<p><strong>ಕಲಬುರಗಿ:</strong> ನಗರದ ಸಿಟಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ₹2.92 ಲಕ್ಷ ಮೌಲ್ಯದ 3 ಕೆ.ಜಿ 650 ಗ್ರಾಂ ಗಾಂಜಾ ಹಾಗೂ ₹500 ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಕಲಬುರಗಿಯ ಬಾಪುನಗರದ ಮಾಂಗರವಾಡಿ ಪ್ರದೇಶದ ನಿವಾಸಿ, ಆಟೊ ಚಾಲಕ ಚಕ್ರದಾರಿ ಚಂಪಾಲಾಲ ಪಾಟೀಲ(34) ಬಂಧಿತ ಆರೋಪಿ.</p>.<p>ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಹಿಂಸೆಗೆ ತಿರುಗಿದ ವಾಗ್ವಾದ; ಯುವಕರ ಮೇಲೆ ಹಲ್ಲೆ</strong></p>.<p>ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ರಾಮನಗರದ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಲಾರಿ ತಡೆದು ಪರಿಶೀಲಿಸಿದ ಹಿಂದೂ ಪರ ಕಾರ್ಯಕರ್ತರ ಮೇಲೆ ಹಿಗ್ಗಾ–ಮುಗ್ಗಾ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.</p>.<p>ಅಫಜಲಪುರದ ಕಡೆಯಿಂದ ನಗರದ ಮೂಲಕ ಆಳಂದದತ್ತ ಹೊರಟಿದ್ದ ಗೋವುಗಳಿದ್ದ ಲಾರಿಯನ್ನು ರೋಹಿತ್, ಅನಿಲ ಎಂಬುವರು ಬುಧವಾರ ಸಂಜೆ ತಡೆದಿದ್ದರು. </p>.<p>‘ದಾಖಲಾತಿ ಜೊತೆಗೆ ಅನುಮತಿ ಪಡೆದು ದನಗಳನ್ನು ಸಾಗಿಸುತ್ತಿದ್ದ ಗಾಡಿ ತಡೆಯುತ್ತೀರಾ?’ ಎಂದು ಗೋವುಗಳನ್ನು ಸಾಗಿಸುತ್ತಿದ್ದ ಯುವಕರು ರೇಗಾಡಿದ್ದರು. ವಾಗ್ವಾದದೊಂದಿಗೆ ಆರಂಭವಾದ ಜಗಳ ಹಿಂಸೆಗೆ ತಿರುಗಿತ್ತು. ಬಳಿಕ ಕಟ್ಟಿಗೆಯಿಂದಲೂ ಹೊಡೆದಾಡಿಕೊಂಡಿದ್ದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.</p>.<p>ಹಲ್ಲೆಗೊಳಗಾದ ಯುವಕರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಸಬರ್ಬನ್ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.</p>.<p><strong>ಮಟ್ಕಾ ಜೂಜಾಟ: ಇಬ್ಬರ ಬಂಧನ</strong></p>.<p>ಕಲಬುರಗಿಯ ವಿವಿಧೆಡೆ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಇನ್ಸ್ಪೆಕ್ಟರ್ ಅರುಣಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.</p>.<p>ನಗರದ ಶೇಖರೋಜಾ ದರ್ಗಾ ಪ್ರದೇಶದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮಲ್ಲಿನಾಥ ಪೂಜಾರಿ(35) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆರೋಪಿಯಿಂದ ₹15,350 ವಶಕ್ಕೆ ಪಡೆದಿದ್ದಾರೆ.</p>.<p>ಆರೋಪಿ ಮಲ್ಲಿನಾಥ ದೇವಿನಗರ ಹನುಮಾನ ಕಾಲೊನಿ ನಿವಾಸಿ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮತ್ತೊಂದು ಪ್ರಕರಣದಲ್ಲಿ ಕೇಂದ್ರ ಬಸ್ ನಿಲ್ದಾಣ ಸಮೀಪದ ಎಲ್ಐಸಿ ಕಚೇರಿ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಶರಣಬಸಪ್ಪ ಕಾಳೆ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹10,020 ವಶಕ್ಕೆ ಪಡೆದಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಪಡಿತರ ಅಕ್ಕಿ ಜಪ್ತಿ</strong></p>.