<p><strong>ಹಾವೇರಿ:</strong> ಜಿಲ್ಲೆಯಲ್ಲಿ ಕೋವಿಡ್ ಸೋಂಕಿತೆಯೊಬ್ಬರು ಆಂಬುಲೆನ್ಸ್ಗಾಗಿ 12 ತಾಸು ಕಾದ ಘಟನೆ ನಡೆದ ಬೆನ್ನಲ್ಲೇ, ಹಾಸಿಗೆ ಲಭ್ಯವಿಲ್ಲದ ಕಾರಣಕ್ಕಾಗಿ ನಗರದ ಕೋವಿಡ್ ಆಸ್ಪತ್ರೆ ಮುಂಭಾಗ 3 ತಾಸು ಕೋವಿಡ್ ಸೋಂಕಿತನೊಬ್ಬ ಆಂಬುಲೆನ್ಸ್–108ರಲ್ಲೇ ಉಳಿದ ಘಟನೆ ಸೋಮವಾರ ನಡೆದಿದೆ.</p>.<p>ಶಿಗ್ಗಾವಿ ಜಿಲ್ಲೆ ಅಂದಲಗಿ ಗ್ರಾಮದಿಂದ ಕೋವಿಡ್ ಸೋಂಕಿತನನ್ನು ಆಂಬುಲೆನ್ಸ್ ಮೂಲಕ ನಗರದ ಕೋವಿಡ್ ಆಸ್ಪತ್ರೆಗೆ ಮಧ್ಯಾಹ್ನ 1.30ಕ್ಕೆ ವೈದ್ಯಕೀಯ ಸಿಬ್ಬಂದಿ ಕರೆತಂದರು. ಆದರೆ, ‘ಬೆಡ್ ಖಾಲಿ ಇಲ್ಲ’ ಎಂಬ ಕಾರಣದಿಂದ ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಸಲಹೆ ನೀಡಿದರು.</p>.<p>ಇದಕ್ಕೆ ಒಪ್ಪದ ಕೋವಿಡ್ ಸೋಂಕಿತ ಹಾವೇರಿ ಕೋವಿಡ್ ಆಸ್ಪತ್ರೆಯಲ್ಲೇ ದಾಖಲು ಮಾಡಿಕೊಳ್ಳಿ ಎಂದು ಹಟ ಹಿಡಿದ. ಹೀಗಾಗಿ ಏನು ಮಾಡಬೇಕು ಎಂದು ದಿಕ್ಕುತೋಚದ ಆಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ, ಕಾಯುತ್ತಿದ್ದ ದೃಶ್ಯ ಕಂಡು ಬಂತು.</p>.<p class="Subhead">ನಾಪತ್ತೆಯಾಗಿದ್ದ ಸೋಂಕಿತ ಪತ್ತೆ:</p>.<p>ರಟ್ಟೀಹಳ್ಳಿ ತಾಲ್ಲೂಕಿನ ಪರ್ವತ ಸಿದ್ಧಗೇರಿ ಎಂಬ ಗ್ರಾಮದ 29 ವರ್ಷದ ಕೋವಿಡ್ ಸೋಂಕಿತ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ. ಆತ, ಸೋಮವಾರ ರಾಣೆಬೆನ್ನೂರು ನಗರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.</p>.<p>ಆತನನ್ನು ಕರೆತಂದು ತಾಲ್ಲೂಕು ಆಸ್ಪತ್ರೆ ಮುಂಭಾಗ ಕೂರಿಸಿ, ಸುತ್ತಲೂ ಬ್ಯಾರಿಕೇಡ್ ಹಾಕಿದ್ದಾರೆ. ನಂತರ ಆತನಿಗೆ ತಿಂಡಿ, ನೀರು ಕೊಟ್ಟಿದ್ದಾರೆ.