ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಹಾವೇರಿ | ಮಳೆಯಿಂದ ಕೊಳೆಯುತ್ತಿರುವ ಮೆಕ್ಕೆಜೋಳ: ರೈತರು ಕಂಗಾಲು

ಮೋಡ ಕವಿದ ವಾತಾವರಣ, ಆಗಾಗ್ಗೆ ಮಳೆ, ಮೆಕ್ಕೆಜೋಳ ಬೆಳೆದ ರೈತರು ಕಂಗಾಲು
Published : 29 ಅಕ್ಟೋಬರ್ 2025, 3:14 IST
Last Updated : 29 ಅಕ್ಟೋಬರ್ 2025, 3:14 IST
ಫಾಲೋ ಮಾಡಿ
Comments
ಶಿವಪ್ಪ ದೇಸೂರು
ಶಿವಪ್ಪ ದೇಸೂರು
ಒಣಗಲು ಹಾಕಿದ್ದ 50 ಕ್ವಿಂಟಲ್ ಮೆಕ್ಕೆಜೋಳ ಮಳೆಯಿಂದ ಹಾಳಾಗಿದೆ. ಸಾಕಷ್ಟು ರೈತರು ಈ ಗೋಳು ಅನುಭವಿಸುತ್ತಿದ್ದಾರೆ. ಮಳೆಯಿಂದಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು
ಶಿವಪ್ಪ ದೇಸೂರು ಜೇಕಿನಕಟ್ಟಿ ರೈತ
‘ನೀರಿನ ಜೊತೆ ತೇಲಿಹೋದ ಕಾಳು’
ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ರಾಜ್ಯ ಹೆದ್ದಾರಿಯ ಒಂದು ಬದಿ ಖಾಲಿ ಜಾಗವಿರುವ ಕಡೆಗಳಲ್ಲಿ ಮೆಕ್ಕೆಜೋಳವನ್ನು ಒಣಗಿಸಲು ಹಾಕಿರುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಕೆಲ ಕಡೆಗಳಲ್ಲಿ ಮೆಕ್ಕೆಜೋಳದ ತೆನೆಗಳಿವೆ. ಉಳಿದ ಕಡೆಗಳಲ್ಲಿ ಮೆಕ್ಕೆಜೋಳದ ಕಾಳುಗಳಿವೆ. ಮಳೆ ಸುರಿದ ಸಂದರ್ಭದಲ್ಲಿ ಕಾಳುಗಳು ನೀರಿನ ಜೊತೆಯಲ್ಲಿ ತೇಲಿಹೋಗುತ್ತಿರುವುದು ರೈತರನ್ನು ಕಂಗಲಾಗಿಸಿದೆ. ‘ಬಂಕಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆಯಲ್ಲಿ ಮೆಕ್ಕೆಜೋಳದ ಕಾಳುಗಳನ್ನು ಒಣಗಲು ಹಾಕಿದ್ದೆವು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರಿನ ಜೊತೆಯಲ್ಲಿಯೇ ಕಾಳುಗಳು ತೇಲಿಹೋಗಿವೆ. ರಸ್ತೆಯಲ್ಲಿ ಸಿಕ್ಕ ಅಲ್ಪ ಕಾಳುಗಳನ್ನು ಸಂಗ್ರಹಿಸಿ ಪುನಃ ಒಣಗಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಬಂಕಾಪುರ ರೈತ ಚನ್ನವೀರಪ್ಪ ಹೇಳಿದರು.
ಹಾವೇರಿ ಜಿಲ್ಲೆಯ ಸವಣೂರು ಎಪಿಎಂಸಿಯಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳದ ಕಾಳುಗಳು ಮಳೆಯಿಂದಾಗಿ ಮೊಳಕೆಯೊಡೆದಿರುವುದು
ಹಾವೇರಿ ಜಿಲ್ಲೆಯ ಸವಣೂರು ಎಪಿಎಂಸಿಯಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳದ ಕಾಳುಗಳು ಮಳೆಯಿಂದಾಗಿ ಮೊಳಕೆಯೊಡೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT