ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ (ಮೆಗಾ ಮಾರುಕಟ್ಟೆ) ನೀರಿನಿಂದ ತೊಯ್ದು ಮೊಳಕೆಯೊಡೆದ ಮೆಕ್ಕೆಜೋಳವನ್ನು ರೈತರು ತೋರಿಸಿದರು
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಾರುಕಟ್ಟೆ ಕಟ್ಟಿದರೆ ಸಾಲದು. ಮೂಲ ಸೌಕರ್ಯ ಕಲ್ಪಿಸಿ ಉಪಯೋಗಕ್ಕೆ ಬರುವಂತೆ ಮಾಡಬೇಕು
ಬಸವರಾಜ ರೈತ
‘ಒಣಗಿಸುವ ಕಟ್ಟೆ ಅವೈಜ್ಞಾನಿಕ’
‘ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಬೆಳೆ ಒಣಗಿಸುವ ಕಟ್ಟೆಯಿದ್ದು ನೀರು ನಿಲ್ಲುತ್ತದೆ. ಅದು ಅವೈಜ್ಞಾನಿಕವಾಗಿದೆ. ರೈತರಿಗೆ ಸಮರ್ಪಕ ವ್ಯವಸ್ಥೆಯಿಲ್ಲ. ನಿರ್ವಹಣೆಯೂ ಶೂನ್ಯವಾಗಿದೆ’ ಎಂದು ರೈತರು ದೂರಿದರು. ‘ಮೆಕ್ಕೆಜೋಳ ನೀರಿನಿಂದ ತೊಯ್ದರೂ ಯಾರೊಬ್ಬರ ಅಧಿಕಾರಿಯೂ ತಿರುಗಿ ನೋಡಿಲ್ಲ. ರಾತ್ರಿ ವಿದ್ಯುತ್ ಸಂಪರ್ಕವಿಲ್ಲ. ಕುಡಿಯುವ ನೀರಂತೂ ಇಲ್ಲವೇ ಇಲ್ಲ. ರೈತರು ಉಳಿದುಕೊಳ್ಳಲು ವ್ಯವಸ್ಥೆಯಿಲ್ಲ‘ ಎಂದರು.