‘ವಿಜಯನಗರ ಜಿಲ್ಲೆಯ ಹುವಿನಹಡಗಿಲಿ ಸಮೀಪದ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ತಲಾ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಂಥದ್ದೇ ಪ್ರಕರಣದಲ್ಲಿ ದಸ್ತಾಪುರದಲ್ಲಿ ಸೆ. 29ರಂದು ದ್ರೌಪದಿ (65) ಹಾಗೂ ಕಮಲಾಬಾಯಿ (56) ಮೃತಪಟ್ಟಿದ್ದರೂ ಪ್ರತಿಕ್ರಿಯೆ ಕೂಡ ನೀಡಿಲ್ಲ. ಮಾತ್ರವಲ್ಲ; ಈವರೆಗೆ 50 ಮಂದಿ ವಾಂತಿ– ಭೇದಿಯಿಂದ ನರಳಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ ವೈಯಕ್ತಿಕ ನೆರವು ನೀಡುವುದಾಗಿ ಶಾಸಕ ಬಸವರಾಜ ಮತ್ತಿಮೂಡ ಹೇಳಿದ್ದಾರೆ. ಆದರೆ, ಇನ್ನೂ ಪರಿಹಾರ ಬಂದಿಲ್ಲ. ಕನಿಷ್ಠಪಕ್ಷ ಸರ್ಕಾರದ ನೆವನ್ನಾದರೂ ಕೂಡಲೇ ನೀಡಬೇಕು’ ಎಂದು ಗ್ರಾಮದ ಮುಖಂಡ ಧೂಳಪ್ಪ ಕಮಲಾಪುರಕರ್ ಆಗ್ರಹಿಸಿದ್ದಾರೆ.