ಇಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಹಿಂದಿನ ಸರ್ಕಾರ ಈ ಬಗ್ಗೆ ವಿಳಂಬ ಧೋರಣೆ ಮಾಡಿದ್ದಕ್ಕೆ ಏನಾಯಿತು ಎಂಬುದು ಆ ಪಕ್ಷ, ಸರ್ಕಾರಕ್ಕೂ ಗೊತ್ತಿದೆ. ಲೋಕಸಭೆ ಚುನಾವಣೆಯ ಒಳಗೆ ಜಾರಿಯಾಗದೆ ಇದ್ದರೆ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಎಂಬುದು ಮಾರ್ಚ್ 10ರಂದು ನಡೆಯುವ ಸಮಾವೇಶದಲ್ಲಿ ನಿರ್ಣಯವಾಗಲಿದೆ’ ಎಂದು ಎಚ್ಚರಿಸಿದರು.