<p><strong>ಗುತ್ತಲ:</strong> ಗೋವಿನಜೋಳಕ್ಕೆ ಬೆಲೆ ಕುಸಿತ ಮತ್ತು ಬೆಳೆಗಳಿಗೆ ಲದ್ದಿಹುಳದ ಬಾಧೆಯಿಂದ ಗೋವಿನಜೋಳ ಬೆಳೆಯುತ್ತಿರುವ ರೈತರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಲ್ಲಾಳಿಗಳ ಮತ್ತು ಸರ್ಕಾರದ ಚೆಲ್ಲಾಟದಲ್ಲಿ ಬೆಲೆಕುಸಿತದಿಂದ ಪಾರಾಗಲು ರೈತ ಹರಸಾಹಸ ಪಡುತ್ತಿದ್ದಾನೆ.</p>.<p>ಎರಡರಿಂದ ಮೂರು ಬಾರಿ ಔಷಧಿ ಸಿಂಪಡಿಸಿದರೂ ಲದ್ದಿಹುಳು ಹತೋಟಿಗೆ ಬರುತ್ತಿಲ್ಲ. ಮೋಡ ಕವಿದ ವಾತಾವರಣವಿದ್ದರೆ ಭಾರಿ ಪ್ರಮಾಣದಲ್ಲಿ ಲದ್ದಿಹುಳು ಉತ್ಪತ್ತಿಯಾಗುತ್ತಿದೆ, ಬೆಳೆ ಸಂಪೂರ್ಣ ನಾಶವಾಗುತ್ತಿದೆ ಎಂದು ರೈತ ಮಂಜುನಾಥ ಕದಂ ಹೆಳುತ್ತಾರೆ.</p>.<p>ಹಿಂದಿನ ವರ್ಷ ತರಕಾರಿ ಬೆಳೆಗಳನ್ನು ಬೆಳೆದು ಬೆಲೆ ಕುಸಿತದಿಂದ ಕೈ ಸುಟ್ಟುಕೊಂಡಿರುವ ರೈತರು ಈ ಬಾರಿ ಹಿಂಗಾರಿನಲ್ಲಿ ಗೋವಿನಜೋಳ ಬೆಳೆಯುತ್ತಿದ್ದಾರೆ. ಆದರೆ ಲದ್ದಿಹುಳ ಬಾಧೆಯಿಂದ ಬೆಳೆ ಕೈ ಸಿಗುತ್ತಿಲ್ಲ ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.</p>.<p>‘ಹಿಂದಿನ ವರ್ಷ 3 ಎಕರೆ ಈರುಳ್ಳಿ ಹಾಕಿ ಉತ್ತಮ ಬೆಳೆ ಬೆಳೆದಿದ್ದೇನೆ. ಆದರೆ ಬೆಲೆ ಕುಸಿತದಿಂದ ಬೆಳೆಗೆ ಮಾಡಿದ ಖರ್ಚುವೆಚ್ಚಕ್ಕೆ ಸಮವಾಯಿತು ಈ ಬಾರಿ ಈರುಳ್ಳಿ ಬೆಲೆ ಕುಸಿತವಿರುವದರಿಂದ ಗೋವಿನ ಜೋಳವನ್ನು ಹಾಕಿದ್ದೇನೆ. ಆದರೆ ಲದ್ದಿ ಹುಳಕ್ಕೆ ಬೆಳೆ ನಾಶವಾಗುತ್ತಿದೆ’ ಎಂದು ಪಟ್ಟಣದ ರೈತ ಸಿದ್ದಪ್ಪ ಚಿಂದಿ ಹೇಳುತ್ತಾರೆ.</p>.<p>ಈಚಿನ ದಿನಗಳಲ್ಲಿ ಗೋವಿನಜೋಳದ ಬೆಳೆಗೆ ಖರ್ಚು ಹೆಚ್ಚಾಗುತ್ತಿದೆ. ಆದರೆ ಬೆಲೆ ಕುಸಿತದಿಂದ ರೈತರಿಗೆ ಲಾಭಾಂಶವು ಕಡಿಮೆ ಬರುತ್ತಿದೆ ಎಂದು ರೈತರು ಹೇಳುತ್ತಾರೆ.</p><p>–––</p>.<p><strong>ಲದ್ದಿ ಹುಳಕ್ಕೆ ಇಮಾಮಿಥೇನ್ ಬೆಂಜೊಯಟ್ ಸಿಂಪರಣೆ ಮಾಡುವದರಿಂದ ಸಂಪೂರ್ಣ ವಾಸಿಯಾಗುತ್ತದೆ.</strong></p><p><strong>–ವಿರಭದ್ರಪ್ಪ.ಬಿ.ಎಚ್.