ತಡಸ, ಹೊಸೂರು, ಹಿರೇಬೆಂಡಿಗೇರಿ, ಕಬನೂರ, ಮುಗಳಿ, ಮನಹಳ್ಳಿ, ಬಮ್ಮನಹಳ್ಳಿ, ಕೋಣನಕೇರಿ, ಕಡಳ್ಳಿ, ನೀರಲಗಿ, ದುಂಡಶಿ, ಮಲ್ಲೂರ, ಮಂತ್ರೋಡಿ, ಸೇರಿದಂತೆ ಅನೇಕ ಹಳ್ಳಿಗಳಿಗೆ ಬಸ್ಗಳು ಇದ್ದರೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ಆದ್ದರಿಂದ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಹೆಚ್ಚುವರಿ ಬಸ್ ಗಳನ್ನು ಬಿಡುವುದರ ಜೊತೆಗೆ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಗಳನ್ನು ಬಿಡಬೇಕು ಎಂದು ಮನವಿ ಮಾಡಿದರು.