ಮಂದೇವಾಲ ಗ್ರಾಮದ ಯುವ ಬಳಗದ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಭಗತ್ ಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಸರ್ದಾರ್ ವಲ್ಲಭಭಾಯಿ ಪಟೇಲ್, ಸಂಗೊಳ್ಳಿ ರಾಯಣ್ಣ, ಸಾವರ್ಕರ್, ಸುಖದೇವ, ರಾಜಗುರು, ಚಂದ್ರಶೇಖರ ಆಜಾದ್, ಸುಭಾಷ್ಚಂದ್ರ ಬೋಸ್ ಜತೆಗೆ ನಾಥೂರಾಮ ಗೋಡ್ಸೆ ಭಾವಚಿತ್ರವನ್ನೂ ಇಟ್ಟು ಪೂಜೆ ಸಲ್ಲಿಸಲಾಗಿದೆ. ಬಳಿಕ ಎಲ್ಲ ನಾಯಕರ ಭಾವಚಿತ್ರಗಳೊಂದಿಗೆ ಗೋಡ್ಸೆ ಭಾವಚಿತ್ರವನ್ನೂ ಎತ್ತಿನ ಬಂಡಿ ಮೇಲಿಟ್ಟು ಮೆರವಣಿಗೆ ಮಾಡಲಾಯಿತು.