<p><strong>ಗುತ್ತಲ: </strong>ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಲತೇಶ ನಗರ ಮತ್ತು ಮೆಹಬೂಬ್ ನಗರ ಎರಡೂ ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿದ್ದು, ಅಭಿವೃದ್ಧಿ ಕಾರ್ಯ ಗೌಣವಾಗಿದೆ.</p>.<p>ಮಾಲತೇಶ ನಗರದ ಹಲವಾರು ಗಲ್ಲಿಗಳಲ್ಲಿ ಸಮರ್ಪಕವಾದ ಚರಂಡಿ ನಿರ್ಮಾಣವಾಗಿಲ್ಲ. ಚರಂಡಿಗಳಲ್ಲಿ ಮುಳ್ಳು ಮತ್ತು ಗಿಡಗಂಟಿ ಬೆಳೆದು ನಿಂತಿವೆ. ಚರಂಡಿ ನೀರು ಮುಂದಕ್ಕೆ ಸಾಗದೆ ಅಲ್ಲಿಯೆ ನಿಂತು ಗಬ್ಬು ನಾರುತ್ತಿದೆ.</p>.<p>ಚರಂಡಿ ಮತ್ತು ಮಳೆಯ ನೀರು ಜನವಸತಿ ಪ್ರದೇಶದಲ್ಲಿ ನಿಂತು ಮಲಿನಗೊಂಡು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗಿದೆ. ಸೊಳ್ಳೆಗಳ ಕಾಟಕ್ಕೆ ಅಲ್ಲಿ ವಾಸಿಸುತ್ತಿರುವ ಜನರು ಬೇಸತ್ತಿದ್ದು, ಸಾಂಕ್ರಾಮಿಕ ರೋಗದ ಭಯದ ಭೀತಿಯಲ್ಲಿದ್ದಾರೆ.</p>.<p>ಹಲವಾರು ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿದೆ. ಮಳೆಗಾಲದಲ್ಲಿ ಆ ರಸ್ತೆಗಳಲ್ಲಿ ಓಡಾಡುವ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಗತಿ ಹೇಳತೀರದಾಗಿದೆ.</p>.<p class="Subhead"><strong>ಮಂಗಗಳ ಹಾವಳಿ:</strong>‘ಈ ಬಡಾವಣೆಯು ಜಮೀನುಗಳ ಪಕ್ಕದಲ್ಲಿರುವುದರಿಂದ ಮಂಗಗಳು ನಗರಕ್ಕೆ ನುಗ್ಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ನಡೆಸುತ್ತವೆ.ಮಂಗಗಳ ಕಾಟಕ್ಕೆ ಮನೆಯ ಎದುರಿಗಿರುವ ಗಿಡಗಳನ್ನು ಕಡಿದು ಹಾಕುವ ಪರಿಸ್ಥಿತಿ ಬಂದಿದೆ’ ಎಂದು ನಿವಾಸಿ ರಾಜು ಕೂಡಲಮಠ ಸಮಸ್ಯೆ ತೋಡಿಕೊಂಡರು.</p>.<p>ಮೆಹಬೂಬ್ ನಗರ ಎಂದರೆ ನೆನಪಿಗೆ ಬರುವುದು ಕೊಳಚೆ ಪ್ರದೇಶ. ಅಲ್ಲಿ ಯಾವುದೇ ರೀತಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಚರಂಡಿಗಳು ಗಬ್ಬು ನಾರುತಿವೆ. ಎಲ್ಲ ಚರಂಡಿಗಳು ಹಂದಿಗಳ ತಾಣವಾಗಿವೆ. ಪ್ರತಿ ಚರಂಡಿಗಳಲ್ಲಿ ಹೂಳು ತುಂಬಿದ್ದು, ಬಳ್ಳಿಗಳು ಬೆಳೆದು ನಿಂತಿವೆ.</p>.<p class="Subhead"><strong>ಹದಗೆಟ್ಟ ರಸ್ತೆಗಳು:</strong>ರಸ್ತೆ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವುದು ಕೂಡ ದುಸ್ತರ. ಚರಂಡಿಗಳ ಮೇಲೆ ಬೆಳೆದಿರುವ ಗಿಡ ಬಳ್ಳಿಗಳು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಹಾವುಗಳ ಕಾಟಕ್ಕೆ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಮಕ್ಕಳನ್ನು ಬೀದಿಯಲ್ಲಿ ಆಟವಾಡಲು ಬಿಡದಂಥ ಪರಿಸ್ಥಿತಿ ಇದೆ.</p>.<p>ಸೊಳ್ಳೆಗಳ ಹಾವಳಿಯಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಇಲ್ಲಿನ ನಿವಾಸಿಗಳ ಪಾಲಿಗೆ ಮರೀಚಿಕೆಯಾಗಿದೆ.</p>.<p class="Subhead"><strong>ಶೌಚಾಲಯ ಸೌಲಭ್ಯವಿಲ್ಲ:</strong>‘ಮಾಲತೇಶ ನಗರ ಮತ್ತು ಮೆಹಬೂಬ್ ನಗರದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯಗಳ ಸೌಲಭ್ಯವಿಲ್ಲ. ಹೀಗಾಗಿ ಬಯಲುಶೌಚಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ’ ಎಂದು ಮಹಿಳೆಯರು ಗೋಳು ತೋಡಿಕೊಂಡರು.</p>.<p>ಮಾಲತೇಶ ಮತ್ತು ಮೆಹಬೂಬ್ ನಗರಕ್ಕೆ ಮೂಲಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ, ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಆ ಬಡಾವಣೆಗಳ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುತ್ತಲ: </strong>ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಲತೇಶ ನಗರ ಮತ್ತು ಮೆಹಬೂಬ್ ನಗರ ಎರಡೂ ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿದ್ದು, ಅಭಿವೃದ್ಧಿ ಕಾರ್ಯ ಗೌಣವಾಗಿದೆ.