<p><strong>ಕಲಬುರಗಿ</strong>: ಚಿತ್ತಾಪುರ ತಾಲ್ಲೂಕಿನ ಶಕ್ತಿಪೀಠ ಸನ್ನತಿಯ ಚಂದ್ರಲಾ ಪರಮೇಶ್ವರಿ ಕ್ಷೇತ್ರಕ್ಕೆ ಕಲಬುರಗಿಯಿಂದ ನೇರವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ್ ಅವರಿಗೆ ಭಕ್ತರ ನಿಯೋಗದಿಂದ ಮನವಿ ಪತ್ರ ಸಲ್ಲಿಸಲಾಯಿತು.</p>.<p>ಇತಿಹಾಸ ಪ್ರಸಿದ್ಧ ಸನ್ನತಿಗೆ ಬಸ್ ಸೌಲಭ್ಯವೇ ಇಲ್ಲ. ಕೇವಲ ರಾತ್ರಿ ವಸ್ತಿ ಬಸ್ ಬಿಟ್ಟರೆ ಬಸ್ ಸೌಕರ್ಯವೇ ಇಲ್ಲ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಕಲಬುರಗಿ ಕೇಂದ್ರ ಸ್ಥಾನದಿಂದ ಬೆಳಿಗ್ಗೆ 8ಕ್ಕೆ ಬಸ್ ಸಂಚಾರ ಆರಂಭಿಸಬೇಕು ಎಂದು ಕೋರಿದರು.</p>.<p>ಮನವಿಗೆ ಸ್ಪಂದಿಸಿದ ತೆಲ್ಕೂರ ಎರಡು ದಿನಗಳಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.</p>.<p>ಈ ವೇಳೆ ಚಂದ್ರಲಾಂಬಾ ಸೇವಾ ಸಮಿತಿ ಅಧ್ಯಕ್ಷ ಬಿಂದುರಾವ್ ಶಿರವಾಳ, ಚಂದ್ರಕಾಂತ ಯರಗೋಳ, ಮೋಹನರಾವ್ ಮಾರಡಗಿ, ವೆಂಕಟೇಶ್ ಮಳ್ಳಿ, ರಾಘವೇಂದ್ರ ಕುಲಕರ್ಣಿ, ಕೊಪ್ರೇಶ ದೇಶಪಾಂಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಚಿತ್ತಾಪುರ ತಾಲ್ಲೂಕಿನ ಶಕ್ತಿಪೀಠ ಸನ್ನತಿಯ ಚಂದ್ರಲಾ ಪರಮೇಶ್ವರಿ ಕ್ಷೇತ್ರಕ್ಕೆ ಕಲಬುರಗಿಯಿಂದ ನೇರವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ್ ಅವರಿಗೆ ಭಕ್ತರ ನಿಯೋಗದಿಂದ ಮನವಿ ಪತ್ರ ಸಲ್ಲಿಸಲಾಯಿತು.</p>.<p>ಇತಿಹಾಸ ಪ್ರಸಿದ್ಧ ಸನ್ನತಿಗೆ ಬಸ್ ಸೌಲಭ್ಯವೇ ಇಲ್ಲ. ಕೇವಲ ರಾತ್ರಿ ವಸ್ತಿ ಬಸ್ ಬಿಟ್ಟರೆ ಬಸ್ ಸೌಕರ್ಯವೇ ಇಲ್ಲ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಕಲಬುರಗಿ ಕೇಂದ್ರ ಸ್ಥಾನದಿಂದ ಬೆಳಿಗ್ಗೆ 8ಕ್ಕೆ ಬಸ್ ಸಂಚಾರ ಆರಂಭಿಸಬೇಕು ಎಂದು ಕೋರಿದರು.</p>.<p>ಮನವಿಗೆ ಸ್ಪಂದಿಸಿದ ತೆಲ್ಕೂರ ಎರಡು ದಿನಗಳಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.</p>.<p>ಈ ವೇಳೆ ಚಂದ್ರಲಾಂಬಾ ಸೇವಾ ಸಮಿತಿ ಅಧ್ಯಕ್ಷ ಬಿಂದುರಾವ್ ಶಿರವಾಳ, ಚಂದ್ರಕಾಂತ ಯರಗೋಳ, ಮೋಹನರಾವ್ ಮಾರಡಗಿ, ವೆಂಕಟೇಶ್ ಮಳ್ಳಿ, ರಾಘವೇಂದ್ರ ಕುಲಕರ್ಣಿ, ಕೊಪ್ರೇಶ ದೇಶಪಾಂಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>