<p><strong>ಹಾವೇರಿ:</strong> ಜಿಲ್ಲೆಯ ಒಂದು ಹಳ್ಳಿಯಲ್ಲಿ ಮದುವೆ ವಯಸ್ಸಿನ 600 ಯುವಕರಿದ್ದು ಅವರಿಗೆ ಕನ್ಯೆ ಸಿಗುತ್ತಿಲ್ಲ ಎಂದು ಸದಾಶಿವ ಸ್ವಾಮೀಜಿ ಹೇಳಿದರು.</p><p>ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ದುಶ್ಚಟಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ’ ಜನಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು ‘ದುಶ್ಚಟಗಳು ಕೇವಲ ಆರೋಗ್ಯ ಹಾಳು ಮಾಡಿಲ್ಲ. ಯುವಜನತೆಯ ಭವಿಷ್ಯವನ್ನು ಕಿತ್ತುಕೊಂಡಿವೆ ಎಂದರು.</p><p>ದುಶ್ಚಟಗಳಿಂದ ಯುವಜನತೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಮೀನು ಇದ್ದರೂ ಕೃಷಿ ಕೈಗೊಳ್ಳುತ್ತಿಲ್ಲ. ಇಂಥವರಿಗೆ ಹೆಣ್ಣು ಸಿಗುತ್ತಿಲ್ಲ’ ಎಂದು ಸದಾಶಿವ ಸ್ವಾಮೀಜಿ ಹೇಳಿದರು.</p><p>‘ಒಂದೇ ಹಳ್ಳಿಯಲ್ಲಿ 600 ಮಂದಿ ಮದುವೆ ವಯಸ್ಸಿನ ಯುವಕರಿದ್ದಾರೆ. ದುಶ್ಚಟಗಳಿಂದಾಗಿ ಅವರಿಗೆ ಕನ್ಯೆ ಸಿಗುತ್ತಿಲ್ಲ. ಕುಡುಕನಿಗೆ ಕನ್ಯೆ ನೀಡುವುದಿಲ್ಲವೆಂದು ಹೆಣ್ಣು ಹೆತ್ತವರು ಹೇಳುತ್ತಿದ್ದಾರೆ. ಈ ಹಳ್ಳಿಯ ಪರಿಸ್ಥಿತಿ ಕಂಡು ತುಂಬಾ ನೋವಾಗಿದೆ ಎಂದರು.</p><p>ಇದೇ ರೀತಿ ಪ್ರತಿ ಹಳ್ಳಿಯಲ್ಲೂ 50ರಿಂದ 70 ಮಂದಿ ಮದುವೆಯಾಗದ ಯುವಕರಿದ್ದಾರೆ. ಹೆತ್ತವರಿಗೆ ಅವರ ಮದುವೆಯದ್ದೇ ಚಿಂತೆಯಾಗಿದೆ. ಅಂಥ ಯುವಕರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡಿದ್ದೇವೆ. ಮದ್ಯ ಬಿಟ್ಟು ರಟ್ಟೆ ನಂಬಿ ದುಡಿದರೆ ಮದುವೆ ಭಾಗ್ಯವಿರುವುದಾಗಿ ಆಶೀರ್ವಾದ ಮಾಡಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಜಿಲ್ಲೆಯ ಒಂದು ಹಳ್ಳಿಯಲ್ಲಿ ಮದುವೆ ವಯಸ್ಸಿನ 600 ಯುವಕರಿದ್ದು ಅವರಿಗೆ ಕನ್ಯೆ ಸಿಗುತ್ತಿಲ್ಲ ಎಂದು ಸದಾಶಿವ ಸ್ವಾಮೀಜಿ ಹೇಳಿದರು.</p><p>ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ದುಶ್ಚಟಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ’ ಜನಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು ‘ದುಶ್ಚಟಗಳು ಕೇವಲ ಆರೋಗ್ಯ ಹಾಳು ಮಾಡಿಲ್ಲ. ಯುವಜನತೆಯ ಭವಿಷ್ಯವನ್ನು ಕಿತ್ತುಕೊಂಡಿವೆ ಎಂದರು.</p><p>ದುಶ್ಚಟಗಳಿಂದ ಯುವಜನತೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಮೀನು ಇದ್ದರೂ ಕೃಷಿ ಕೈಗೊಳ್ಳುತ್ತಿಲ್ಲ. ಇಂಥವರಿಗೆ ಹೆಣ್ಣು ಸಿಗುತ್ತಿಲ್ಲ’ ಎಂದು ಸದಾಶಿವ ಸ್ವಾಮೀಜಿ ಹೇಳಿದರು.</p><p>‘ಒಂದೇ ಹಳ್ಳಿಯಲ್ಲಿ 600 ಮಂದಿ ಮದುವೆ ವಯಸ್ಸಿನ ಯುವಕರಿದ್ದಾರೆ. ದುಶ್ಚಟಗಳಿಂದಾಗಿ ಅವರಿಗೆ ಕನ್ಯೆ ಸಿಗುತ್ತಿಲ್ಲ. ಕುಡುಕನಿಗೆ ಕನ್ಯೆ ನೀಡುವುದಿಲ್ಲವೆಂದು ಹೆಣ್ಣು ಹೆತ್ತವರು ಹೇಳುತ್ತಿದ್ದಾರೆ. ಈ ಹಳ್ಳಿಯ ಪರಿಸ್ಥಿತಿ ಕಂಡು ತುಂಬಾ ನೋವಾಗಿದೆ ಎಂದರು.</p><p>ಇದೇ ರೀತಿ ಪ್ರತಿ ಹಳ್ಳಿಯಲ್ಲೂ 50ರಿಂದ 70 ಮಂದಿ ಮದುವೆಯಾಗದ ಯುವಕರಿದ್ದಾರೆ. ಹೆತ್ತವರಿಗೆ ಅವರ ಮದುವೆಯದ್ದೇ ಚಿಂತೆಯಾಗಿದೆ. ಅಂಥ ಯುವಕರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡಿದ್ದೇವೆ. ಮದ್ಯ ಬಿಟ್ಟು ರಟ್ಟೆ ನಂಬಿ ದುಡಿದರೆ ಮದುವೆ ಭಾಗ್ಯವಿರುವುದಾಗಿ ಆಶೀರ್ವಾದ ಮಾಡಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>