</p>.<p>ಮಾಲತೇಶ ನಗರದ ಹಲವಾರು ಗಲ್ಲಿಗಳಲ್ಲಿ ಸಮರ್ಪಕವಾದ ಚರಂಡಿ ನಿರ್ಮಾಣವಾಗಿಲ್ಲ. ಚರಂಡಿಗಳಲ್ಲಿ ಮುಳ್ಳು ಮತ್ತು ಗಿಡಗಂಟಿ ಬೆಳೆದು ನಿಂತಿವೆ. ಚರಂಡಿ ನೀರು ಮುಂದಕ್ಕೆ ಸಾಗದೆ ಅಲ್ಲಿಯೆ ನಿಂತು ಗಬ್ಬು ನಾರುತ್ತಿದೆ.</p>.<p>ಚರಂಡಿ ಮತ್ತು ಮಳೆಯ ನೀರು ಜನವಸತಿ ಪ್ರದೇಶದಲ್ಲಿ ನಿಂತು ಮಲಿನಗೊಂಡು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗಿದೆ. ಸೊಳ್ಳೆಗಳ ಕಾಟಕ್ಕೆ ಅಲ್ಲಿ ವಾಸಿಸುತ್ತಿರುವ ಜನರು ಬೇಸತ್ತಿದ್ದು, ಸಾಂಕ್ರಾಮಿಕ ರೋಗದ ಭಯದ ಭೀತಿಯಲ್ಲಿದ್ದಾರೆ.</p>.<p>ಹಲವಾರು ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿದೆ. ಮಳೆಗಾಲದಲ್ಲಿ ಆ ರಸ್ತೆಗಳಲ್ಲಿ ಓಡಾಡುವ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಗತಿ ಹೇಳತೀರದಾಗಿದೆ.</p>.<p class="Subhead"><strong>ಮಂಗಗಳ ಹಾವಳಿ:</strong>‘ಈ ಬಡಾವಣೆಯು ಜಮೀನುಗಳ ಪಕ್ಕದಲ್ಲಿರುವುದರಿಂದ ಮಂಗಗಳು ನಗರಕ್ಕೆ ನುಗ್ಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ನಡೆಸುತ್ತವೆ.ಮಂಗಗಳ ಕಾಟಕ್ಕೆ ಮನೆಯ ಎದುರಿಗಿರುವ ಗಿಡಗಳನ್ನು ಕಡಿದು ಹಾಕುವ ಪರಿಸ್ಥಿತಿ ಬಂದಿದೆ’ ಎಂದು ನಿವಾಸಿ ರಾಜು ಕೂಡಲಮಠ ಸಮಸ್ಯೆ ತೋಡಿಕೊಂಡರು.</p>.<p>ಮೆಹಬೂಬ್ ನಗರ ಎಂದರೆ ನೆನಪಿಗೆ ಬರುವುದು ಕೊಳಚೆ ಪ್ರದೇಶ. ಅಲ್ಲಿ ಯಾವುದೇ ರೀತಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಚರಂಡಿಗಳು ಗಬ್ಬು ನಾರುತಿವೆ. ಎಲ್ಲ ಚರಂಡಿಗಳು ಹಂದಿಗಳ ತಾಣವಾಗಿವೆ. ಪ್ರತಿ ಚರಂಡಿಗಳಲ್ಲಿ ಹೂಳು ತುಂಬಿದ್ದು, ಬಳ್ಳಿಗಳು ಬೆಳೆದು ನಿಂತಿವೆ.</p>.<p class="Subhead"><strong>ಹದಗೆಟ್ಟ ರಸ್ತೆಗಳು:</strong>ರಸ್ತೆ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವುದು ಕೂಡ ದುಸ್ತರ. ಚರಂಡಿಗಳ ಮೇಲೆ ಬೆಳೆದಿರುವ ಗಿಡ ಬಳ್ಳಿಗಳು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಹಾವುಗಳ ಕಾಟಕ್ಕೆ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಮಕ್ಕಳನ್ನು ಬೀದಿಯಲ್ಲಿ ಆಟವಾಡಲು ಬಿಡದಂಥ ಪರಿಸ್ಥಿತಿ ಇದೆ.</p>.<p>ಸೊಳ್ಳೆಗಳ ಹಾವಳಿಯಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಇಲ್ಲಿನ ನಿವಾಸಿಗಳ ಪಾಲಿಗೆ ಮರೀಚಿಕೆಯಾಗಿದೆ.</p>.<p class="Subhead"><strong>ಶೌಚಾಲಯ ಸೌಲಭ್ಯವಿಲ್ಲ:</strong>‘ಮಾಲತೇಶ ನಗರ ಮತ್ತು ಮೆಹಬೂಬ್ ನಗರದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯಗಳ ಸೌಲಭ್ಯವಿಲ್ಲ. ಹೀಗಾಗಿ ಬಯಲುಶೌಚಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ’ ಎಂದು ಮಹಿಳೆಯರು ಗೋಳು ತೋಡಿಕೊಂಡರು.</p>.<p>ಮಾಲತೇಶ ಮತ್ತು ಮೆಹಬೂಬ್ ನಗರಕ್ಕೆ ಮೂಲಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ, ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಆ ಬಡಾವಣೆಗಳ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>