‘ಯಾವ ಜಾಗದಲ್ಲಿ ನಿಂತುಕೊಂಡು ನೋಡುತ್ತೇವೆ ಎಂಬುದರ ಆಧಾರದಲ್ಲಿ ಇದು ಗೋಚರಿಸುತ್ತದೆ. ನೆತ್ತಿಯ ಮೇಲೆ ಮೋಡಗಳಿದ್ದು, ಅದರಲ್ಲಿ ಮಂಜುಗಡ್ಡೆಯ ತುಣುಕುಗಳಿದ್ದರೆ, ಸೂರ್ಯನ ಬೆಳಕಿನ ಕಿರಣಗಳು ಪ್ರತಿಫಲನ ಮತ್ತು ವರ್ಣ ವಿಭಜನೆಗೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳಿಂದ ಉಂಗುರ ಗೋಚರಿಸುತ್ತದೆ. ಅದು ಸೂರ್ಯನ ಸುತ್ತ ಇರುವುದಿಲ್ಲ. ಅದು ಮೋಡದ ಸುತ್ತ ಉಂಟಾಗುತ್ತದೆ. ನಮಗೆ ಸೂರ್ಯನ ಸುತ್ತ ಇರುವಂತೆ ಕಂಡು ಬರುತ್ತದೆ. ಈ ವರ್ಷದಲ್ಲಿ ಎರಡು ಮೂರು ಬಾರಿ ಈ ರೀತಿ ಕಾಣಿಸಿಕೊಂಡಿದೆ. ಇದೊಂದು ಸಹಜ ಪ್ರಕ್ರಿಯೆ’ ಎನ್ನುತ್ತಾರೆ ಮೇವುಂಡಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ವೀರೇಶ ಗಡ್ಡದೇವರಮಠ.