<p><strong>ಹಾವೇರಿ:</strong> ಇಲ್ಲಿಯ ಗುದ್ಲೆಪ್ಪ ಹಳ್ಳಿಕೇರಿ (ಜೆ.ಎಚ್.) ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಆಹಾರ ದಿನವನ್ನು ಗುರುವಾರ ವಿಶೇಷವಾಗಿ ಆಚರಿಸಿದರು.</p>.<p>ನಗರದ ನಾಗೇಂದ್ರನಮಟ್ಟಿ ಬಳಿ ಇರುವ ಶಕ್ತಿಧಾಮ ವೃದ್ಧಾಶ್ರಮಕ್ಕೆ ತೆರಳಿದ್ದ ವಿದ್ಯಾರ್ಥಿಗಳು, ಅಲ್ಲಿಯ ವೃದ್ಧರಿಗೆ ಊಟ ಬಡಿಸಿ ಆಹಾರದ ಮಹತ್ವ ತಿಳಿಸಿದರು.</p>.<p>ಕಾಲೇಜಿನ ಎನ್ಎಸ್ಎಸ್ ಘಟಕದಿಂದ ಪ್ರತಿ ವರ್ಷವೂ ಆಹಾರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ವರ್ಷವೂ ವಿದ್ಯಾರ್ಥಿಗಳೇ ಖುದ್ದಾಗಿ ಅಡುಗೆ ಸಿದ್ಧಪಡಿಸಿದ್ದರು. ಅದೇ ಅಡುಗೆಯನ್ನು ವೃದ್ಧಾಶ್ರಮಕ್ಕೆ ಕೊಂಡೊಯ್ದು ಹಿರಿಯ ನಾಗರಿಕರಿಗೆ ನೀಡಿದರು.</p>.<p>ನಾನಾ ಕಾರಣಗಳಿಂದ ವೃದ್ಧಾಶ್ರಮ ಸೇರಿರುವ ಹಿರಿಯ ನಾಗರಿಕರು, ಕುಟುಂಬದ ಸದಸ್ಯರಿಂದ ದೂರವುಳಿದುಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಊಟ ಮಾಡುವ ಅವಕಾಶದಿಂದಲೂ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರ ಜೊತೆ ಸಾಮೂಹಿಕ ಭೋಜನ ಸವಿದು ಕುಟುಂಬದ ವಾತಾವರಣ ನಿರ್ಮಿಸಿದರು.</p>.<p>ವೃದ್ಧಾಶ್ರಮದ ನಿವಾಸಿಗಳೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ಅವರ ಅನುಭವಗಳನ್ನು ತಿಳಿದುಕೊಂಡರು. ಪ್ರತಿಯೊಬ್ಬ ವೃದ್ಧರ ಕಥೆಗಳನ್ನು ಕಣ್ಣೀರಿಟ್ಟರು. ದುಡಿಯುವ ವಯಸ್ಸಿನಲ್ಲಿ ಕುಟುಂಬಕ್ಕಾಗಿ ದುಡಿದು ಮಕ್ಕಳನ್ನು ಬೆಳೆಸಿದ್ದ ಪೋಷಕರು, ಇಂದು ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿರುವುದನ್ನು ಕಂಡು ಮರುಕಪಟ್ಟರು.</p>.<p>ವಿದ್ಯಾರ್ಥಿಗಳ ವಿಶೇಷ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಎಂ.ಹೊಳ್ಳಿಯವರ, ರೂಪಾ ಕೋರೆ, ರಮೇಶ್ ಅಜರೆಡ್ಡಿ, ಕೆ.ಎಚ್. ಬ್ಯಾಡಗಿ, ಆತ್ಮಾನಂದ ಎಚ್., ಪ್ರಭಾಕರ ಸಿ., ಶಮನ್ತ್ ಕುಮಾರ್ ಕೆ.ಎಸ್., ಶಿವಾನಂದ ಪಾಯಮಲ್ಲೆ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಇಲ್ಲಿಯ ಗುದ್ಲೆಪ್ಪ ಹಳ್ಳಿಕೇರಿ (ಜೆ.ಎಚ್.) ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಆಹಾರ ದಿನವನ್ನು ಗುರುವಾರ ವಿಶೇಷವಾಗಿ ಆಚರಿಸಿದರು.</p>.<p>ನಗರದ ನಾಗೇಂದ್ರನಮಟ್ಟಿ ಬಳಿ ಇರುವ ಶಕ್ತಿಧಾಮ ವೃದ್ಧಾಶ್ರಮಕ್ಕೆ ತೆರಳಿದ್ದ ವಿದ್ಯಾರ್ಥಿಗಳು, ಅಲ್ಲಿಯ ವೃದ್ಧರಿಗೆ ಊಟ ಬಡಿಸಿ ಆಹಾರದ ಮಹತ್ವ ತಿಳಿಸಿದರು.</p>.<p>ಕಾಲೇಜಿನ ಎನ್ಎಸ್ಎಸ್ ಘಟಕದಿಂದ ಪ್ರತಿ ವರ್ಷವೂ ಆಹಾರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ವರ್ಷವೂ ವಿದ್ಯಾರ್ಥಿಗಳೇ ಖುದ್ದಾಗಿ ಅಡುಗೆ ಸಿದ್ಧಪಡಿಸಿದ್ದರು. ಅದೇ ಅಡುಗೆಯನ್ನು ವೃದ್ಧಾಶ್ರಮಕ್ಕೆ ಕೊಂಡೊಯ್ದು ಹಿರಿಯ ನಾಗರಿಕರಿಗೆ ನೀಡಿದರು.</p>.<p>ನಾನಾ ಕಾರಣಗಳಿಂದ ವೃದ್ಧಾಶ್ರಮ ಸೇರಿರುವ ಹಿರಿಯ ನಾಗರಿಕರು, ಕುಟುಂಬದ ಸದಸ್ಯರಿಂದ ದೂರವುಳಿದುಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಊಟ ಮಾಡುವ ಅವಕಾಶದಿಂದಲೂ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರ ಜೊತೆ ಸಾಮೂಹಿಕ ಭೋಜನ ಸವಿದು ಕುಟುಂಬದ ವಾತಾವರಣ ನಿರ್ಮಿಸಿದರು.</p>.<p>ವೃದ್ಧಾಶ್ರಮದ ನಿವಾಸಿಗಳೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ಅವರ ಅನುಭವಗಳನ್ನು ತಿಳಿದುಕೊಂಡರು. ಪ್ರತಿಯೊಬ್ಬ ವೃದ್ಧರ ಕಥೆಗಳನ್ನು ಕಣ್ಣೀರಿಟ್ಟರು. ದುಡಿಯುವ ವಯಸ್ಸಿನಲ್ಲಿ ಕುಟುಂಬಕ್ಕಾಗಿ ದುಡಿದು ಮಕ್ಕಳನ್ನು ಬೆಳೆಸಿದ್ದ ಪೋಷಕರು, ಇಂದು ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿರುವುದನ್ನು ಕಂಡು ಮರುಕಪಟ್ಟರು.</p>.<p>ವಿದ್ಯಾರ್ಥಿಗಳ ವಿಶೇಷ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಎಂ.ಹೊಳ್ಳಿಯವರ, ರೂಪಾ ಕೋರೆ, ರಮೇಶ್ ಅಜರೆಡ್ಡಿ, ಕೆ.ಎಚ್. ಬ್ಯಾಡಗಿ, ಆತ್ಮಾನಂದ ಎಚ್., ಪ್ರಭಾಕರ ಸಿ., ಶಮನ್ತ್ ಕುಮಾರ್ ಕೆ.ಎಸ್., ಶಿವಾನಂದ ಪಾಯಮಲ್ಲೆ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>