<p><strong>ಹಾವೇರಿ: </strong>ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳ ಗುತ್ತಿಗೆ ಪಡೆಯಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಮಾದಿಗ ಸಮಾಜದ ಗುತ್ತಿಗೆದಾರರಿಗೆಸಾಲ-ಸೌಲಭ್ಯ ಕಲ್ಪಿಸಲು ಸಂಘ ಮುಂದಾಗಿದೆ. ಸಾಲ-ಸೌಲಭ್ಯದ ಪ್ರಯೋಜನ ಪಡೆದು ಸ್ವಾಲಂಬಿಗಳಾಗಿ ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂಗಮೇಶ ಕಟಗೂರ್ ತಿಳಿಸಿದರು.</p>.<p>ಇಲ್ಲಿನ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ಆದಿಜಾಂಬವ ಯುವ ಒಕ್ಕೂಟ, ಮಹಿಳಾ ಘಟಕ, ವಿದ್ಯಾರ್ಥಿ ಘಟಕ, ಬೀದಿಬದಿ ವ್ಯಾಪಾರಿಗಳ ಘಟಕ, ಅಸಂಘಟಿತ ಕಾರ್ಮಿಕರ ಘಟಕ, ಆಟೊ- ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಘಟಕಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳನ್ನು, ಉಪಾಧ್ಯಕ್ಷರನ್ನು ನೇಮಿಸಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.</p>.<p>ಸಂಘದ ನೂತನ ಕಾರ್ಯಾಲಯವನ್ನು ಶೀಘ್ರ ಸ್ಥಾಪಿಸಲಾಗುವುದು. ಸಂಘದ ಮೂಲಕ ಸಂಘಟಿತ ಹೋರಾಟ ನಡೆಸಿ ನ್ಯಾಯಬದ್ಧವಾಗಿ ಮಾದಿಗ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳೋಣ ಎಂದು ಸಂಗಮೇಶ ಕಟಗೂರ್ ಹೇಳಿದರು.</p>.<p>ಸಮಾಜದ ಗುರುಗಳಾದ ಷಡಕ್ಷರಿಮುನಿ ಮಹಾಸ್ವಾಮಿಜಿ ಮಾತನಾಡಿ, ಸಂಘವು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಮುಖಂಡರಾದ ಡಿ.ಎಸ್.ಮಾಳಗಿ, ಉಡಚಪ್ಪ ಮಾಳಗಿ ಮಾತನಾಡಿದರು. ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ಗಣೇಶ ಪೂಜಾರ, ಸಂಜಯಗಾಂಧಿ ಸಂಜೀವಣ್ಣನವರ, ಮಲ್ಲಿಕಾರ್ಜುನ ಬಾಂಬೆಕರ, ಲಕ್ಷ್ಮಣ ಕನವಳ್ಳಿ , ರಂಗಪ್ಪ, ರಾಜು ಮಾದರ ಇದ್ದರು.</p>.<p class="Subhead"><strong>ಪದಾಧಿಕಾರಿಗಳ ನೇಮಕ</strong></p>.<p>ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಹಾವೇರಿ ಜಿಲ್ಲಾ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಗುತ್ತೆಪ್ಪ ಹರಿಜನ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಮಾದರ, ಉಪಾಧ್ಯಕ್ಷರಾಗಿ ರಾಮು ಮಾಳಗಿ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಮೇಗಳಮನಿ, ರಾಜ್ಯ ಸಮಿತಿಯ ಸದಸ್ಯರಾಗಿ ಮಾಹಂತೇಶ ಬ್ಯಾಡಗಿ ನೇಮಕಗೊಂಡಿದ್ದಾರೆ.</p>.<p>***</p>.<p class="Briefhead"><strong>ಮಾದಿಗರ ಸಂಘದ ಪೂರ್ವಭಾವಿ ಸಭೆಏ.4ರಂದು</strong></p>.<p>ಹಾವೇರಿ: ರಾಜ್ಯ ಆದಿ-ಜಾಂಬವ (ಮಾದಿಗರ) ಸಂಘದ ಜಿಲ್ಲಾ ಘಟಕದ ಸಭೆಯನ್ನು ರಾಜ್ಯ ಆದಿಜಾಂಬವ ಸಂಘದ ಉಪಾಧ್ಯಕ್ಷ ಗಣೇಶ ಬಿ. ಪೂಜಾರ ಅಧ್ಯಕ್ಷತೆಯಲ್ಲಿ ಏ.4ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕಾಗಿನೆಲೆ ಕ್ರಾಸ್ ಸಮೀಪದ ಮುರುಘರಾಜೇಂದ್ರ ಮಠದಲ್ಲಿ ಕರೆಯಲಾಗಿದೆ.</p>.