<p><strong>ಹಂಸಬಾವಿ</strong>: ‘ಭಗವಂತನ ಅನುಗ್ರಹವಿದ್ದರೆ ಬೆಟ್ಟದಷ್ಟು ಭಾರದ ಕಷ್ಟವಿದ್ದರೂ ಹೂವಿನಂತೆ ಹಗುರವಾಗುತ್ತದೆ. ಸುಖಮಯ ಜೀವನಕ್ಕೆ ಶರಣರ ಬದುಕನ್ನು ಅನುಸರಿಸಿ’ ಎಂದು ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.</p>.<p>ಇಲ್ಲಿನ ಶಿವಯೋಗೀಶ್ವರ ಆಶ್ರಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಶನಿವಾರ ಆರಂಭವಾದ ಸಜ್ಜಲಗುಡ್ಡದ ಶಿವಶರಣೆಯ ಪುರಾಣ ಪ್ರವಚನ ಪ್ರಾರಂಭೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.</p>.<p>ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಜೀವನದ ಸಾರ್ಥಕತೆಗೆ ಕೀರ್ತನೆ ಕೇಳಬೇಕು. ಸತ್ಸಂಗವಾಗಬೇಕು. ಶಿವಜ್ಞಾನವಿಲ್ಲದವರಿಗೆ ಶಿವನ ಕೃಪೆ ಲಭಿಸದು. ಸಂಸ್ಕಾರಯುತ ಜೀವನ ನಡೆಸಿದರೆ ಮೋಕ್ಷ ಸಾಧ್ಯ ಎಂದರು.</p>.<p>ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ದೀಪ ತಾನುರಿದು ಜಗಕೆ ಬೆಳಕು ನೀಡುವಂತೆ ಲೋಕಕಲ್ಯಾಣಕ್ಕಾಗಿ ಶರಣರು ಜೀವನ ಸವೆಸಿದರು. ಇಂಥವರ ಸಾಲಿನಲ್ಲಿ ಸಜ್ಜಗುಡ್ಡದ ಶರಣೆಯು ಮುಂಚೂಣಿಯಲ್ಲಿದ್ದಾಳೆ ಎಂದರು.</p>.<p>ಬಳಿಕ ಹಂಸಬಾವಿಯ ಸಿದ್ದಲಿಂಗ ಸ್ವಾಮೀಜಿ ಪುರಾಣ ಪ್ರವಚನ ಆರಂಭಿಸಿದರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.</p>.<p>ಈ ವೇಳೆ ಅಗಡಿಯ ಕಲ್ಮಠದ ಗುರುಸಿದ್ದ ಸ್ವಾಮೀಜಿ, ತಾ.ಶ.ಸಾ.ಪರಿಷತ್ ಅಧ್ಯಕ್ಷ ಜಿ.ಆರ್.ಕೆಂಚಕ್ಕನವರ, ಷಣ್ಮುಖಯ್ಯ ಮಳೀಮಠ, ಮಲ್ಲೇಶಪ್ಪ ಅಸುಂಡಿ, ಎ.ಎನ್.ಹೆಡಿಯಾಲ, ಧಾನೇಶ್ವರಿ ಭಜನಾ ಸಂಘದವರು ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಸಬಾವಿ</strong>: ‘ಭಗವಂತನ ಅನುಗ್ರಹವಿದ್ದರೆ ಬೆಟ್ಟದಷ್ಟು ಭಾರದ ಕಷ್ಟವಿದ್ದರೂ ಹೂವಿನಂತೆ ಹಗುರವಾಗುತ್ತದೆ. ಸುಖಮಯ ಜೀವನಕ್ಕೆ ಶರಣರ ಬದುಕನ್ನು ಅನುಸರಿಸಿ’ ಎಂದು ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.</p>.<p>ಇಲ್ಲಿನ ಶಿವಯೋಗೀಶ್ವರ ಆಶ್ರಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಶನಿವಾರ ಆರಂಭವಾದ ಸಜ್ಜಲಗುಡ್ಡದ ಶಿವಶರಣೆಯ ಪುರಾಣ ಪ್ರವಚನ ಪ್ರಾರಂಭೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.</p>.<p>ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಜೀವನದ ಸಾರ್ಥಕತೆಗೆ ಕೀರ್ತನೆ ಕೇಳಬೇಕು. ಸತ್ಸಂಗವಾಗಬೇಕು. ಶಿವಜ್ಞಾನವಿಲ್ಲದವರಿಗೆ ಶಿವನ ಕೃಪೆ ಲಭಿಸದು. ಸಂಸ್ಕಾರಯುತ ಜೀವನ ನಡೆಸಿದರೆ ಮೋಕ್ಷ ಸಾಧ್ಯ ಎಂದರು.</p>.<p>ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ದೀಪ ತಾನುರಿದು ಜಗಕೆ ಬೆಳಕು ನೀಡುವಂತೆ ಲೋಕಕಲ್ಯಾಣಕ್ಕಾಗಿ ಶರಣರು ಜೀವನ ಸವೆಸಿದರು. ಇಂಥವರ ಸಾಲಿನಲ್ಲಿ ಸಜ್ಜಗುಡ್ಡದ ಶರಣೆಯು ಮುಂಚೂಣಿಯಲ್ಲಿದ್ದಾಳೆ ಎಂದರು.</p>.<p>ಬಳಿಕ ಹಂಸಬಾವಿಯ ಸಿದ್ದಲಿಂಗ ಸ್ವಾಮೀಜಿ ಪುರಾಣ ಪ್ರವಚನ ಆರಂಭಿಸಿದರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.</p>.<p>ಈ ವೇಳೆ ಅಗಡಿಯ ಕಲ್ಮಠದ ಗುರುಸಿದ್ದ ಸ್ವಾಮೀಜಿ, ತಾ.ಶ.ಸಾ.ಪರಿಷತ್ ಅಧ್ಯಕ್ಷ ಜಿ.ಆರ್.ಕೆಂಚಕ್ಕನವರ, ಷಣ್ಮುಖಯ್ಯ ಮಳೀಮಠ, ಮಲ್ಲೇಶಪ್ಪ ಅಸುಂಡಿ, ಎ.ಎನ್.ಹೆಡಿಯಾಲ, ಧಾನೇಶ್ವರಿ ಭಜನಾ ಸಂಘದವರು ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>