ಸಹಾಯಕ ಕೃಷಿ ನಿರ್ದೇಶಕರು ಹಾವೇರಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುತ್ತಲ:</strong> ಗೋವಿನಜೋಳಕ್ಕೆ ಬೆಲೆ ಕುಸಿತ ಮತ್ತು ಬೆಳೆಗಳಿಗೆ ಲದ್ದಿಹುಳದ ಬಾಧೆಯಿಂದ ಗೋವಿನಜೋಳ ಬೆಳೆಯುತ್ತಿರುವ ರೈತರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಲ್ಲಾಳಿಗಳ ಮತ್ತು ಸರ್ಕಾರದ ಚೆಲ್ಲಾಟದಲ್ಲಿ ಬೆಲೆಕುಸಿತದಿಂದ ಪಾರಾಗಲು ರೈತ ಹರಸಾಹಸ ಪಡುತ್ತಿದ್ದಾನೆ.</p>.<p>ಎರಡರಿಂದ ಮೂರು ಬಾರಿ ಔಷಧಿ ಸಿಂಪಡಿಸಿದರೂ ಲದ್ದಿಹುಳು ಹತೋಟಿಗೆ ಬರುತ್ತಿಲ್ಲ. ಮೋಡ ಕವಿದ ವಾತಾವರಣವಿದ್ದರೆ ಭಾರಿ ಪ್ರಮಾಣದಲ್ಲಿ ಲದ್ದಿಹುಳು ಉತ್ಪತ್ತಿಯಾಗುತ್ತಿದೆ, ಬೆಳೆ ಸಂಪೂರ್ಣ ನಾಶವಾಗುತ್ತಿದೆ ಎಂದು ರೈತ ಮಂಜುನಾಥ ಕದಂ ಹೆಳುತ್ತಾರೆ.</p>.<p>ಹಿಂದಿನ ವರ್ಷ ತರಕಾರಿ ಬೆಳೆಗಳನ್ನು ಬೆಳೆದು ಬೆಲೆ ಕುಸಿತದಿಂದ ಕೈ ಸುಟ್ಟುಕೊಂಡಿರುವ ರೈತರು ಈ ಬಾರಿ ಹಿಂಗಾರಿನಲ್ಲಿ ಗೋವಿನಜೋಳ ಬೆಳೆಯುತ್ತಿದ್ದಾರೆ. ಆದರೆ ಲದ್ದಿಹುಳ ಬಾಧೆಯಿಂದ ಬೆಳೆ ಕೈ ಸಿಗುತ್ತಿಲ್ಲ ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.</p>.<p>‘ಹಿಂದಿನ ವರ್ಷ 3 ಎಕರೆ ಈರುಳ್ಳಿ ಹಾಕಿ ಉತ್ತಮ ಬೆಳೆ ಬೆಳೆದಿದ್ದೇನೆ. ಆದರೆ ಬೆಲೆ ಕುಸಿತದಿಂದ ಬೆಳೆಗೆ ಮಾಡಿದ ಖರ್ಚುವೆಚ್ಚಕ್ಕೆ ಸಮವಾಯಿತು ಈ ಬಾರಿ ಈರುಳ್ಳಿ ಬೆಲೆ ಕುಸಿತವಿರುವದರಿಂದ ಗೋವಿನ ಜೋಳವನ್ನು ಹಾಕಿದ್ದೇನೆ. ಆದರೆ ಲದ್ದಿ ಹುಳಕ್ಕೆ ಬೆಳೆ ನಾಶವಾಗುತ್ತಿದೆ’ ಎಂದು ಪಟ್ಟಣದ ರೈತ ಸಿದ್ದಪ್ಪ ಚಿಂದಿ ಹೇಳುತ್ತಾರೆ.</p>.<p>ಈಚಿನ ದಿನಗಳಲ್ಲಿ ಗೋವಿನಜೋಳದ ಬೆಳೆಗೆ ಖರ್ಚು ಹೆಚ್ಚಾಗುತ್ತಿದೆ. ಆದರೆ ಬೆಲೆ ಕುಸಿತದಿಂದ ರೈತರಿಗೆ ಲಾಭಾಂಶವು ಕಡಿಮೆ ಬರುತ್ತಿದೆ ಎಂದು ರೈತರು ಹೇಳುತ್ತಾರೆ.</p><p>–––</p>.<p><strong>ಲದ್ದಿ ಹುಳಕ್ಕೆ ಇಮಾಮಿಥೇನ್ ಬೆಂಜೊಯಟ್ ಸಿಂಪರಣೆ ಮಾಡುವದರಿಂದ ಸಂಪೂರ್ಣ ವಾಸಿಯಾಗುತ್ತದೆ.</strong></p><p><strong>–ವಿರಭದ್ರಪ್ಪ.ಬಿ.ಎಚ್.ಸಹಾಯಕ ಕೃಷಿ ನಿರ್ದೇಶಕರು ಹಾವೇರಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>