<p>ಚಿಂಚೋಳಿ: ಬಿಸಿಲುನಾಡಿನ ಜೀವ ವೈವಿಧ್ಯ ತಾಣವಾಗಿರುವ ಚಿಂಚೋಳಿ ವನ್ಯಜೀವಿಧಾಮ ಹಚ್ಚ ಹಸಿರಿನಿಂದ ಮೈದುಂಬಿಕೊಂಡು ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿದೆ.</p>.<p>ಚಿಕ್ಕಲಿಂಗದಳ್ಳಿ ಕೆರೆ, ಶಾದಿಪುರ ನವಿಲು ಗುಡ್ಡ, ಶೇರಿಭಿಕನಳ್ಳಿ ಲಾಲ್ ತಾಲಾಬ್, ಆನೆ ಪಳಗಿಸುವ ಶಾಲೆಯಾಗಿರುವ ಹಾಥಿ ಪಕಡಿ, ಎತ್ತಿಪೋತೆ ಜಲಪಾತ, ಗೊಟ್ಟಂಗೊಟ್ಟ ಪ್ರಕೃತಿಯ ರಮಣೀಯತೆ, ಸೋಮಲಿಂಗದಳ್ಳಿಯ ಮಹಿಶಮ್ಮನ ಬೆಟ್ಟ, ಮಂಡಿ ಬಸವಣ್ಣ ಕ್ಯಾಂಪ್, ಚಂದ್ರಂಪಳ್ಳಿ ಜಲಾಶಯ ಈ ಕಾಡಿನಲ್ಲಿ ಬರುವ ಪ್ರೇಕ್ಷಣೀಯ ತಾಣಗಳಾಗಿವೆ.</p>.<p>ಸುಮಾರು 13,488 ಹೆಕ್ಟೇರ್ ವಿಶಾಲವಾದ, ದಕ್ಷಿಣ ಭಾರತದ ಶುಷ್ಕ ವಲಯದ ಏಕೈಕ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ವನಸಿರಿಯನ್ನು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಹಾಥಿಪಕಡಿ, ಗೊಟ್ಟಮಗೊಟ್ಟ, ನವಿಲುಗುಡ್ಡ, ಮಹಿಶಮ್ಮನ ಬೆಟ್ಟಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದೆ.</p>.<p>ಚಂದ್ರಂಪಳ್ಳಿ ಜಲಾಶಯದ ದಂಡೆಯಲ್ಲಿ ಕಾಟೇಜ್ ನಿರ್ಮಿಸಲಾಗಿದೆ. ಇಲ್ಲಿನ ರೈತ ತರಬೇತಿ ಭವನವು ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿಗೃಹವನ್ನು ನೆನಪಿಸುಂತಿದೆ. ಚಂದ್ರಂಪಳ್ಳಿ ಜಲಾಶಯ ಈಗ ಶೇ 40ರಷ್ಟು ಭರ್ತಿಯಾಗಿದೆ. ಇನ್ನೊಂದೆರಡು ದೊಡ್ಡ ಮಳೆಗಳು ಸುರಿದರೆ ಜಲಾಶಯ ತುಂಬಲಿದೆ.</p>.<p>ಅಪರೂಪದ ಗಿಡ ಮರಗಳು, ಔಷಧೀಯ ಸಸ್ಯಗಳು ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳು ಇರುವ ಈ ವನ್ಯಜೀವಿ ಧಾಮವನ್ನು ನೋಡಲು ಈಗ ಸಕಾಲ. ಎಲೆ ಉದುರುವ ಕಾಡಾಗಿರುವ ಇದು ಡಿಸೆಂಬರ್ವರೆಗೆ ಹಸಿರು ಸೂಸುತ್ತಿರುತ್ತದೆ.</p>.<p>ಜಲಪಾತಗಳು ಬೇಸಿಗೆಯಲ್ಲಿ ನಿಂತು ಹೋಗುತ್ತವೆ. ಪರಿಸರ ಪ್ರಿಯರು, ಚಾರಣಿಗರು ಮಲೆನಾಡ ಸಿರಿಯಲ್ಲಿ ಮಿಂದೇಳಲು ಈಗ ಬಂದು ಹೋಗಬೇಕು. ಕಾಡಿನ ಒಳಗಡೆ ಹೋಗಬೇಕಾದರೆ ಕಾಡಿನ ಪರಿಚಯ ಉಳ್ಳವರು ಜತೆಗಿರಬೇಕು. ಜತೆಗೆ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ.</p>.<p>ಕಾಟೇಜ್ ಬೇಕಾದರೆ ಚಿಂಚೋಳಿಯ ವನ್ಯಜೀವಿಧಾಮ ಅಥವಾ ಕಲಬುರ್ಗಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು. ಮಾಹಿತಿಗಾಗಿ ಸಂಜೀವಕುಮಾರ ಚವ್ಹಾಣ (9008570173) ಅವರನ್ನು ಸಂಪರ್ಕಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂಚೋಳಿ: ಬಿಸಿಲುನಾಡಿನ ಜೀವ ವೈವಿಧ್ಯ ತಾಣವಾಗಿರುವ ಚಿಂಚೋಳಿ ವನ್ಯಜೀವಿಧಾಮ ಹಚ್ಚ ಹಸಿರಿನಿಂದ ಮೈದುಂಬಿಕೊಂಡು ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿದೆ.</p>.<p>ಚಿಕ್ಕಲಿಂಗದಳ್ಳಿ ಕೆರೆ, ಶಾದಿಪುರ ನವಿಲು ಗುಡ್ಡ, ಶೇರಿಭಿಕನಳ್ಳಿ ಲಾಲ್ ತಾಲಾಬ್, ಆನೆ ಪಳಗಿಸುವ ಶಾಲೆಯಾಗಿರುವ ಹಾಥಿ ಪಕಡಿ, ಎತ್ತಿಪೋತೆ ಜಲಪಾತ, ಗೊಟ್ಟಂಗೊಟ್ಟ ಪ್ರಕೃತಿಯ ರಮಣೀಯತೆ, ಸೋಮಲಿಂಗದಳ್ಳಿಯ ಮಹಿಶಮ್ಮನ ಬೆಟ್ಟ, ಮಂಡಿ ಬಸವಣ್ಣ ಕ್ಯಾಂಪ್, ಚಂದ್ರಂಪಳ್ಳಿ ಜಲಾಶಯ ಈ ಕಾಡಿನಲ್ಲಿ ಬರುವ ಪ್ರೇಕ್ಷಣೀಯ ತಾಣಗಳಾಗಿವೆ.</p>.<p>ಸುಮಾರು 13,488 ಹೆಕ್ಟೇರ್ ವಿಶಾಲವಾದ, ದಕ್ಷಿಣ ಭಾರತದ ಶುಷ್ಕ ವಲಯದ ಏಕೈಕ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ವನಸಿರಿಯನ್ನು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಹಾಥಿಪಕಡಿ, ಗೊಟ್ಟಮಗೊಟ್ಟ, ನವಿಲುಗುಡ್ಡ, ಮಹಿಶಮ್ಮನ ಬೆಟ್ಟಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದೆ.</p>.<p>ಚಂದ್ರಂಪಳ್ಳಿ ಜಲಾಶಯದ ದಂಡೆಯಲ್ಲಿ ಕಾಟೇಜ್ ನಿರ್ಮಿಸಲಾಗಿದೆ. ಇಲ್ಲಿನ ರೈತ ತರಬೇತಿ ಭವನವು ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿಗೃಹವನ್ನು ನೆನಪಿಸುಂತಿದೆ. ಚಂದ್ರಂಪಳ್ಳಿ ಜಲಾಶಯ ಈಗ ಶೇ 40ರಷ್ಟು ಭರ್ತಿಯಾಗಿದೆ. ಇನ್ನೊಂದೆರಡು ದೊಡ್ಡ ಮಳೆಗಳು ಸುರಿದರೆ ಜಲಾಶಯ ತುಂಬಲಿದೆ.</p>.<p>ಅಪರೂಪದ ಗಿಡ ಮರಗಳು, ಔಷಧೀಯ ಸಸ್ಯಗಳು ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳು ಇರುವ ಈ ವನ್ಯಜೀವಿ ಧಾಮವನ್ನು ನೋಡಲು ಈಗ ಸಕಾಲ. ಎಲೆ ಉದುರುವ ಕಾಡಾಗಿರುವ ಇದು ಡಿಸೆಂಬರ್ವರೆಗೆ ಹಸಿರು ಸೂಸುತ್ತಿರುತ್ತದೆ.</p>.<p>ಜಲಪಾತಗಳು ಬೇಸಿಗೆಯಲ್ಲಿ ನಿಂತು ಹೋಗುತ್ತವೆ. ಪರಿಸರ ಪ್ರಿಯರು, ಚಾರಣಿಗರು ಮಲೆನಾಡ ಸಿರಿಯಲ್ಲಿ ಮಿಂದೇಳಲು ಈಗ ಬಂದು ಹೋಗಬೇಕು. ಕಾಡಿನ ಒಳಗಡೆ ಹೋಗಬೇಕಾದರೆ ಕಾಡಿನ ಪರಿಚಯ ಉಳ್ಳವರು ಜತೆಗಿರಬೇಕು. ಜತೆಗೆ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ.</p>.<p>ಕಾಟೇಜ್ ಬೇಕಾದರೆ ಚಿಂಚೋಳಿಯ ವನ್ಯಜೀವಿಧಾಮ ಅಥವಾ ಕಲಬುರ್ಗಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು. ಮಾಹಿತಿಗಾಗಿ ಸಂಜೀವಕುಮಾರ ಚವ್ಹಾಣ (9008570173) ಅವರನ್ನು ಸಂಪರ್ಕಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>