ರಾಣೆಬೆನ್ನೂರು: ಇಲ್ಲಿನ ಬನಶಂಕರಿನಗರದ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ರಾಣೆಬೆನ್ನೂರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಮತ್ತು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ 2016 ನೇ ಶೈಕ್ಷಣಿಕ ಸಾಲಿನಿಂದ ರಾಜ್ಯಾದ್ಯಂತ 33 ಶೈಕ್ಷಣಿಕ ಜಿಲ್ಲೆ, 176 ತಾಲ್ಲೂಕು, 2655 ಪ್ರೌಢಶಾಲೆಗಳು, 2,67,000 ಕ್ಕೂ ಅಧಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆಯ ಕುರಿತು ಜೀವನ ಅಧ್ಯಯನ ಮತ್ತು ಮೆದುಳಿನ ನಿರ್ವಹಣೆಯ ಬಗ್ಗೆ ಮನೋಬಲ ಹೆಚ್ಚಿಸುವ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿಯನ್ನು ನೀಡಿರುವುದು ಏಷ್ಯನ್ ಖಂಡದಲ್ಲಿ ವಿಶ್ವ ದಾಖಲೆಯಾಗಿದೆ.