ಹಾವೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರಿಗೆ ಎಷ್ಟು ಬಾರಿ ಸೋತ ಮೇಲೆ ಬುದ್ಧಿ ಬರುತ್ತೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳಿಂದ ಸೋತರು. ಆಗಲೂ ಬುದ್ಧಿ ಬರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲ್ಲ ಅಂದ್ರು, ಅವರಿಗೆ ಒಂದೇ ಒಂದು ಸೀಟು ಬಂತು. ಬಿಜೆಪಿಗೆ 25 ಸೀಟು ಬಂತು. ಆಗಲೂ ಬುದ್ಧಿ ಬರಲಿಲ್ಲ. ವಿಧಾನಸಭಾ ಉಪಚುನಾವಣೆಯಲ್ಲಿ 15ಕ್ಕೆ 15ರಲ್ಲೂ ಕಾಂಗ್ರೆಸ್ ಗೆಲ್ಲುತ್ತೆ ಅಂದ್ರು. ಎರಡು ಸೀಟು ತೆಗೆದುಕೊಂಡ್ರು. ಹಾಗಾಗಿ ಮೋದಿ ಟೀಕಿಸಿ ದೊಡ್ಡ ನಾಯಕ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ ಸಿದ್ದರಾಮಯ್ಯ’ ಎಂದು ಲೇವಡಿ ಮಾಡಿದರು.