<p><strong>ಕಾಳಗಿ:</strong> ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿದ್ದ ತಾಲ್ಲೂಕಿನ ತೆಂಗಳಿ ಗ್ರಾಮದ ಕಾಶಿರಾಯ ನಾಯಿಕೋಡಿ ನಿವೃತ್ತರಾದ ಬಳಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.</p>.<p>ಒಣ ಬೇಸಾಯಕ್ಕೆ ಒಲವು ತೋರಿರುವ ಅವರು ನಾಲ್ಕು ವರ್ಷಗಳಿಂದ ಬಾಳೆ ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಉತ್ಸಾಹಿ ಕೃಷಿಕರಾಗಿದ್ದಾರೆ.</p>.<p>ಭೀಮೇಶ್ವರ ದೇವಸ್ಥಾನ ಸಮೀಪದ 4 ಎಕರೆ ಹೊಲಕ್ಕೆ 2ಕಿ.ಮೀ ದೂರದ ಹಳ್ಳದಿಂದ (ಬೆಣ್ಣೆತೊರಾ ನದಿ) ಪೈಪ್ಲೈನ್ ವ್ಯವಸ್ಥೆ ಮಾಡಿಕೊಂಡು ನೀರಾವರಿ ವ್ಯವಸ್ತೆ ಮಾಡಿಕೊಂಡಿದ್ದಾರೆ.</p>.<p>15 ಎಚ್ಪಿ ಚಿಕ್ಕ ಟ್ರ್ಯಾಕ್ಟರ್ ಮತ್ತು ಒಬ್ಬ ಆಳುಮಗನ ನೆರವಿನೊಂದಿಗೆ ಹೆಂಡೆಗೊಬ್ಬರ, ಗೋಮೂತ್ರ, ಕೋಳಿ ಮಲ, ಕುರಿ ಹಿಕ್ಕಿ, ಬೇವಿನ ಹಿಂಡಿ ಹೊಲಕ್ಕೆ ಹಾಕಿ ಅವರು<br />ಮಣ್ಣು ಹದಗೊಳಿಸಿದ್ದಾರೆ.</p>.<p>ತೋಟಗಾರಿಕೆ ಇಲಾಖೆ ನೆರವಿನೊಂದಿಗೆ 1.5ಎಕರೆ ಜಮೀನಲ್ಲಿ 1800 ಬಾಳೆ ಗಿಡಗಳನ್ನು ನೆಟ್ಟು ಪ್ರತಿ ಗಿಡದಲ್ಲಿ 12ರಿಂದ 14ಡಜನ್ ಫಲ ಪಡೆಯುತ್ತಿದ್ದಾರೆ. 3 ವರ್ಷದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.</p>.<p>ಇನ್ನುಳಿದ ತಮ್ಮ ಜಮೀನಲ್ಲಿ 500 ಹೆಬ್ಬೇವು ಮತ್ತು ಸುಜಲಾ ಯೋಜನೆಯಡಿ 300 ನಿಂಬೆ ಗಿಡಗಳನ್ನು ನೆಟ್ಟಿದ್ದಾರೆ. ಒಂದೊಂದು ನಿಂಬೆಗಿಡದಲ್ಲಿ 300ರಿಂದ 400ನಿಂಬೆಕಾಯಿ ಬರುತ್ತಿವೆ. ಈ ನಿಂಬೆಗಿಡಗಳ ಮಧ್ಯೆ 400 ನುಗ್ಗಿ ಗಿಡಗಳನ್ನು ನೆಡಲಾಗಿದೆ. ಈ ನಡುವೆ ಅಲ್ಪಸ್ವಲ್ಪ ಹೂವು, ತರಕಾರಿ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.</p>.<p>‘ಮುಂಬರುವ ದಿನಗಳಲ್ಲಿ ಈರುಳ್ಳಿ ಶೆಡ್ ನಿರ್ಮಿಸಿ ಈರುಳ್ಳಿ ಬೆಳೆಯುವ ಉದ್ದೇಶವಿದೆ. ವಿವಿಧ ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಆಸಕ್ತಿಯಿದೆ’ ಎಂದು ಕಾಶಿರಾಯ ನಾಯಿಕೋಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿದ್ದ ತಾಲ್ಲೂಕಿನ ತೆಂಗಳಿ ಗ್ರಾಮದ ಕಾಶಿರಾಯ ನಾಯಿಕೋಡಿ ನಿವೃತ್ತರಾದ ಬಳಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.