ಸವಣೂರ ತಾಲ್ಲೂಕಿನ ಮಣ್ಣೂರ ಗ್ರಾಮದ ಮಂಜುನಾಥಗೌಡ@ ಶಶಿ ಪಾಟೀಲ (26) ಎಂಬ ಆರೋಪಿಯು 2018ರ ಆಗಸ್ಟ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ, ಅತ್ಯಚಾರ ಎಸಗಿದ್ದ. ಕೊಲೆ ಮಾಡಿದ ನಂತರ ಶವವನ್ನು ಕಾರಿನಲ್ಲಿ ಸಾಗಿಸಿ, ಹಾವೇರಿ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಬರುವ ವರದಾ ಸೇತುವೆ ಕೆಳಗೆ ಶವವನ್ನು ಸುಟ್ಟು ಹಾಕಿದ್ದ. ಈ ಪ್ರಕರಣ ಜಿಲ್ಲೆಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.