<p>ಕಲಬುರಗಿ ತಾಲ್ಲೂಕಿನ ಪಟ್ಟಣ ಟೋಲ್ ನಾಕಾ ಹತ್ತಿರ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿರುವ ಪೊಲೀಸರು, 23 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಈ ಸಂಬಂಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಪ್ರತ್ಯೇಕ ಪ್ರಕರಣ: ಚಿನ್ನಾಭರಣ ಕಳವು</p>.<p>ಕಲಬುರಗಿಯ ಹೊಸ ಬಿದ್ದಾಪುರ ಕಾಲೊನಿಯ ಜೈ ಹನುಮಾನ ಶಾಲೆ ಸಮೀಪದ ಮನೆಯ ಕೀಲಿ ಮುರಿದ ಕಳ್ಳರು ಚಿನ್ನ–ಬೆಳ್ಳಿ ಆಭರಣ, ನಗದು ಕದ್ದು ಪರಾರಿಯಾಗಿದ್ದಾರೆ.</p>.<p>ಖಾಸಗಿ ಶಾಲೆ ಶಿಕ್ಷಕಿ ಗೀತಾ ಕ್ಷತ್ರಿ ನಗ–ನಾಣ್ಯ ಕಳೆದುಕೊಂಡ ಮಹಿಳೆ.</p>.<p>‘ಒಟ್ಟು 70 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳು, ₹50 ಸಾವಿರ ನಗದು ಕಳುವಾಗಿದೆ’ ಎಂದು ಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p>.<p>ಕಲಬುರಗಿಯ ಸೇಡಂ ರಸ್ತೆಯ ಸಿದ್ಧೇಶ್ವರ ಕಾಲೊನಿಯಲ್ಲಿ ಮನೆಯೊಂದ ಕೀಲಿ ಮುರಿದ ಕಳ್ಳರು ಅಲ್ಮೇರಾದಲ್ಲಿದ್ದ 20 ಗ್ರಾಂ ಚಿನ್ನಾಭರಣ, ₹40 ಸಾವಿರ ನಗದು ಹಾಗೂ ಒಂದು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.</p>.<p>ಮಹಾದೇವಿ ವಿರಕ್ತಮಠ ಚಿನ್ನಾಭರಣ, ನಗದು ಕಳೆದುಕೊಂಡವರು. ಒಬ್ಬರೆ ನೆಲೆಸಿರುವ ಮಹಾದೇವಿ ಸಂಬಂಧಿಕರೊಂದಿಗೆ ತಾಂಡೂರಿಗೆ ಮದುವೆ ಹೋಗಿ ಬರುವಷ್ಟರಲ್ಲಿ ಕಳವು ನಡೆದಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಸಿಟಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ₹2.92 ಲಕ್ಷ ಮೌಲ್ಯದ 3 ಕೆ.ಜಿ 650 ಗ್ರಾಂ ಗಾಂಜಾ ಹಾಗೂ ₹500 ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಕಲಬುರಗಿಯ ಬಾಪುನಗರದ ಮಾಂಗರವಾಡಿ ಪ್ರದೇಶದ ನಿವಾಸಿ, ಆಟೊ ಚಾಲಕ ಚಕ್ರದಾರಿ ಚಂಪಾಲಾಲ ಪಾಟೀಲ(34) ಬಂಧಿತ ಆರೋಪಿ.</p>.<p>ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಹಿಂಸೆಗೆ ತಿರುಗಿದ ವಾಗ್ವಾದ; ಯುವಕರ ಮೇಲೆ ಹಲ್ಲೆ</strong></p>.<p>ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ರಾಮನಗರದ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಲಾರಿ ತಡೆದು ಪರಿಶೀಲಿಸಿದ ಹಿಂದೂ ಪರ ಕಾರ್ಯಕರ್ತರ ಮೇಲೆ ಹಿಗ್ಗಾ–ಮುಗ್ಗಾ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.</p>.<p>ಅಫಜಲಪುರದ ಕಡೆಯಿಂದ ನಗರದ ಮೂಲಕ ಆಳಂದದತ್ತ ಹೊರಟಿದ್ದ ಗೋವುಗಳಿದ್ದ ಲಾರಿಯನ್ನು ರೋಹಿತ್, ಅನಿಲ ಎಂಬುವರು ಬುಧವಾರ ಸಂಜೆ ತಡೆದಿದ್ದರು. </p>.<p>‘ದಾಖಲಾತಿ ಜೊತೆಗೆ ಅನುಮತಿ ಪಡೆದು ದನಗಳನ್ನು ಸಾಗಿಸುತ್ತಿದ್ದ ಗಾಡಿ ತಡೆಯುತ್ತೀರಾ?’ ಎಂದು ಗೋವುಗಳನ್ನು ಸಾಗಿಸುತ್ತಿದ್ದ ಯುವಕರು ರೇಗಾಡಿದ್ದರು. ವಾಗ್ವಾದದೊಂದಿಗೆ ಆರಂಭವಾದ ಜಗಳ ಹಿಂಸೆಗೆ ತಿರುಗಿತ್ತು. ಬಳಿಕ ಕಟ್ಟಿಗೆಯಿಂದಲೂ ಹೊಡೆದಾಡಿಕೊಂಡಿದ್ದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.