12ನೇ ಶತಮಾನದಲ್ಲಿ ನಡೆದ ಜನಪರ ಆಂದೋಲನದ ನೇರ ಧ್ವನಿಯಾದ ‘ವಚನ ಸಾಹಿತ್ಯ'ದಲ್ಲಿ ಕೇವಲ ಶರಣರು ಅಷ್ಟೇ ಅಲ್ಲ ಶರಣೆಯರೂ ತಮ್ಮ ಧ್ವನಿಗೂಡಿಸಿದ್ದಾರೆ.ಹೆಣ್ಣು ಆರ್ಯ ಸಂಸ್ಕೃತಿಯ ಪ್ರಭಾವದಿಂದ ತನ್ನೆಲ್ಲಾ ಸ್ವಾತಂತ್ರ್ಯವನ್ನು ಕಳೆದುಕೊಂಡು ಪರಾವಲಂಬಿಯಾಗಿ ನಿಯಮ, ನಿಬಂಧನೆಗಳ ಶೃಂಖಲೆಯಲ್ಲಿ ಬಂಧಿತಳಾಗಿದ್ದಳು. ಇಂತಹ ಶೋಚನೀಯ ಸಂದರ್ಭದಲ್ಲಿ 12ನೇ ಶತಮಾನದಲ್ಲಿ ಗಣನೀಯ ಸಂಖ್ಯೆಯಲ್ಲಿ ಮಹಿಳೆಯರು ವಿಚಾರ ಸ್ವಾತಂತ್ರ್ಯ ಪಡೆದು ವಚನ ರೂಪದಲ್ಲಿ ಅಭಿವ್ಯಕ್ತಿಸಿದ್ದನ್ನು ಕಾಣುತ್ತೇವೆ ಎಂದು ಹೇಳಿದರು.