<p><strong>ಕಲಬುರಗಿ:</strong> ‘ಬಂಡಾಯ ಸಾಹಿತಿ ಪ್ರೊ.ಸೂಗಯ್ಯ ಹಿರೇಮಠ ಅವರದ್ದು ಅಪ್ಪಟ ಜಾನಪದ ಬದುಕಾಗಿತ್ತು’ ಎಂದು ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಿವರಾಜ ಪಾಟೀಲ ಹೇಳಿದರು.</p>.<p>ಸೂಗಯ್ಯ ಹಿರೇಮಠ ಸಾಹಿತ್ಯ–ಸಂಸ್ಕೃತಿ ಪ್ರತಿಷ್ಠಾನ, ಸರ್ವೋದಯ ಅಭಿವೃದ್ಧಿ ಸೇವಾ ಸಂಘದ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಪ್ರೊ.ಸೂಗಯ್ಯ ಹಿರೇಮಠ ಅವರ ‘ಬದುಕು–ಬರಹ ಒಂದು ಚಿಂತನ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.</p>.<p>‘ತಮ್ಮ ಸಾಹಿತ್ಯದ ಮೂಲಕ ಅಳಿದ ನಂತರವೂ ಉಳಿದ ಸೂಗಯ್ಯನವರು ನೇರ ನಡೆ–ನುಡಿ ಉಳ್ಳವರಾಗಿದ್ದರು. ಸಗರ ನಾಡಿನ ಸುಗಂಧವನ್ನು ನಾಡಿನಾದ್ಯಂತ ಪಸರಿಸಿದ ಸರಳ–ಸಜ್ಜನಿಕೆಯ ವ್ಯಕ್ತಿಯಾಗಿದ್ದರು’ ಎಂದು ಅವರು ತಿಳಿಸಿದರು.</p>.<p>ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಮಾತನಾಡಿ,‘ವೈಚಾರಿಕ, ವಸ್ತುನಿಷ್ಠ ಬರಹಗಾರರಾಗಿದ್ದ ಸೂಗಯ್ಯನವರು ತಮ್ಮ ಕಾವ್ಯ ಕೃತಿಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ಅನಾವರಣಗೊಳಿಸಿದರು’ ಎಂದರು.</p>.<p>ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನದ ಅಧ್ಯಕ್ಷ ಗವಿಸಿದ್ದಪ್ಪ ಪಾಟೀಲ ಅವರು ಸೂಗಯ್ಯ ಹಿರೇಮಠ ಅವರ ಕೃತಿಗಳ ಅವಲೋಕನ ಮಾಡಿದರು.</p>.<p>ಸಾಮಾಜಿಕ ಚಿಂತನೆಗಳ ಕುರಿತು ಸಾಹಿತಿ ಚಿ.ಸಿ.ನಿಂಗಣ್ಣ, ‘ದೇಶಿಯ ಭಾಷೆ ಹಾಗೂ ಬಂಡಾಯದ ನಿಲುವುಗಳು’ ಕುರಿತು ಪತ್ರಕರ್ತ ಹಾಗೂ ಲೇಖಕ ಶಿವರಂಜನ ಸತ್ಯಂಪೇಟೆ ಮಾತನಾಡಿದರು. ಉಪನ್ಯಾಸಕ ಪ್ರೊ.ಕೆ.ವೀರಪ್ಪ ಹಿರೇಮಠ ಅವರ ಒಡನಾಟ ಸ್ಮರಿಸಿದರು.</p>.<p>ಟ್ರಸ್ಟ್ನ ಗೌರವಾಧ್ಯಕ್ಷ ಪ.ಮಾನು ಸಗರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ನಟರಾಜ ಸೂಗಯ್ಯ ಹಿರೇಮಠ ಹಾಗೂ ಉಪಾಧ್ಯಕ್ಷ ಗಿರಿಮಲ್ಲಪ್ಪ ಹರವಾಳ, ಪ್ರೊ.ಎಸ್.ಎಲ್.ಪಾಟೀಲ, ಕನಕಪ್ಪ ಬಿಲ್ಲವ, ಮಹೇಶ ಕುಲಕರ್ಣಿ, ಬಾಬು ಮಿಟೇಕರ್, ಮಂಜುನಾಥ ಪಾಟೀಲ ಸೇರಿ ಅನೇಕರು ಹಾಜರಿದ್ದರು.</p>.<p>ಚಿದಾನಂದ ಹಿರೇಮಠ ಸ್ವಾಗತಿಸಿದರು. ಶಂಕರಗೌಡ ಪಾಟೀಲ ನಿರೂಪಿಸಿದರು. ಕುಶಾಲ ಯಡವಳ್ಳಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಬಂಡಾಯ ಸಾಹಿತಿ ಪ್ರೊ.