‘ಮಳೆ ನೀರು ಸಂಗ್ರಹ ವಿಧಾನ ಅತ್ಯಗತ್ಯ’
‘ಪ್ರತಿ ಮನೆ ಮತ್ತು ಕಚೇರಿಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ ಹಾಗೂ ಕೃತಕ ಅಂತರ್ಜಲ ಮರುಪೂರಣ ಕ್ರಮಗಳಿಂದ ಅಂತರ್ಜಲ ಪುನಃಶ್ಚೇತನ ಸಾಧ್ಯ’ ಎನ್ನುತ್ತಾರೆ ಹಿರಿಯ ಭೂವಿಜ್ಞಾನಿ ಹಿರಿಯ ಭೂವಿಜ್ಞಾನಿ ಸಂತೋಷಪ್ಯಾಟಿ ಗಾಣಿಗೇರ. ಜಿಲ್ಲೆಯಲ್ಲಿ ಅಂತರ್ಜಲವು ಶೇ70ರಷ್ಟು ಕೃಷಿಗೆ ಉಪಯೋಗವಾಗುತ್ತದೆ. ಉಳಿದಂತೆ ಗೃಹ ಬಳಕೆ ಕೈಗಾರಿಕೆ ಇತರೆ ಉದ್ದೇಶಗಳಿಗೆ ವಿನಿಯೋಗವಾಗುತ್ತದೆ. ಚೆಕ್ಡ್ಯಾಂ ಇಂಗುಗುಂಡಿ ನಾಲಾ ಬಂಡು ಕೃಷಿ ಹೊಂಡ ನಿರ್ಮಾಣಕ್ಕೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.