ದೇಗಲಮಡಿ ಮತ್ತು ಕಲ್ಲೂರು ರೋಡ್ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಪಡಿತರ ಧಾನ್ಯ ಎತ್ತುವಳಿ ಮಾಡಿ ಪಡಿತರ ಚೀಟಿದಾರರಿಗೆ ಹಂಚಲು ಒಯ್ದಿರುತ್ತಾರೆ. ಶೇ 50ರಷ್ಟು ಕಾರ್ಡ್ಗಳಿಗೆ ಪಡಿತರ ವಿತರಿಸಿದ್ದಾರೆ. ಉಳಿದ ಪಡಿತರ ಅಗಡಿಯಲ್ಲಿ ದಾಸ್ತಾನು ಇರುವಾಗಲೇ ಮಳೆಯ ಪ್ರವಾಹದ ನೀರು ನುಗ್ಗಿ ಅಕ್ಕಿ, ಬೇಳೆ ಮೊದಲಾದ ಧಾನ್ಯ ಹಾಳಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ನ್ಯಾಯಬೆಲೆ ಅಂಗಡಿಯವರಿಗೆ ಪರಿಹಾರ ಒದಗಿಸಲು ಕೋರುವುದಾಗಿ ಅವರು ತಿಳಿಸಿದರು.