ಮುಖಂಡ ಬಿ.ಆರ್. ಪಾಟೀಲ ಮಾತನಾಡಿ, ‘ಇಎಸ್ಐ ಆಸ್ಪತ್ರೆ, ಜಿಮ್ಸ್, ಹೈಕೋರ್ಟ್ ಸೇರಿದಂತೆ ಹಲವು ಮೂಲಸೌಕರ್ಯ ಹಾಗೂ ಯೋಜನೆಗಳನ್ನು ಸಾಕಾರ ಮಾಡಿದ್ದು ಕಾಂಗ್ರೆಸ್ ನಾಯಕರು. ಆದರೆ, ಈಗಿನ ಬಿಜೆಪಿ ಮುಖಂಡರು ಇವುಗಳನ್ನೂ ತಮ್ಮದೇ ಸಾಧನೆ ಎಂದು ಹೇಳಿಕೊಳ್ಳುವಷ್ಟು ದಡ್ಡರಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾಗಿದ್ದ ಡಾ.ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ದಿವಂಗತರಾದ ವೀರೇಂದ್ರ ಪಾಟೀಲ, ಧರ್ಮಸಿಂಗ್ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅದರ ಪ್ರತಿಫಲವನ್ನು ನಾವಿಂದು ಪಡೆಯುತ್ತಿದ್ದೇವೆ. ಬಿಜೆಪಿಯವರಿಗೆ ಹೇಳಿಕೊಳ್ಳುವುದಕ್ಕೆ ಇಂಥ ಒಂದು ಸಾಧನೆಯೂ ಇಲ್ಲ’ ಎಂದರು.