ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ಬರೀ ಚಾರಾಣೆ ಬೆಳಿ ಉಳದೈತಿ: ನಿಖಿಲ್‌ ಕುಮಾರಸ್ವಾಮಿ

ನಿಖಿಲ್‌ ಕುಮಾರಸ್ವಾಮಿ ಜೊತೆಗಿನ ಸಂವಾದದಲ್ಲಿ ಸಂಕಷ್ಟ ತೋಡಿಕೊಂಡ ಅನ್ನದಾತರು
Published : 16 ಸೆಪ್ಟೆಂಬರ್ 2025, 6:27 IST
Last Updated : 16 ಸೆಪ್ಟೆಂಬರ್ 2025, 6:27 IST
ಫಾಲೋ ಮಾಡಿ
Comments
1972ರಲ್ಲಿ ತೀವ್ರ ಬರದಿಂದ ಜಿಲ್ಲೆಯ ರೈತರು ಹಾನಿ ಅನುಭವಿಸಿದ್ದರು. ಈಗ 2025ರಲ್ಲಿ ಅತಿವೃಷ್ಟಿಯಿಂದ ಅದಕ್ಕೂ ಹೆಚ್ಚಿನ ಹಾನಿಯಾಗಿದೆ. ಬರೀ ರೈತರಲ್ಲ ಕಾಳಿನ ವ್ಯಾಪಾರಿಗಳು ಅದನ್ನು ತುಂಬುವ ಹಮಾಲರೂ ಸಂಕಷ್ಟಕ್ಕೀಡಾಗಿದ್ದಾರೆ
ಬಸವರಾಜ ತಡಕಲ್ ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯ
ರಸ್ತೆಯಿಂದ ನೋಡಿದರೆ ಶೇ 25ರಷ್ಟು ಬೆಳೆ ಹಾನಿ ಕಾಣಿಸುತ್ತಿದೆ. ಹೊಲದಲ್ಲಿ ಇಳಿದರೆ ಶೇ 60ರಷ್ಟು ನಷ್ಟ ಗೋಚರಿಸುತ್ತಿದೆ. ರೈತರ ಸರಣಿ ಆತ್ಮಹತ್ಯೆ ಸಂಭವಿಸುವ ಮುನ್ನ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು
ಸಂತೋಷ ಲಂಗರ್‌ ಎಪಿಎಂಸಿ ವರ್ತಕ
‘ಉಸಿರಿರುವ ತನಕ ರೈತರ ಧ್ವನಿ’
ರೈತರ ಸಂಕಷ್ಟ ಆಲಿಸಿದ ನಿಖಿಲ್‌ ಕುಮಾರಸ್ವಾಮಿ ‘ವೇದಿಕೆಗಳಲ್ಲಿ ರೈತರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಬರೀ ಕೇಂದ್ರದಲ್ಲಿ ಸಚಿವರಾದ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಬಳಿ ಪರಿಹಾರ ಕೇಳಲಿ ಎಂದು ಟೀಕಿಸುತ್ತಾರೆ. ಕೇಂದ್ರದಲ್ಲಿ ಕುಮಾರಸ್ವಾಮಿ ಅವರೇನೂ ಕೃಷಿ ಸಚಿವರಾ? ಆದರೂ ಕುಮಾರಸ್ವಾಮಿ ಅವರು ನಿರಂತರವಾಗಿ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಸಚಿವ ಸ್ಥಾನದಲ್ಲಿ ಇರಲಿ–ಬಿಡಲಿ ಅಧಿಕಾರದಲ್ಲಿ ಇರಲಿ–ಬಿಡಲಿ ಹಿಂದಿನಂತೆಯೇ ದೇವೇಗೌಡರ ಕುಟುಂಬ ಕೊನೆಯ ಉಸಿರು ಇರುವ ತನಕ ರೈತರ ಪರವಾಗಿ ಧ್ವನಿ ಎತ್ತು ಕೆಲಸ ಮಾಡಲಿದೆ’ ಎಂದರು. ಫೋನ್‌ ಮೂಲಕ ಎಚ್‌ಡಿಕೆ ಭರವಸೆ ಬಳಿಕ ನಿಖಿಲ್‌ ಕುಮಾರಸ್ವಾಮಿ ದೂರವಾಣಿ ಮೂಲಕ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರೈತರೊಂದಿಗೆ ಮಾತನಾಡಿಸಿದರು. ‘ಕಲಬುರಗಿಯ ಮಹಾಜನತೆ ರೈತ ಬಂಧುಗಳಿಗೆ ನಮಸ್ಕಾರ. ನಿಮ್ಮೆಲ್ಲರ ಸಂಕಷ್ಟ ನಾನು ಗಮನಿಸುತ್ತಿರುವೆ. ಬೆಳೆ ಹಾನಿಯಾದ ಬಗೆಗೆ ಒಂದು ಮನವಿ ಪತ್ರ ಕಳುಹಿಸಿಕೊಡಿ. ನಾನು ಪ್ರಧಾನಿ ಅವರನ್ನೊ ಇಲ್ಲವೇ ಗೃಹ ಸಚಿವರನ್ನೊ ಭೇಟಿ ಮಾಡಿ ಆರ್ಥಿಕ ನೆರವು ಒದಗಿಸಲು ಪ್ರಯತ್ನಿಸುವೆ’ ಎಂದು ಕುಮಾರಸ್ವಾಮಿ ಅವರು ಫೋನ್‌ ಮೂಲಕ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT