರಣೆ ಮಾಡಿದರು. ರಥದಲ್ಲಿರುವ ದೇವರಿಗೆ ನಮಸ್ಕರಿಸಿದ ಭಕ್ತರು, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.</p>.<p><strong>ರಥೋತ್ಸವ:</strong> ಹಾವೇರಿಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ರಥೋತ್ಸವ ವಿಜೃಂಭಣೆ ಹಾಗೂ ಸಂಭ್ರಮದಿಂದ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>