ಗುರುವಾರ, 24 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಮಾತು ತಪ್ಪಿದ ಸರ್ಕಾರ: ನೆರೆ ಸಂತ್ರಸ್ತರ ಕಣ್ಣೀರು

ನೆರೆಯಿಂದ ಶಿಥಿಲಗೊಂಡಿದ್ದ ಮನೆ: ಮೊದಲ ಬಿಲ್ ನೀಡಿ ಸುಮ್ಮನಾದ ಸರ್ಕಾರ: ನನಸಾಗದ ಸೂರಿನ ಕನಸು
Published : 21 ಜುಲೈ 2025, 3:58 IST
Last Updated : 21 ಜುಲೈ 2025, 3:58 IST
ಫಾಲೋ ಮಾಡಿ
Comments
ಹಾವೇರಿ ತಾಲ್ಲೂಕಿನ ಹಂದಿಗನೂರು ಗ್ರಾಮದಲ್ಲಿ ಅರ್ಧಕ್ಕೆ ನಿಂತ ಮನೆ ನಿರ್ಮಾಣ ಕೆಲಸ 
ಹಾವೇರಿ ತಾಲ್ಲೂಕಿನ ಹಂದಿಗನೂರು ಗ್ರಾಮದಲ್ಲಿ ಅರ್ಧಕ್ಕೆ ನಿಂತ ಮನೆ ನಿರ್ಮಾಣ ಕೆಲಸ 
ಹಂದಿಗನೂರು ಮೇಲ್ಮುರಿ ಮಾತ್ರವಲ್ಲದೇ ಜಿಲ್ಲೆಯ ಹಲವು ಕಡೆ ನೆರೆಯಿಂದ ಮನೆ ಕಳೆದುಕೊಂಡಿರುವವರಿಗೆ ಇದುವರೆಗೂ ಸ್ವಂತ ಸೂರಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು
ಶಂಕರಪ್ಪ ನಿಂಗಣ್ಣನವರ ಹಾವೇರಿ
ನೆರೆಯಿಂದ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದೇನೆ. ಮೊದಲ ಬಿಲ್ ಪಡೆದಿರುವ ಎಲ್ಲರಿಗೂ ಸರ್ಕಾರ ಪೂರ್ಣ ಹಣ ನೀಡಬೇಕು. ಸ್ವಂತ ಸೂರು ಒದಗಿಸಬೇಕು
ಪರಸಪ್ಪ ನೆರೆ ಸಂತ್ರಸ್ತ
‘ಸರ್ಕಾರದ ಆದೇಶದಂತೆ ಮನೆ ರದ್ದು’
‘2021ರಲ್ಲಿ ನೆರೆ ಬಂದಾಗ ₹ 5 ಲಕ್ಷ ಮನೆ ನೀಡಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಹಲವರಿಗೆ ಹಣ ನೀಡಲಾಗಿತ್ತು. ಆದರೆ ಕ್ರಮೇಣ ಯೋಜನೆಯನ್ನು ಬಂದ್ ಮಾಡಲಾಗಿದೆ. ಮನೆ ಮಂಜೂರಾತಿಗಳನ್ನೂ ರದ್ದುಪಡಿಸಲಾಗಿದೆ. ಈ ಬಗ್ಗೆ ತಂತ್ರಾಂಶದಲ್ಲಿಯೇ ಮನೆಗಳನ್ನು ಬ್ಲಾಕ್ ಮಾಡಲಾಗಿದೆ’ ಎಂದು ತಾಲ್ಲೂಕು ಆಡಳಿತ ಕಚೇರಿ ಅಧಿಕಾರಿಯೊಬ್ಬರು ಹೇಳಿದರು.
‘ಕೆಲವರ ಮನೆಗಳ ಅನ್‌–ಬ್ಲಾಕ್‌’
‘ಬಿಲ್ ಬಾಕಿ ಉಳಿದು ಬ್ಲಾಕ್‌ ಆಗಿದ್ದ ಕೆಲವರ ಮನೆಗಳನ್ನು ಅನ್‌–ಬ್ಲಾಕ್ ಮಾಡಲಾಗಿದೆ. ಅವರಿಗೆ ಹಣ ನೀಡಲು ತಯಾರಿಯೂ ನಡೆದಿರುವ ಮಾಹಿತಿಯಿದೆ’ ಎಂದು ಸಂತ್ರಸ್ತರು ಹೇಳಿದರು. ‘ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮಗೆ ಬೇಕಾದವರ ಮನೆಗಳನ್ನು ಅನ್‌–ಬ್ಲಾಕ್ ಮಾಡಿಸಿ ಹಣ ಬರುವಂತೆ ಮಾಡುತ್ತಿದ್ದಾರೆ. ಬಡವರು ಹಾಗೂ ನಿರ್ಗತಿಕರಿಗೆ ಮನೆಯ ಬಿಲ್ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.
‘ಮದುವೆಯಾಗಲು ಹಿಂದೇಟು’
ಹಂದಿಗನೂರು ಹಾಗೂ ಮೇಲ್ಮುರಿ ಗ್ರಾಮಗಳಲ್ಲಿದ್ದ 90 ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿದೆ. ಕೆಲವರು ಸಾಲ ಮಾಡಿ ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಬಹುತೇಕರ ಮನೆಗಳು ಪಾಯದ ಸ್ಥಿತಿಯಲ್ಲಿವೆ. ಹಲವರು ಶೆಡ್‌ ನಿರ್ಮಿಸಿಕೊಂಡು ಅದನ್ನೇ ಮನೆ ಮಾಡಿಕೊಂಡಿದ್ದಾರೆ. ‘ಸ್ವಂತ ಜಾಗದಲ್ಲಿದ್ದ ಮನೆಯನ್ನು ನೆರೆಯಿಂದಾಗಿ ಕಳೆದುಕೊಂಡಿದ್ದೇವೆ. ಸರ್ಕಾರ ₹5 ಲಕ್ಷ ನೀಡುವುದಾಗಿ ಹೇಳಿದ್ದರಿಂದ ಖುಷಿಯಾಗಿತ್ತು. ಆದರೆ ಹಣ ಬಾರದಿದ್ದರಿಂದ ತುಂಬಾ ನೊಂದಿದ್ದೇನೆ. ಈಗ ಮಕ್ಕಳ ಮದುವೆಗೆ ಸ್ವಂತ ಮನೆ ಕೇಳುತ್ತಾರೆ. ಮನೆ ಇಲ್ಲದಿದ್ದರಿಂದ ವಯಸ್ಸಿಗೆ ಬಂದ ಮಕ್ಕಳ ಮದುವೆಯಾಗುತ್ತಿಲ್ಲ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ‘ಸ್ವಂತ ಸೂರಿಲ್ಲದಿದ್ದರಿಂದ ಸರ್ಕಾರದ ಮೇಲೆ ಕೋಪವಿದೆ. ಇತ್ತೀಚಿನ ಚುನಾವಣೆಗಳಲ್ಲಿ ಯಾರೊಬ್ಬರೂ ಮತ ಕೇಳಲು ನಮ್ಮ ಬಳಿ ಬಂದಿಲ್ಲ. ಬಂದರೆ ತಕ್ಕ ಪಾಠ ಕಲಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೂ ಸಜ್ಜಾಗಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT