‘ಶಿಗ್ಗಾವಿ ಟಾರ್ಗೆಟ್ ಮಾಡ್ತಿಲ್ಲ. ಯಾವುದೇ ಕ್ಷೇತ್ರದಲ್ಲಿ ನಿಂತರೂ ರಾಜಕಾರಣ ಮಾಡುತ್ತೇವೆ. ಅಷ್ಟಕ್ಕೂ ನನಗೆ ನನ್ನ ಕ್ಷೇತ್ರವಿದೆ; ದುರಾಸೆ ಇಲ್ಲ’ ಎಂದು ಹೇಳಿದರು. ‘ನಾನು ಧಾರವಾಡಕ್ಕೆ ಹೋಗಲು ಸರ್ಕಾರ ಸಾಕಷ್ಟು ಅಡ್ಡಿಪಡಿಸಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ದಮನ ಆಗುತ್ತಿದೆ. ಇತ್ತೀಚಿನ ರಾಹುಲ್ ಗಾಂಧಿಯವರ ಮೇಲಿನ ಪ್ರಕರಣ ನೋಡಿದರೆ ರಾಜ ಕಾರಣ ಬೇಡವೆನಿಸುತ್ತಿದೆ. ಆದಾಗ್ಯೂ ನಮ್ಮ ಜನರಿಗಾಗಿ ರಾಜಕಾರಣ ಮಾಡಬೇಕಿದೆ’ ಎಂದರು.