ಠಾಣೆಯಲ್ಲಿ ಸೋಂಕು ಕಾಣಿಸಿಕೊಂಡಾಗ ಆತಂಕ ಉಂಟಾಗಿತ್ತು. ಕುಟುಂಬಕ್ಕೆ ತೊಂದರೆ ಆಗದಿರಲೆಂದು ಸಮವಸ್ತ್ರ, ಶೂಗಳನ್ನು ಮನೆ ಹೊರಗಡೆ ಇಡುತ್ತಿದ್ದೆ. ದೂರದಿಂದಲೇ ಮಾತಾಡಿ ಬರುತ್ತಿದ್ದೆ. ಎಷ್ಟೋ ಬಾರಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಮುಂಡರಗಿ, ಹಂಸಭಾವಿ, ಸವಣೂರು, ರಾಣೆಬೆನ್ನೂರು ಹಾಗೂ ಕುಮಾರಪಟ್ಟಣದಲ್ಲಿ ವಿವಿಧ ಹಂತದ ಹುದ್ದೆ ನಿರ್ವಹಿಸಿದ್ದೇನೆ.