ಆದರೆ, ಕರೆ ಮಾಡಿ 2 ಗಂಟೆ ಕಳೆದರೂ ಆಂಬುಲೆನ್ಸ್ ಬಂದಿರಲಿಲ್ಲ. ನಂತರ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಜಿಲ್ಲೆಯಲ್ಲಿ ಕೋವಿಡ್ ಸೋಂಕಿತೆಯೊಬ್ಬರು ಆಂಬುಲೆನ್ಸ್ಗಾಗಿ 12 ತಾಸು ಕಾದ ಘಟನೆ ನಡೆದ ಬೆನ್ನಲ್ಲೇ, ಹಾಸಿಗೆ ಲಭ್ಯವಿಲ್ಲದ ಕಾರಣಕ್ಕಾಗಿ ನಗರದ ಕೋವಿಡ್ ಆಸ್ಪತ್ರೆ ಮುಂಭಾಗ 3 ತಾಸು ಕೋವಿಡ್ ಸೋಂಕಿತನೊಬ್ಬ ಆಂಬುಲೆನ್ಸ್–108ರಲ್ಲೇ ಉಳಿದ ಘಟನೆ ಸೋಮವಾರ ನಡೆದಿದೆ.</p>.<p>ಶಿಗ್ಗಾವಿ ಜಿಲ್ಲೆ ಅಂದಲಗಿ ಗ್ರಾಮದಿಂದ ಕೋವಿಡ್ ಸೋಂಕಿತನನ್ನು ಆಂಬುಲೆನ್ಸ್ ಮೂಲಕ ನಗರದ ಕೋವಿಡ್ ಆಸ್ಪತ್ರೆಗೆ ಮಧ್ಯಾಹ್ನ 1.30ಕ್ಕೆ ವೈದ್ಯಕೀಯ ಸಿಬ್ಬಂದಿ ಕರೆತಂದರು. ಆದರೆ, ‘ಬೆಡ್ ಖಾಲಿ ಇಲ್ಲ’ ಎಂಬ ಕಾರಣದಿಂದ ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಸಲಹೆ ನೀಡಿದರು.</p>.<p>ಇದಕ್ಕೆ ಒಪ್ಪದ ಕೋವಿಡ್ ಸೋಂಕಿತ ಹಾವೇರಿ ಕೋವಿಡ್ ಆಸ್ಪತ್ರೆಯಲ್ಲೇ ದಾಖಲು ಮಾಡಿಕೊಳ್ಳಿ ಎಂದು ಹಟ ಹಿಡಿದ. ಹೀಗಾಗಿ ಏನು ಮಾಡಬೇಕು ಎಂದು ದಿಕ್ಕುತೋಚದ ಆಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ, ಕಾಯುತ್ತಿದ್ದ ದೃಶ್ಯ ಕಂಡು ಬಂತು.</p>.<p class="Subhead">ನಾಪತ್ತೆಯಾಗಿದ್ದ ಸೋಂಕಿತ ಪತ್ತೆ:</p>.<p>ರಟ್ಟೀಹಳ್ಳಿ ತಾಲ್ಲೂಕಿನ ಪರ್ವತ ಸಿದ್ಧಗೇರಿ ಎಂಬ ಗ್ರಾಮದ 29 ವರ್ಷದ ಕೋವಿಡ್ ಸೋಂಕಿತ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ. ಆತ, ಸೋಮವಾರ ರಾಣೆಬೆನ್ನೂರು ನಗರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.</p>.<p>ಆತನನ್ನು ಕರೆತಂದು ತಾಲ್ಲೂಕು ಆಸ್ಪತ್ರೆ ಮುಂಭಾಗ ಕೂರಿಸಿ, ಸುತ್ತಲೂ ಬ್ಯಾರಿಕೇಡ್ ಹಾಕಿದ್ದಾರೆ. ನಂತರ ಆತನಿಗೆ ತಿಂಡಿ, ನೀರು ಕೊಟ್ಟಿದ್ದಾರೆ.ಆದರೆ, ಕರೆ ಮಾಡಿ 2 ಗಂಟೆ ಕಳೆದರೂ ಆಂಬುಲೆನ್ಸ್ ಬಂದಿರಲಿಲ್ಲ. ನಂತರ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>