<p>ಸದರಿ ಸಭೆಯಲ್ಲಿ ‘ಜಿಲ್ಲಾ ಮಟ್ಟದ ಮಾದಿಗರ ಸಮಾವೇಶದ ಕುರಿತು ಹಾಗೂ ಸಮಾಜದ ಸಂಘಟನೆ ಕುರಿತು ಚರ್ಚಿಸಲಾಗುತ್ತದೆ. ಜಿಲ್ಲೆಯ ಸಮಾಜದ ಮುಖಂಡರು, ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಸಭೆಗೆ ಆಗಮಿಸುವಂತೆ ಕೋರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳ ಗುತ್ತಿಗೆ ಪಡೆಯಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಮಾದಿಗ ಸಮಾಜದ ಗುತ್ತಿಗೆದಾರರಿಗೆಸಾಲ-ಸೌಲಭ್ಯ ಕಲ್ಪಿಸಲು ಸಂಘ ಮುಂದಾಗಿದೆ. ಸಾಲ-ಸೌಲಭ್ಯದ ಪ್ರಯೋಜನ ಪಡೆದು ಸ್ವಾಲಂಬಿಗಳಾಗಿ ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂಗಮೇಶ ಕಟಗೂರ್ ತಿಳಿಸಿದರು.</p>.<p>ಇಲ್ಲಿನ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ಆದಿಜಾಂಬವ ಯುವ ಒಕ್ಕೂಟ, ಮಹಿಳಾ ಘಟಕ, ವಿದ್ಯಾರ್ಥಿ ಘಟಕ, ಬೀದಿಬದಿ ವ್ಯಾಪಾರಿಗಳ ಘಟಕ, ಅಸಂಘಟಿತ ಕಾರ್ಮಿಕರ ಘಟಕ, ಆಟೊ- ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಘಟಕಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳನ್ನು, ಉಪಾಧ್ಯಕ್ಷರನ್ನು ನೇಮಿಸಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.</p>.<p>ಸಂಘದ ನೂತನ ಕಾರ್ಯಾಲಯವನ್ನು ಶೀಘ್ರ ಸ್ಥಾಪಿಸಲಾಗುವುದು. ಸಂಘದ ಮೂಲಕ ಸಂಘಟಿತ ಹೋರಾಟ ನಡೆಸಿ ನ್ಯಾಯಬದ್ಧವಾಗಿ ಮಾದಿಗ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳೋಣ ಎಂದು ಸಂಗಮೇಶ ಕಟಗೂರ್ ಹೇಳಿದರು.</p>.<p>ಸಮಾಜದ ಗುರುಗಳಾದ ಷಡಕ್ಷರಿಮುನಿ ಮಹಾಸ್ವಾಮಿಜಿ ಮಾತನಾಡಿ, ಸಂಘವು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಮುಖಂಡರಾದ ಡಿ.ಎಸ್.ಮಾಳಗಿ, ಉಡಚಪ್ಪ ಮಾಳಗಿ ಮಾತನಾಡಿದರು. ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ಗಣೇಶ ಪೂಜಾರ, ಸಂಜಯಗಾಂಧಿ ಸಂಜೀವಣ್ಣನವರ, ಮಲ್ಲಿಕಾರ್ಜುನ ಬಾಂಬೆಕರ, ಲಕ್ಷ್ಮಣ ಕನವಳ್ಳಿ , ರಂಗಪ್ಪ, ರಾಜು ಮಾದರ ಇದ್ದರು.</p>.<p class="Subhead"><strong>ಪದಾಧಿಕಾರಿಗಳ ನೇಮಕ</strong></p>.<p>ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಹಾವೇರಿ ಜಿಲ್ಲಾ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಗುತ್ತೆಪ್ಪ ಹರಿಜನ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಮಾದರ, ಉಪಾಧ್ಯಕ್ಷರಾಗಿ ರಾಮು ಮಾಳಗಿ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಮೇಗಳಮನಿ, ರಾಜ್ಯ ಸಮಿತಿಯ ಸದಸ್ಯರಾಗಿ ಮಾಹಂತೇಶ ಬ್ಯಾಡಗಿ ನೇಮಕಗೊಂಡಿದ್ದಾರೆ.</p>.<p>***</p>.<p class="Briefhead"><strong>ಮಾದಿಗರ ಸಂಘದ ಪೂರ್ವಭಾವಿ ಸಭೆಏ.4ರಂದು</strong></p>.<p>ಹಾವೇರಿ: ರಾಜ್ಯ ಆದಿ-ಜಾಂಬವ (ಮಾದಿಗರ) ಸಂಘದ ಜಿಲ್ಲಾ ಘಟಕದ ಸಭೆಯನ್ನು ರಾಜ್ಯ ಆದಿಜಾಂಬವ ಸಂಘದ ಉಪಾಧ್ಯಕ್ಷ ಗಣೇಶ ಬಿ. ಪೂಜಾರ ಅಧ್ಯಕ್ಷತೆಯಲ್ಲಿ ಏ.4ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕಾಗಿನೆಲೆ ಕ್ರಾಸ್ ಸಮೀಪದ ಮುರುಘರಾಜೇಂದ್ರ ಮಠದಲ್ಲಿ ಕರೆಯಲಾಗಿದೆ.</p>.<p>ಸದರಿ ಸಭೆಯಲ್ಲಿ ‘ಜಿಲ್ಲಾ ಮಟ್ಟದ ಮಾದಿಗರ ಸಮಾವೇಶದ ಕುರಿತು ಹಾಗೂ ಸಮಾಜದ ಸಂಘಟನೆ ಕುರಿತು ಚರ್ಚಿಸಲಾಗುತ್ತದೆ. ಜಿಲ್ಲೆಯ ಸಮಾಜದ ಮುಖಂಡರು, ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಸಭೆಗೆ ಆಗಮಿಸುವಂತೆ ಕೋರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>