<p><strong>ಶಿಗ್ಗಾವಿ: ‘</strong>ತಾಯಿ ಮೃತರಾಗಿದ್ದಾರೆ’ ಎಂದು ಪುರಸಭೆಗೆ ಸುಳ್ಳು ಅರ್ಜಿ ನೀಡಿ ಮರಣ ಪ್ರಮಾಣ ಪತ್ರ ಪಡೆದುಕೊಂಡಿರುವ ಮಗನ ವಿರುದ್ಧ ತಾಯಿಯೇ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. </p>.<p>ಶಿಗ್ಗಾವಿ ಪಟ್ಟಣದ ಖಾಜೆಖಾನಗಲ್ಲಿಯ ನಿವಾಸಿ ಹೂರಾಂಬಿ ಜಂಗ್ಲಿಸಾಬ ಮುಲ್ಕಿ(60) ಹಾಗೂ ಹುಬ್ಬಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುವ ಆಕೆಯ ಪುತ್ರ ಶೌಕತ್ಅಲಿ ಜಂಗ್ಲಿಸಾಬ ಮುಲ್ಕಿ ಇಬ್ಬರ ಹೆಸರಿನಲ್ಲಿ ಜಂಟಿಯಾಗಿ ಎರಡು ಎಕರೆ ಆಸ್ತಿಯಿದೆ. </p>.<p>‘ಆಸ್ತಿಯನ್ನು ಸಂಪೂರ್ಣವಾಗಿ ಕಬಳಿಸಬೇಕು ಎಂಬ ದುರುದ್ದೇಶದಿಂದ ಜೀವಂತವಾಗಿರುವ ತಾಯಿ ಮೃತರಾಗಿದ್ದಾರೆ ಎಂದು ಪುರಸಭೆಗೆ ಖೊಟ್ಟಿ ದಾಖಲೆ ನೀಡಿ ಮರಣ ಪತ್ರ ಪಡೆದಿದ್ದಾನೆ. ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ತಾಯಿ ಹೂರಾಂಬಿ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>‘ಮೇ 6ರಂದು ತಾಯಿ ಮೃತರಾಗಿದ್ದಾರೆಂದು ಪುರಸಭೆಗೆ ಸುಳ್ಳು ಮಾಹಿತಿ ನೀಡಿದ್ದು ಜೂನ್ 9ರಂದು ಪುರಸಭೆಯಲ್ಲಿ ನೋಂದಣಿ ಆಗಿದೆ. ಈ ಕುರಿತು ಗಲ್ಲಿಯಲ್ಲಿನ ಜನರಿಂದ ಮಾಹಿತಿ ತಿಳಿದಾಗ, ಜೂನ್ 11ರಂದು ಪುರಸಭೆಯಲ್ಲಿ ಮಗ ಮರಣ ಪ್ರಮಾಣ ಪತ್ರ ಪಡೆದಿರುವುದನ್ನು ತಿಳಿದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎಂದು ಹೂರಾಂಬಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ: ‘</strong>ತಾಯಿ ಮೃತರಾಗಿದ್ದಾರೆ’ ಎಂದು ಪುರಸಭೆಗೆ ಸುಳ್ಳು ಅರ್ಜಿ ನೀಡಿ ಮರಣ ಪ್ರಮಾಣ ಪತ್ರ ಪಡೆದುಕೊಂಡಿರುವ ಮಗನ ವಿರುದ್ಧ ತಾಯಿಯೇ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. </p>.<p>ಶಿಗ್ಗಾವಿ ಪಟ್ಟಣದ ಖಾಜೆಖಾನಗಲ್ಲಿಯ ನಿವಾಸಿ ಹೂರಾಂಬಿ ಜಂಗ್ಲಿಸಾಬ ಮುಲ್ಕಿ(60) ಹಾಗೂ ಹುಬ್ಬಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುವ ಆಕೆಯ ಪುತ್ರ ಶೌಕತ್ಅಲಿ ಜಂಗ್ಲಿಸಾಬ ಮುಲ್ಕಿ ಇಬ್ಬರ ಹೆಸರಿನಲ್ಲಿ ಜಂಟಿಯಾಗಿ ಎರಡು ಎಕರೆ ಆಸ್ತಿಯಿದೆ. </p>.<p>‘ಆಸ್ತಿಯನ್ನು ಸಂಪೂರ್ಣವಾಗಿ ಕಬಳಿಸಬೇಕು ಎಂಬ ದುರುದ್ದೇಶದಿಂದ ಜೀವಂತವಾಗಿರುವ ತಾಯಿ ಮೃತರಾಗಿದ್ದಾರೆ ಎಂದು ಪುರಸಭೆಗೆ ಖೊಟ್ಟಿ ದಾಖಲೆ ನೀಡಿ ಮರಣ ಪತ್ರ ಪಡೆದಿದ್ದಾನೆ. ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ತಾಯಿ ಹೂರಾಂಬಿ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>‘ಮೇ 6ರಂದು ತಾಯಿ ಮೃತರಾಗಿದ್ದಾರೆಂದು ಪುರಸಭೆಗೆ ಸುಳ್ಳು ಮಾಹಿತಿ ನೀಡಿದ್ದು ಜೂನ್ 9ರಂದು ಪುರಸಭೆಯಲ್ಲಿ ನೋಂದಣಿ ಆಗಿದೆ. ಈ ಕುರಿತು ಗಲ್ಲಿಯಲ್ಲಿನ ಜನರಿಂದ ಮಾಹಿತಿ ತಿಳಿದಾಗ, ಜೂನ್ 11ರಂದು ಪುರಸಭೆಯಲ್ಲಿ ಮಗ ಮರಣ ಪ್ರಮಾಣ ಪತ್ರ ಪಡೆದಿರುವುದನ್ನು ತಿಳಿದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎಂದು ಹೂರಾಂಬಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>