ಸೂಗಯ್ಯ ಹಿರೇಮಠ ಅವರದ್ದು ಅಪ್ಪಟ ಜಾನಪದ ಬದುಕಾಗಿತ್ತು’ ಎಂದು ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಿವರಾಜ ಪಾಟೀಲ ಹೇಳಿದರು.</p>.<p>ಸೂಗಯ್ಯ ಹಿರೇಮಠ ಸಾಹಿತ್ಯ–ಸಂಸ್ಕೃತಿ ಪ್ರತಿಷ್ಠಾನ, ಸರ್ವೋದಯ ಅಭಿವೃದ್ಧಿ ಸೇವಾ ಸಂಘದ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಪ್ರೊ.ಸೂಗಯ್ಯ ಹಿರೇಮಠ ಅವರ ‘ಬದುಕು–ಬರಹ ಒಂದು ಚಿಂತನ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.</p>.<p>‘ತಮ್ಮ ಸಾಹಿತ್ಯದ ಮೂಲಕ ಅಳಿದ ನಂತರವೂ ಉಳಿದ ಸೂಗಯ್ಯನವರು ನೇರ ನಡೆ–ನುಡಿ ಉಳ್ಳವರಾಗಿದ್ದರು. ಸಗರ ನಾಡಿನ ಸುಗಂಧವನ್ನು ನಾಡಿನಾದ್ಯಂತ ಪಸರಿಸಿದ ಸರಳ–ಸಜ್ಜನಿಕೆಯ ವ್ಯಕ್ತಿಯಾಗಿದ್ದರು’ ಎಂದು ಅವರು ತಿಳಿಸಿದರು.</p>.<p>ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಮಾತನಾಡಿ,‘ವೈಚಾರಿಕ, ವಸ್ತುನಿಷ್ಠ ಬರಹಗಾರರಾಗಿದ್ದ ಸೂಗಯ್ಯನವರು ತಮ್ಮ ಕಾವ್ಯ ಕೃತಿಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ಅನಾವರಣಗೊಳಿಸಿದರು’ ಎಂದರು.</p>.<p>ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನದ ಅಧ್ಯಕ್ಷ ಗವಿಸಿದ್ದಪ್ಪ ಪಾಟೀಲ ಅವರು ಸೂಗಯ್ಯ ಹಿರೇಮಠ ಅವರ ಕೃತಿಗಳ ಅವಲೋಕನ ಮಾಡಿದರು.</p>.<p>ಸಾಮಾಜಿಕ ಚಿಂತನೆಗಳ ಕುರಿತು ಸಾಹಿತಿ ಚಿ.ಸಿ.ನಿಂಗಣ್ಣ, ‘ದೇಶಿಯ ಭಾಷೆ ಹಾಗೂ ಬಂಡಾಯದ ನಿಲುವುಗಳು’ ಕುರಿತು ಪತ್ರಕರ್ತ ಹಾಗೂ ಲೇಖಕ ಶಿವರಂಜನ ಸತ್ಯಂಪೇಟೆ ಮಾತನಾಡಿದರು. ಉಪನ್ಯಾಸಕ ಪ್ರೊ.ಕೆ.ವೀರಪ್ಪ ಹಿರೇಮಠ ಅವರ ಒಡನಾಟ ಸ್ಮರಿಸಿದರು.</p>.<p>ಟ್ರಸ್ಟ್ನ ಗೌರವಾಧ್ಯಕ್ಷ ಪ.ಮಾನು ಸಗರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ನಟರಾಜ ಸೂಗಯ್ಯ ಹಿರೇಮಠ ಹಾಗೂ ಉಪಾಧ್ಯಕ್ಷ ಗಿರಿಮಲ್ಲಪ್ಪ ಹರವಾಳ, ಪ್ರೊ.ಎಸ್.ಎಲ್.ಪಾಟೀಲ, ಕನಕಪ್ಪ ಬಿಲ್ಲವ, ಮಹೇಶ ಕುಲಕರ್ಣಿ, ಬಾಬು ಮಿಟೇಕರ್, ಮಂಜುನಾಥ ಪಾಟೀಲ ಸೇರಿ ಅನೇಕರು ಹಾಜರಿದ್ದರು.</p>.<p>ಚಿದಾನಂದ ಹಿರೇಮಠ ಸ್ವಾಗತಿಸಿದರು. ಶಂಕರಗೌಡ ಪಾಟೀಲ ನಿರೂಪಿಸಿದರು. ಕುಶಾಲ ಯಡವಳ್ಳಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>