</p>.<p>ಹಲ್ಲೆಗೊಳಗಾದ ಯುವಕರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಸಬರ್ಬನ್ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.</p>.<p><strong>ಮಟ್ಕಾ ಜೂಜಾಟ: ಇಬ್ಬರ ಬಂಧನ</strong></p>.<p>ಕಲಬುರಗಿಯ ವಿವಿಧೆಡೆ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಇನ್ಸ್ಪೆಕ್ಟರ್ ಅರುಣಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.</p>.<p>ನಗರದ ಶೇಖರೋಜಾ ದರ್ಗಾ ಪ್ರದೇಶದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮಲ್ಲಿನಾಥ ಪೂಜಾರಿ(35) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆರೋಪಿಯಿಂದ ₹15,350 ವಶಕ್ಕೆ ಪಡೆದಿದ್ದಾರೆ.</p>.<p>ಆರೋಪಿ ಮಲ್ಲಿನಾಥ ದೇವಿನಗರ ಹನುಮಾನ ಕಾಲೊನಿ ನಿವಾಸಿ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮತ್ತೊಂದು ಪ್ರಕರಣದಲ್ಲಿ ಕೇಂದ್ರ ಬಸ್ ನಿಲ್ದಾಣ ಸಮೀಪದ ಎಲ್ಐಸಿ ಕಚೇರಿ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಶರಣಬಸಪ್ಪ ಕಾಳೆ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹10,020 ವಶಕ್ಕೆ ಪಡೆದಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಪಡಿತರ ಅಕ್ಕಿ ಜಪ್ತಿ</strong></p>.<p>ಕಲಬುರಗಿ ತಾಲ್ಲೂಕಿನ ಪಟ್ಟಣ ಟೋಲ್ ನಾಕಾ ಹತ್ತಿರ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿರುವ ಪೊಲೀಸರು, 23 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಈ ಸಂಬಂಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಪ್ರತ್ಯೇಕ ಪ್ರಕರಣ: ಚಿನ್ನಾಭರಣ ಕಳವು</p>.<p>ಕಲಬುರಗಿಯ ಹೊಸ ಬಿದ್ದಾಪುರ ಕಾಲೊನಿಯ ಜೈ ಹನುಮಾನ ಶಾಲೆ ಸಮೀಪದ ಮನೆಯ ಕೀಲಿ ಮುರಿದ ಕಳ್ಳರು ಚಿನ್ನ–ಬೆಳ್ಳಿ ಆಭರಣ, ನಗದು ಕದ್ದು ಪರಾರಿಯಾಗಿದ್ದಾರೆ.</p>.<p>ಖಾಸಗಿ ಶಾಲೆ ಶಿಕ್ಷಕಿ ಗೀತಾ ಕ್ಷತ್ರಿ ನಗ–ನಾಣ್ಯ ಕಳೆದುಕೊಂಡ ಮಹಿಳೆ.</p>.<p>‘ಒಟ್ಟು 70 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳು, ₹50 ಸಾವಿರ ನಗದು ಕಳುವಾಗಿದೆ’ ಎಂದು ಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p>.<p>ಕಲಬುರಗಿಯ ಸೇಡಂ ರಸ್ತೆಯ ಸಿದ್ಧೇಶ್ವರ ಕಾಲೊನಿಯಲ್ಲಿ ಮನೆಯೊಂದ ಕೀಲಿ ಮುರಿದ ಕಳ್ಳರು ಅಲ್ಮೇರಾದಲ್ಲಿದ್ದ 20 ಗ್ರಾಂ ಚಿನ್ನಾಭರಣ, ₹40 ಸಾವಿರ ನಗದು ಹಾಗೂ ಒಂದು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.</p>.<p>ಮಹಾದೇವಿ ವಿರಕ್ತಮಠ ಚಿನ್ನಾಭರಣ, ನಗದು ಕಳೆದುಕೊಂಡವರು. ಒಬ್ಬರೆ ನೆಲೆಸಿರುವ ಮಹಾದೇವಿ ಸಂಬಂಧಿಕರೊಂದಿಗೆ ತಾಂಡೂರಿಗೆ ಮದುವೆ ಹೋಗಿ ಬರುವಷ್ಟರಲ್ಲಿ ಕಳವು ನಡೆದಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>