<p><strong>ರಟ್ಟೀಹಳ್ಳಿ (ಹಾವೇರಿ ಜಿಲ್ಲೆ):</strong> ತಾಲ್ಲೂಕಿನ ಕಡೂರು ಗ್ರಾಮದ ಹೊರವಲಯದ ತಡಕಲಿಮಟ್ಟಿ ಗುಡ್ಡದ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ನಾಲ್ಕು ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ.</p>.<p>ತಾಲ್ಲೂಕಿನ ಕಣವಿಶಿದ್ಗೇರಿ ಗ್ರಾಮದ ಜಮೀನುವೊಂದರಲ್ಲಿ ಕಳೆದ ತಿಂಗಳು ಚಿರತೆ ದಾಳಿಯಿಂದ ರೈತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಬೋನು ಇಟ್ಟಿತ್ತು.</p>.<p>‘ಮಂಗಳವಾರ ಮಧ್ಯರಾತ್ರಿ ಚಿರತೆ ಸಿಕ್ಕಿದೆ. ಇನ್ನಷ್ಟು ಚಿರತೆಗಳು ಇರುವ ಬಗ್ಗೆ ಅನುಮಾನವಿದೆ. ಸೆರೆ ಸಿಕ್ಕಿರುವ ಚಿರತೆಯನ್ನು ಭದ್ರಾ ಸಂರಕ್ಷಿತ ಅರಣ್ಯ ವಲಯಕ್ಕೆ ಬಿಡಲಾಗುವುದು’ ಎಂದು ಹಿರೇಕೆರೂರ ವಲಯ ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದರು.</p>.<p>‘ಕಡೂರು, ಕುಡುಪಲಿ, ಹಾಡೇ, ಬುಳ್ಳಾಪುರ, ಜೋಕನಾಳ, ಪರ್ವತಶಿದ್ಗೇರಿ, ಕಣವಿಶಿದ್ಗೇರಿ ಗ್ರಾಮಗಳ ಸುತ್ತಮುತ್ತ ಇನ್ನೂ ಅನೇಕ ಚಿರತೆಗಳು ಇರುವುದನ್ನು ರೈತರು ಗಮನಿಸಿದ್ದಾರೆ. ಅರಣ್ಯ ಸಿಬ್ಬಂದಿ ಇನ್ನೂ ಹೆಚ್ಚಿನ ನುರಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಮಾಡವುದು ಅವಶ್ಯ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಂಕರಗೌಡ ಶಿರಗಂಬಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಟ್ಟೀಹಳ್ಳಿ (ಹಾವೇರಿ ಜಿಲ್ಲೆ):</strong> ತಾಲ್ಲೂಕಿನ ಕಡೂರು ಗ್ರಾಮದ ಹೊರವಲಯದ ತಡಕಲಿಮಟ್ಟಿ ಗುಡ್ಡದ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ನಾಲ್ಕು ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ.</p>.<p>ತಾಲ್ಲೂಕಿನ ಕಣವಿಶಿದ್ಗೇರಿ ಗ್ರಾಮದ ಜಮೀನುವೊಂದರಲ್ಲಿ ಕಳೆದ ತಿಂಗಳು ಚಿರತೆ ದಾಳಿಯಿಂದ ರೈತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಬೋನು ಇಟ್ಟಿತ್ತು.</p>.<p>‘ಮಂಗಳವಾರ ಮಧ್ಯರಾತ್ರಿ ಚಿರತೆ ಸಿಕ್ಕಿದೆ. ಇನ್ನಷ್ಟು ಚಿರತೆಗಳು ಇರುವ ಬಗ್ಗೆ ಅನುಮಾನವಿದೆ. ಸೆರೆ ಸಿಕ್ಕಿರುವ ಚಿರತೆಯನ್ನು ಭದ್ರಾ ಸಂರಕ್ಷಿತ ಅರಣ್ಯ ವಲಯಕ್ಕೆ ಬಿಡಲಾಗುವುದು’ ಎಂದು ಹಿರೇಕೆರೂರ ವಲಯ ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದರು.</p>.<p>‘ಕಡೂರು, ಕುಡುಪಲಿ, ಹಾಡೇ, ಬುಳ್ಳಾಪುರ, ಜೋಕನಾಳ, ಪರ್ವತಶಿದ್ಗೇರಿ, ಕಣವಿಶಿದ್ಗೇರಿ ಗ್ರಾಮಗಳ ಸುತ್ತಮುತ್ತ ಇನ್ನೂ ಅನೇಕ ಚಿರತೆಗಳು ಇರುವುದನ್ನು ರೈತರು ಗಮನಿಸಿದ್ದಾರೆ. ಅರಣ್ಯ ಸಿಬ್ಬಂದಿ ಇನ್ನೂ ಹೆಚ್ಚಿನ ನುರಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಮಾಡವುದು ಅವಶ್ಯ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಂಕರಗೌಡ ಶಿರಗಂಬಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>