<p><strong>ಕಲಬುರ್ಗಿ</strong>: ಗುರುವಾರದಿಂದ ಜಾರಿಗೊಳಿಸಿದ ಮೂರು ದಿನಗಳ ಸಂಪೂರ್ಣ ಲಾಕ್ಡೌನ್ಗೆ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿವೆ. ವಾಹನ, ಜನ ಸಂಚಾರ ಇಲ್ಲದೇ ರಸ್ತೆಗಳು ಬಿಕೊ ಎನ್ನುತ್ತಿವೆ. ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದರಿಂದ ಜನ ಹೊರಗೆ ಬಾರದಾದರು.</p>.<p>ನಗರದ ಜನನಿಬಿಡ ಪ್ರದೇಶಗಳಾದ ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ಬಸ್ ನಿಲ್ದಾಣ, ಶಹಾಬಜಾರ್, ಮುಸ್ಲಿಂ ಚೌಕ, ರಾಷ್ಟ್ರಪತಿ ಚೌಕ, ಎಪಿಎಂಸಿ ಮುಂತಾದ ಪ್ರದೇಶಗಳು ಗುರುವಾರ ಎಂದಿನಂತೆ ಇರಲಿಲ್ಲ. ಎಲ್ಲ ತರದ ಚಟುವಟಿಕೆಗಳಿಗೂ ತಡೆ ಹಾಕಿದ್ದರಿಂದ ಇಡೀ ನಗರ ಮೌನಕ್ಕೆ ಶರಣಾಯಿತು.</p>.<p>ಹಾಲು, ಔಷಧಿ ತರಲು ಕೆಲವರು ಕಾಲ್ನಡಿಗೆಯಲ್ಲಿ ಹೊರಗೆ ಬಂದಿದ್ದು ಬಿಟ್ಟರೆ ಬಹುಪಾಲು ಜನ ಮನೆಯಲ್ಲೇ ಉಳಿದರು. ಬೆಳಿಗ್ಗೆ 10 ಗಂಟೆ ನಂತರ ಅದಕ್ಕೂ ನಿರ್ಬಂಧ ಹೇರಲಾಯಿತು.</p>.<p>ಕಿರಾಣಿ ಅಂಗಡಿ, ತರಕಾರಿ ಮಾರಾಟ, ಮದ್ಯದಂಗಡಿ ಸೇರಿದಂತೆ ಎಲ್ಲವನ್ನೂ ಬಂದ್ ಮಾಡಲಾಗಿದೆ. ಹೋಟೆಲ್ಗಳಿಂದ ಪಾರ್ಸೆಲ್ ನೀಡಲು ಅವಕಾಶವಿದ್ದರೂ ಉಪಾಹಾರಕ್ಕೆ ಜನ ಸುಳಿಯಲಿಲ್ಲ. ಪೆಟ್ರೋಲ್ ಬಂಕ್ಗಳು ತೆರೆದಿದ್ದರೂ ವಾಹನ ಸವಾರರಿಲ್ಲದೇ ಕೆಲಸಗಾರರು ಸುಮ್ಮನೇ ಕುಳಿತುಕೊಳ್ಳುವಂತಾಯಿತು.</p>.<p>ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಾವಲು ನಿಂತಿದ್ದಾರೆ. ಹೊರಗಿನಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಲ್ಲ ರಸ್ತೆಗಳಲ್ಲೂ ಕಾವಲು ಬಿಗಿಗೊಳಿಸಲಾಗಿದೆ.</p>.<p><strong>ಪೊಲೀಸ್ ವಾಹನದಲ್ಲೇ ಮಹಿಳೆ, ಮಕ್ಕಳನ್ನು ಮನೆ ತಲುಪಿಸಿದ ಎಎಸ್ಐ:</strong>ಮುಂಬೈನಿಂದ ರೈಲಿನ ಮೂಲಕ ಕಲಬುರ್ಗಿ ನಗರಕ್ಕೆ ಬಂದ ಮೂವರು ಮಹಿಳೆಯರು, ಇಬ್ಬರು ಪುರುಷರು ಆಟೊ ಸಂಚಾರವಿಲ್ಲದೇ ಇಲ್ಲಿನ ಎಸ್ವಿಪಿ ವೃತ್ತದಲ್ಲಿ ಕಾಯುತ್ತ ಕುಳಿತಿದ್ದರು. ಅವರೊಂದಿಗೆ ಮೂವರ ಪುಟಾಣಿ ಮಕ್ಕಳೂ ಇದ್ದರು.</p>.<p>ಇದನ್ನು ಕಂಡು ನಾಗರಿಕರೊಬ್ಬರು ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಠಾಣೆ ಎಎಸ್ಐ ಇನಾಮದಾರ್ ಅವರು ಪೊಲೀಸ್ ವಾಹನದಲ್ಲೇ ಮಹಿಳೆ, ಮಕ್ಕಳು ಹಾಗೂ ಪುರುಷರನ್ನು ಅವರ ಮನೆಗೆ ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ಗುರುವಾರದಿಂದ ಜಾರಿಗೊಳಿಸಿದ ಮೂರು ದಿನಗಳ ಸಂಪೂರ್ಣ ಲಾಕ್ಡೌನ್ಗೆ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿವೆ. ವಾಹನ, ಜನ ಸಂಚಾರ ಇಲ್ಲದೇ ರಸ್ತೆಗಳು ಬಿಕೊ ಎನ್ನುತ್ತಿವೆ. ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದರಿಂದ ಜನ ಹೊರಗೆ ಬಾರದಾದರು.</p>.<p>ನಗರದ ಜನನಿಬಿಡ ಪ್ರದೇಶಗಳಾದ ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ಬಸ್ ನಿಲ್ದಾಣ, ಶಹಾಬಜಾರ್, ಮುಸ್ಲಿಂ ಚೌಕ, ರಾಷ್ಟ್ರಪತಿ ಚೌಕ, ಎಪಿಎಂಸಿ ಮುಂತಾದ ಪ್ರದೇಶಗಳು ಗುರುವಾರ ಎಂದಿನಂತೆ ಇರಲಿಲ್ಲ. ಎಲ್ಲ ತರದ ಚಟುವಟಿಕೆಗಳಿಗೂ ತಡೆ ಹಾಕಿದ್ದರಿಂದ ಇಡೀ ನಗರ ಮೌನಕ್ಕೆ ಶರಣಾಯಿತು.</p>.<p>ಹಾಲು, ಔಷಧಿ ತರಲು ಕೆಲವರು ಕಾಲ್ನಡಿಗೆಯಲ್ಲಿ ಹೊರಗೆ ಬಂದಿದ್ದು ಬಿಟ್ಟರೆ ಬಹುಪಾಲು ಜನ ಮನೆಯಲ್ಲೇ ಉಳಿದರು. ಬೆಳಿಗ್ಗೆ 10 ಗಂಟೆ ನಂತರ ಅದಕ್ಕೂ ನಿರ್ಬಂಧ ಹೇರಲಾಯಿತು.</p>.<p>ಕಿರಾಣಿ ಅಂಗಡಿ, ತರಕಾರಿ ಮಾರಾಟ, ಮದ್ಯದಂಗಡಿ ಸೇರಿದಂತೆ ಎಲ್ಲವನ್ನೂ ಬಂದ್ ಮಾಡಲಾಗಿದೆ. ಹೋಟೆಲ್ಗಳಿಂದ ಪಾರ್ಸೆಲ್ ನೀಡಲು ಅವಕಾಶವಿದ್ದರೂ ಉಪಾಹಾರಕ್ಕೆ ಜನ ಸುಳಿಯಲಿಲ್ಲ. ಪೆಟ್ರೋಲ್ ಬಂಕ್ಗಳು ತೆರೆದಿದ್ದರೂ ವಾಹನ ಸವಾರರಿಲ್ಲದೇ ಕೆಲಸಗಾರರು ಸುಮ್ಮನೇ ಕುಳಿತುಕೊಳ್ಳುವಂತಾಯಿತು.</p>.<p>ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಾವಲು ನಿಂತಿದ್ದಾರೆ. ಹೊರಗಿನಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಲ್ಲ ರಸ್ತೆಗಳಲ್ಲೂ ಕಾವಲು ಬಿಗಿಗೊಳಿಸಲಾಗಿದೆ.</p>.<p><strong>ಪೊಲೀಸ್ ವಾಹನದಲ್ಲೇ ಮಹಿಳೆ, ಮಕ್ಕಳನ್ನು ಮನೆ ತಲುಪಿಸಿದ ಎಎಸ್ಐ:</strong>ಮುಂಬೈನಿಂದ ರೈಲಿನ ಮೂಲಕ ಕಲಬುರ್ಗಿ ನಗರಕ್ಕೆ ಬಂದ ಮೂವರು ಮಹಿಳೆಯರು, ಇಬ್ಬರು ಪುರುಷರು ಆಟೊ ಸಂಚಾರವಿಲ್ಲದೇ ಇಲ್ಲಿನ ಎಸ್ವಿಪಿ ವೃತ್ತದಲ್ಲಿ ಕಾಯುತ್ತ ಕುಳಿತಿದ್ದರು. ಅವರೊಂದಿಗೆ ಮೂವರ ಪುಟಾಣಿ ಮಕ್ಕಳೂ ಇದ್ದರು.</p>.<p>ಇದನ್ನು ಕಂಡು ನಾಗರಿಕರೊಬ್ಬರು ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಠಾಣೆ ಎಎಸ್ಐ ಇನಾಮದಾರ್ ಅವರು ಪೊಲೀಸ್ ವಾಹನದಲ್ಲೇ ಮಹಿಳೆ, ಮಕ್ಕಳು ಹಾಗೂ ಪುರುಷರನ್ನು ಅವರ ಮನೆಗೆ ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>