</p>.<p>ಒಣ ಬೇಸಾಯಕ್ಕೆ ಒಲವು ತೋರಿರುವ ಅವರು ನಾಲ್ಕು ವರ್ಷಗಳಿಂದ ಬಾಳೆ ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಉತ್ಸಾಹಿ ಕೃಷಿಕರಾಗಿದ್ದಾರೆ.</p>.<p>ಭೀಮೇಶ್ವರ ದೇವಸ್ಥಾನ ಸಮೀಪದ 4 ಎಕರೆ ಹೊಲಕ್ಕೆ 2ಕಿ.ಮೀ ದೂರದ ಹಳ್ಳದಿಂದ (ಬೆಣ್ಣೆತೊರಾ ನದಿ) ಪೈಪ್ಲೈನ್ ವ್ಯವಸ್ಥೆ ಮಾಡಿಕೊಂಡು ನೀರಾವರಿ ವ್ಯವಸ್ತೆ ಮಾಡಿಕೊಂಡಿದ್ದಾರೆ.</p>.<p>15 ಎಚ್ಪಿ ಚಿಕ್ಕ ಟ್ರ್ಯಾಕ್ಟರ್ ಮತ್ತು ಒಬ್ಬ ಆಳುಮಗನ ನೆರವಿನೊಂದಿಗೆ ಹೆಂಡೆಗೊಬ್ಬರ, ಗೋಮೂತ್ರ, ಕೋಳಿ ಮಲ, ಕುರಿ ಹಿಕ್ಕಿ, ಬೇವಿನ ಹಿಂಡಿ ಹೊಲಕ್ಕೆ ಹಾಕಿ ಅವರು<br />ಮಣ್ಣು ಹದಗೊಳಿಸಿದ್ದಾರೆ.</p>.<p>ತೋಟಗಾರಿಕೆ ಇಲಾಖೆ ನೆರವಿನೊಂದಿಗೆ 1.5ಎಕರೆ ಜಮೀನಲ್ಲಿ 1800 ಬಾಳೆ ಗಿಡಗಳನ್ನು ನೆಟ್ಟು ಪ್ರತಿ ಗಿಡದಲ್ಲಿ 12ರಿಂದ 14ಡಜನ್ ಫಲ ಪಡೆಯುತ್ತಿದ್ದಾರೆ. 3 ವರ್ಷದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.</p>.<p>ಇನ್ನುಳಿದ ತಮ್ಮ ಜಮೀನಲ್ಲಿ 500 ಹೆಬ್ಬೇವು ಮತ್ತು ಸುಜಲಾ ಯೋಜನೆಯಡಿ 300 ನಿಂಬೆ ಗಿಡಗಳನ್ನು ನೆಟ್ಟಿದ್ದಾರೆ. ಒಂದೊಂದು ನಿಂಬೆಗಿಡದಲ್ಲಿ 300ರಿಂದ 400ನಿಂಬೆಕಾಯಿ ಬರುತ್ತಿವೆ. ಈ ನಿಂಬೆಗಿಡಗಳ ಮಧ್ಯೆ 400 ನುಗ್ಗಿ ಗಿಡಗಳನ್ನು ನೆಡಲಾಗಿದೆ. ಈ ನಡುವೆ ಅಲ್ಪಸ್ವಲ್ಪ ಹೂವು, ತರಕಾರಿ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.</p>.<p>‘ಮುಂಬರುವ ದಿನಗಳಲ್ಲಿ ಈರುಳ್ಳಿ ಶೆಡ್ ನಿರ್ಮಿಸಿ ಈರುಳ್ಳಿ ಬೆಳೆಯುವ ಉದ್ದೇಶವಿದೆ. ವಿವಿಧ ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಆಸಕ್ತಿಯಿದೆ’ ಎಂದು ಕಾಶಿರಾಯ ನಾಯಿಕೋಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>