ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ಮೆಕ್ಕೆಜೋಳ ಹಾಳು: ರೈತರ ಕಣ್ಣೀರು

Published : 26 ಜೂನ್ 2025, 5:13 IST
Last Updated : 26 ಜೂನ್ 2025, 5:13 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ (ಮೆಗಾ ಮಾರುಕಟ್ಟೆ) ನೀರಿನಿಂದ ತೊಯ್ದು ಮೊಳಕೆಯೊಡೆದ ಮೆಕ್ಕೆಜೋಳವನ್ನು ರೈತರು ತೋರಿಸಿದರು
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ (ಮೆಗಾ ಮಾರುಕಟ್ಟೆ) ನೀರಿನಿಂದ ತೊಯ್ದು ಮೊಳಕೆಯೊಡೆದ ಮೆಕ್ಕೆಜೋಳವನ್ನು ರೈತರು ತೋರಿಸಿದರು
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಾರುಕಟ್ಟೆ ಕಟ್ಟಿದರೆ ಸಾಲದು. ಮೂಲ ಸೌಕರ್ಯ ಕಲ್ಪಿಸಿ ಉಪಯೋಗಕ್ಕೆ ಬರುವಂತೆ ಮಾಡಬೇಕು
ಬಸವರಾಜ ರೈತ 
‘ಒಣಗಿಸುವ ಕಟ್ಟೆ ಅವೈಜ್ಞಾನಿಕ’
‘ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಬೆಳೆ ಒಣಗಿಸುವ ಕಟ್ಟೆಯಿದ್ದು ನೀರು ನಿಲ್ಲುತ್ತದೆ. ಅದು ಅವೈಜ್ಞಾನಿಕವಾಗಿದೆ. ರೈತರಿಗೆ ಸಮರ್ಪಕ ವ್ಯವಸ್ಥೆಯಿಲ್ಲ. ನಿರ್ವಹಣೆಯೂ ಶೂನ್ಯವಾಗಿದೆ’ ಎಂದು ರೈತರು ದೂರಿದರು. ‘ಮೆಕ್ಕೆಜೋಳ ನೀರಿನಿಂದ ತೊಯ್ದರೂ ಯಾರೊಬ್ಬರ ಅಧಿಕಾರಿಯೂ ತಿರುಗಿ ನೋಡಿಲ್ಲ. ರಾತ್ರಿ ವಿದ್ಯುತ್ ಸಂಪರ್ಕವಿಲ್ಲ. ಕುಡಿಯುವ ನೀರಂತೂ ಇಲ್ಲವೇ ಇಲ್ಲ. ರೈತರು ಉಳಿದುಕೊಳ್ಳಲು ವ್ಯವಸ್ಥೆಯಿಲ್ಲ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT