ಈ ಸಂದರ್ಭದಲ್ಲಿ ಮಾತನಾಡಿದ ಚೆರಿಯನ್, ‘ಯಹೂದಿಗಳನ್ನು ಇನ್ನಿಲ್ಲದಂತೆ ಕಾಡಿದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸಿನಿಮಾ ಮಾಧ್ಯಮವನ್ನು ತನಗೆ ಅನುಕೂಲವಾಗುವಂತೆ ದುರ್ಬಳಕೆ ಮಾಡಿಕೊಂಡ. ಸಿನಿಮಾ ಮಾಧ್ಯಮ ಒಂದು ಸಶಕ್ತ ಮಾಧ್ಯಮವಾಗಿದ್ದು, ಇದನ್ನು ಜನರ ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಬಳಸಿಕೊಳ್ಳಬೇಕಾಗಿದೆ’ ಎಂದರು.