ಆತನನ್ನು ಕರೆತಂದು ತಾಲ್ಲೂಕು ಆಸ್ಪತ್ರೆ ಮುಂಭಾಗ ಕೂರಿಸಿ, ಸುತ್ತಲೂ ಬ್ಯಾರಿಕೇಡ್ ಹಾಕಿದ್ದಾರೆ. ನಂತರ ಆತನಿಗೆ ತಿಂಡಿ, ನೀರು ಕೊಟ್ಟಿದ್ದಾರೆ.ಆದರೆ, ಕರೆ ಮಾಡಿ 2 ಗಂಟೆ ಕಳೆದರೂ ಆಂಬುಲೆನ್ಸ್ ಬಂದಿರಲಿಲ್ಲ. ನಂತರ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಿದ್ದಾರೆ.