ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಚಿತ್ರರಂಗ ಸುಧಾರಣೆ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತನಾಡುತ್ತಿದ್ದಾರೆ. ಆದರೆ, ವ್ಯಸನಿಯಾಗಿದ್ದ ಅವರ ತಂಗಿಯನ್ನೇಕೆ ಸುಧಾರಣೆ ಮಾಡಲಿಲ್ಲ. ಚಿರಂಜೀವಿ ಸರ್ಜಾ ಮೃತಪಟ್ಟಿದ್ದು, ಸತ್ತವರ ಬಗ್ಗೆ ಮಾತನಾಡುವ ಅವಶ್ಯ ಏನಿದೆ. ಸರ್ಜಾ ಕುಟುಂಬಕ್ಕೆ ಚಿತ್ರರಂಗದಲ್ಲಿ ಉತ್ತಮ ಹೆಸರಿದೆ. ಅವರ ಕುಟುಂಬದ ಮೇಲೆ ಏಕೆ ವಿನಾಕಾರಣ ಆಪಾದನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.