ವಾಹನ ಸವಾರರಿಗೆ ಸಂಕಷ್ಟ:ಪ್ರತಿದಿನಾ ಶಾಲಾ ವಾಹನಗಳು, ಬಸ್ಸುಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಸಂಚಾರ ಮಾಡಬೇಕಾಗಿರುವುದರಿಂದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸುವುದೇ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ. ಭಾರಿ ಗಾತ್ರದ ವಾಹನಗಳು ಗುಂಡಿಗಳನ್ನು ನೋಡದೇ ವೇಗವಾಗಿ ಚಲಿಸುತ್ತಿರುತ್ತವೆ. ರಸ್ತೆಯ ಗುಂಡಿಯ ಅಕ್ಕಪಕ್ಕದಲ್ಲಿನ ದೂಳು ದ್ವಿಚಕ್ರ ವಾಹನ ಸವಾರರಿಗೆ ಅಡರುತ್ತಿದೆ. ಕೆಲವು ಸಲ ದೂಳು ದ್ವಿಚಕ್ರ ವಾಹನಸವಾರರ ಕಣ್ಣಿಗೆ ಬಿದ್ದು, ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ. ಮಳೆ ಬಂದರಂತೂ ವಾಹನ ಸವಾರರ ಗೋಳು ಹೇಳತೀರದು.