ನಂತರ ಪ್ರಶ್ನೋತ್ತರ ಅವಧಿಯಲ್ಲಿ ವಿವಿಧ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಜ್ಞಾ ಪ್ರವಾಹದ ಪ್ರಾಂತ ಸಹ ಸಂಯೋಜಕರಾದ ನಿರಂಜನ್ ಪೂಜಾರ ಸಮರ್ಪಣ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮರ್ಪಣಾ ತಂಡದ ಡಾ.ಸಂತೋಷ ಆಲದಕಟ್ಟಿ, ವೀರೇಶ ಮತ್ತಿಹಳ್ಳಿ, ಜೆ.ಸಿ ಹಿರೇಮಠ್, ಮಲ್ಲಪ್ಪ ಕರೆಣ್ನನವರ, ರಾಜು ಬಿ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ಹಾಗೂ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.